![Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್ ಜಾಲತಾಣಗಳಲ್ಲಿ ವೈರಲ್!](https://www.udayavani.com/wp-content/uploads/2024/07/rishi-sunak-1-415x277.jpg)
ಎಡಬಿಡದೇ ಸುರಿದ ಮಳೆ-ಬಣಗುಡುತ್ತಿವೆ ರಸ್ತೆ
Team Udayavani, Jul 10, 2022, 3:51 PM IST
![14road](https://www.udayavani.com/wp-content/uploads/2022/07/14road-620x387.jpg)
ಆಳಂದ: ಜೂನ್ ತಿಂಗಳಲ್ಲೇ ಬರಬೇಕಾಗಿದ್ದ ಮಳೆ ಕಳೆದ ಮೂರು ದಿನಗಳಿಂದ ಎಡೆಬಿಡದೇ ಸುರಿಯತೊಡಗಿದ್ದರಿಂದ ಕೃಷಿ, ವ್ಯಾಪಾರ, ವಹಿವಾಟಿಗೆ ಅಡ್ಡಿಯಾಗಿದೆ.
ಜಿಲ್ಲಾಧಿಕಾರಿಗಳು ಶನಿವಾರ ಶಾಲೆ, ಕಾಲೇಜಿಗೆ ರಜೆ ಘೋಷಿಸಿದ್ದಾರೆ. ಜನಜೀವನ ಜತೆಗೆ ಬಿತ್ತನೆಗೆ ಅಡ್ಡಿಯಾಗಿದೆ. ಇದರ ಜತೆಯಲ್ಲಿ ಜಾನುವಾರುಗಳಿಗೂ ಮೇಯಲು ಹೋಗದಂತಾಗಿದೆ. ಬಿತ್ತನೆ ಕೈಗೊಳ್ಳಲು ಮುಂದಾದವರಿಗೆ ದಿನದೊಡುವಂತೆ ಮಾಡಿದೆ.
ಶನಿವಾರ ಬೆಳಗ್ಗೆಯಿಂದಲೂ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಸಂಜೆಗೆ ಬಿರುಸುಗೊಂಡಿದೆ. ಇದರಿಂದ ಪಟ್ಟಣದಲ್ಲೆಡೆ ಚರಂಡಿಗಳು ತುಂಬಿ ಹರಿದಿವೆ. ರಸ್ತೆ ಮೇಲೆ ನೀರು ನಿಂತ ಪರಿಣಾಮ ಜನಸಂಚಾರಕ್ಕೆ ಪರದಾಡಿದರು.
ತಾಲೂಕಿನ ಸಾಲೆಗಾಂವ್, ಖಜೂರಿ, ನಿರಗುಡಿ, ವಿಕೆ, ಸಲಗರ, ಮಾದನಹಿಪ್ಪರಗಾ ಚಿಂಚೋಳಿ ಬಿ.ಮಡಕಿ ಸೇರಿದಂತೆ ಮೊದಲಾದ ಕಡೆ ಮಳೆಯಿಂದ ಅಸ್ತವ್ಯಸ್ತವಾಗಿದೆ. ತಾಲೂಕಿನ ಆಳಂದ ವಲಯಕ್ಕೆ 27 ಮಿ.ಮೀ, ನಿಂಬರಗಾ ವಲಯಕ್ಕೆ 33 ಮಿ.ಮೀ, ಕೋರಳ್ಳಿ 35 ಮಿ.ಮೀ, ಮಾದನಹಿಪ್ಪರಗಾ 22 ಮಿ.ಮೀ, ಸರಸಂಬಾ 42 ಮಿ.ಮೀ, ನರೋಣಾ 19.5 ಮಿ.ಮೀ, ಖಜೂರಿ 28.3 ಮಿ.ಮೀ. ಮಳೆಯಾಗಿದೆ. ಜೂನ್ ಕೊನೆ ವಾರದವರೆಗೆ ಬಿತ್ತನೆಗೆ ಪೂರಕವಾಗದ ಮಳೆಯಿಂದಾಗಿ ಜುಲೈ 1ರಂದು ಅಲ್ಲಲ್ಲಿ ಸುರಿದ ಮಳೆಯಿಂದ ಹೆಚ್ಚು ಕಡಿಮೆ ಐದು ದಿನಗಳಲ್ಲಿ ಶೇ. 30 ಬಿತ್ತನೆ ನಡೆದಿದೆ.
ಜೂನ್ ತಿಂಗಳಲ್ಲಿ ಶೇ.10, ಜುಲೈ ಆರಂಭದಲ್ಲಿ ಶೇ. 30 ಸೇರಿ ಶೇ. 40 ಬಹುತೇಕ ಬಿತ್ತನೆಯಾಗಿದ್ದು ಮಳೆ ಸುರಿಯುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಇದುವರೆಗೂ ಸುರಿದ ಮಳೆಯಿಂದ ಯಾವುದೇ ಜೀವಹಾನಿ ಸೇರಿದಂತೆ ಮನೆಗಳು ಕುಸಿದು ಬಿದ್ದ ಬಗ್ಗೆ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
![Akshata Murty: ಅಕ್ಷತಾ ಮೂರ್ತಿಯ 43 ಸಾವಿರ ರೂ. ಗೌನ್ ಜಾಲತಾಣಗಳಲ್ಲಿ ವೈರಲ್!](https://www.udayavani.com/wp-content/uploads/2024/07/rishi-sunak-1-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್](https://www.udayavani.com/wp-content/uploads/2024/07/alok-1-150x83.jpg)
Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್
![Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ](https://www.udayavani.com/wp-content/uploads/2024/07/unnamed-file-150x83.jpg)
Kalaburagi; ರಾಮಮಂದಿರ ಹಾಡಿಗೆ ಡಾನ್ಸ್ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ
![Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/WADI-150x75.jpg)
Wadi ಬಿಸಿಯೂಟ ಸೇವಿಸಿ 33 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
![KKRDB Meeting: ಕಲ್ಯಾಣ ಕರ್ನಾಟಕ ಭಾಗದ ಸಚಿವರು- ಶಾಸಕರು ಭಾಗಿ](https://www.udayavani.com/wp-content/uploads/2024/07/KKRDB-150x83.jpg)
KKRDB Meeting: ಕಲ್ಯಾಣ ಕರ್ನಾಟಕ ಭಾಗದ ಸಚಿವರು- ಶಾಸಕರು ಭಾಗಿ
![basavaraj rayareddy](https://www.udayavani.com/wp-content/uploads/2024/07/rayareddy-150x83.jpg)
Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.