ಬಾನಲ್ಲಿ ಸೂರ್ಯ ವಿಸ್ಮಯ “ಹ್ಯಾಲೋ ರಿಂಗ್’
Team Udayavani, Jun 3, 2021, 8:33 PM IST
ಶಹಾಬಾದ: ತಾಲೂಕಿನ ಬಾನಂಗಳದಲ್ಲಿ ಬುಧವಾರ ಬೆಳಗ್ಗೆ ಕಂಡು ಬಂದ ಸೂರ್ಯ ವಿಸ್ಮಯಕ್ಕೆ ಬೇರೆಯದೇ ಕಾರಣವಿದೆ. ಈ ಉಂಗುರವನ್ನು “ಹ್ಯಾಲೋ ರಿಂಗ್’ ಎಂದು ಕರೆಯುತ್ತಾರೆ. ಹೆಚ್ಚಾಗಿ ಇದು ಮಳೆಗಾಲ ಮುಗಿಯುವ ಸಂದರ್ಭ ಅಥವಾ ಮಳೆಗಾಲದ ಆರಂಭದಲ್ಲಿ ಮೂಡುತ್ತದೆ. ಮಳೆಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸಂಭವಿಸುವ ವೈಜ್ಞಾನಿಕ ವಿದ್ಯಮಾನವಿದು.
ಸೂರ್ಯನ ಕಿರಣಗಳು ಈ ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬಿದ್ದು, ವಕ್ರೀಭವನ ಉಂಟಾಗಿ ಇಂಥ ವಿಸ್ಮಯಕಾರಿ ಉಂಗುರ ಸೃಷ್ಟಿಯಾಗುತ್ತದೆ. ಇದನ್ನು 22 ಡಿಗ್ರಿ ಹ್ಯಾಲೋಸ್ ಎಂದು ಕರೆಯುತ್ತಾರೆ. ಇದಕ್ಕೆ ಸೂರ್ಯನ ಕೊಡೆ ಎಂದೂ ಕರೆಯುತ್ತಾರೆ. ಇಂಗ್ಲಿಷನಲ್ಲಿ “ಡಿಫ್ರಾಕ್ಷನ್ ಹ್ಯಾಲೋ’ ಎನ್ನುತ್ತಾರೆ. ಮಳೆ ಬರುವ ಸೂಚನೆಯಿದು ಎಂದು ವಿಶ್ಲೇಷಿಸುತ್ತಾರೆ.
ಭೂ ಮಟ್ಟದಿಂದ ಸುಮಾರು ಆರು ಅಥವಾ ಏಳು ಕಿ.ಮೀ ಎತ್ತರದಲ್ಲಿ ಹಿಮದ ಹರಳುಗಳು ಸೃಷ್ಟಿ ಆಗುತ್ತವೆ. ಸೂರ್ಯನ ಬೆಳಕು ಈ ಹರಳುಗಳ ಮೂಲಕ ಹಾಯ್ದು ಬರುವಾಗ ಬೆಳಕಿನ ಪ್ರತಿಫಲನದಿಂದ ನಮಗೆ ಈ ಅದ್ಭುತ ವೃತ್ತ ಕಾಣಿಸುತ್ತದೆ. ಇದೊಂದು ಪ್ರಕೃತಿಯ ಸುಂದರ ವಿದ್ಯಮಾನ ಎಂದು ಕಲಬುರಗಿ ವಿಜ್ಞಾನ ಕೇಂದ್ರದ ಅಧಿ ಕಾರಿ ಲಕ್ಷಿ ನಾರಾಯಣ ತಿಳಿಸಿದ್ದಾರೆ.
ತಿಳಿ ಆಗಸದಲ್ಲಿ ಸೂರ್ಯನ ಸುತ್ತ ಬೆಳಗ್ಗೆ 12ಗಂಟೆ ಸುಮಾರಿಗೆ ಕಾಮನಬಿಲ್ಲು ಗೋಚರಿಸಿತ್ತು. ಸೌರ ಪ್ರಭೆ ಎಂದು ಗುರುತಿಸಲಾದ ಇದು ನಮ್ಮ ವಾತಾವರಣದಲ್ಲಿ 20,000 ಅಡಿಗಳ ಮೇಲಿರುವ ಉಂಗುರಾಕಾರದ ಸಿರರ್ಸ್ ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳು ಸೂರ್ಯನ ಬೆಳಕಿನ ಕಿರಣಗಳನ್ನು ವಕ್ರೀಭವಿಸುವುದರಿಂದ ಆಗುವ ವಿದ್ಯಮಾನ ಎಂದು ಲಕ್ಷಿ¾à ನಾರಾಯಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ
Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.