Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!
Team Udayavani, Oct 4, 2024, 6:55 AM IST
ಕಲಬುರಗಿ: ರಾಜ್ಯದಲ್ಲಿ ಒಳಪಂಗಡ, ಅಂತರ್ಜಾತಿ ಹಾಗೂ ದೇವದಾಸಿ ಮಕ್ಕಳ ಮದುವೆಗೆ ಅನುದಾನ ಕೊರತೆಯಿಂದಾಗಿ ಪೋತ್ಸಾಹಧನ ಸಿಗುತ್ತಿಲ್ಲ. ಹೀಗಾಗಿ ನವವಿವಾಹಿತರು ಒಂದೆಡೆ ಸಮಾಜ-ಹೆತ್ತವರು ಕೊನೆಗೆ ಸರಕಾರದಿಂದಲೂ ತಿರಸ್ಕಾರಕ್ಕೊಳಗಾದ ಪ್ರಸಂಗ ಎದುರಾಗಿದೆ.
ಕಳೆದ ನಾಲ್ಕು ವರ್ಷಗಳಿಂದ 38,524 ಜೋಡಿಗಳು ಪ್ರೋತ್ಸಾಹಧನಕ್ಕಾಗಿ ಕಾಯ್ದು ಕುಳಿತಿದ್ದಾರೆ. ಇನ್ನೊಂದೆಡೆ ಮಕ್ಕಳಾಗಿದ್ದರೂ ಇನ್ನೂವರೆಗೂ ಸಾಮಾಜಿಕ ಕಟ್ಟುಪಾಡು, ಕೌಟುಂಬಿಕ ಹಗೆತನ ಮತ್ತು ಆರ್ಥಿಕ ಪರಿಸ್ಥಿತಿ ಯಾವುದೂ ಸುಧಾರಣೆ ಕಂಡಿಲ್ಲ. ಹೀಗಾಗಿ ಸರಕಾರದ ಯೋಜನೆ ಪ್ರಯೋಜನವಾಗುವ ಬದಲು ಹೊರೆಯಾಗಿ ಪರಿಣಮಿಸುತ್ತಿದೆ.
ವಿಲೇವಾರಿ ಆಗುತ್ತಿಲ್ಲ
ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದಲ್ಲೂ ಸೂಕ್ತ ಪ್ರೋತ್ಸಾಹ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾದ ಮೇಲೆ ಎಲ್ಲವೂ ಸರಿ ಹೋದೀತು ಎಂದು ಆಸೆ ಇಟ್ಟುಕೊಂಡಿದ್ದವರಿಗೆ ಭ್ರಮನಿರಸನವಾಗಿದೆ. ಗ್ಯಾರಂಟಿ ಯಿಂದಾಗಿ ಇಲಾಖಾವಾರು ಅನುದಾನ ಸಮರ್ಪಕವಾಗಿ ಬಿಡುಗಡೆಯಾಗದೆ ವಿವಾಹಿತರಿಗೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಅಂತರ್ಜಾತಿ ವಿವಾಹ ಆದವರಿಗೆ 3ಲಕ್ಷ ರೂ., ಒಳಪಂಗಡ ಮದುವೆಗೆ 2ಲಕ್ಷ ರೂ. ಹಾಗೂ ದೇವದಾಸಿ ಮಕ್ಕಳ ಮದುವೆಗೆ 5ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಒಳಪಂಗಡದಲ್ಲಿ ವಿವಾಹವಾದವರದ್ದು 2697 ಅರ್ಜಿ, ಅಂತರ್ಜಾತಿ ವಿವಾಹವಾದವರದ್ದು 30,453 ಅರ್ಜಿ ಹಾಗೂ ದೇವದಾಸಿ ಮಕ್ಕಳನ್ನು ಮದುವೆಯಾದವರದ್ದು 5374 ಅರ್ಜಿಗಳಿವೆ. ಇದಲ್ಲದೆ, ವಿವಾಹಕ್ಕೆ ಬೇಕಾದ ಸಮರ್ಪಕವಾಗಿ ದಾಖಲೆಗಳನ್ನು ನೀಡಿಲ್ಲ ಎನ್ನುವ ಕಾರಣಕ್ಕೆ ಮೂರು ವಿಭಾಗದಲ್ಲಿ ಒಟ್ಟು 6456 ಅರ್ಜಿಗಳನ್ನು ಪೆಂಡಿಂಗ್ ಇಡಲಾಗಿದೆ. ಇದಲ್ಲದೆ, 1433 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮದುವೆಗೂ ಮುನ್ನ ಆಧಾರ್ ಕಾರ್ಡ್ದಲ್ಲಿ ತಂದೆ ಹೆಸರು ತೆಗೆಸಬೇಕು ಎನ್ನುವುದು ಅಧಿಕಾರಿಗಳ ಇತ್ತೀಚಿನ ವಾದವಾಗಿದ್ದು, ಇದು ವಿವಾದದ ಸ್ವರೂಪ ಪಡೆದಿದೆ.
ಜಿಲ್ಲಾವಾರು ಅರ್ಜಿಗಳ ವಿವರ
ಕಲಬುರಗಿ 1956, ಬಾಗಲಕೋಟೆ 1158, ರಾಯಚೂರು 1126, ಬಳ್ಳಾರಿ 1128, ಕೊಪ್ಪಳ 1021, ವಿಜಯನಗರ 1016, ವಿಜಯಪುರ 1012, ಬೆಳಗಾವಿ 1970, ಗದಗ 700, ಯಾದಗಿರಿ 398, ದಾವಣಗೆರೆ 1464, ಧಾರವಾಡ 1407, ಹಾವೇರಿ 936, ಚಿತ್ರದುರ್ಗ 1044, ಬೆಂಗಳೂರು 5655, ಬೆಂಗಳೂರು ಗ್ರಾಮಾಂತರ 1205, ಬೀದರ್ 395, ಚಿಕ್ಕಮಗಳೂರು 1229, ದಕ್ಷಿಣ ಕನ್ನಡ 276, ತುಮಕೂರು 1716, ಮೈಸೂರು 1880, ಉತ್ತರ ಕನ್ನಡ 686, ಚಿಕ್ಕಬಳ್ಳಾಪುರ 869, ಕೊಡಗು 470, ಉಡುಪಿ 316, ಶಿವಮೊಗ್ಗ 2010, ಮಂಡ್ಯ 1109, ಕೋಲಾರ 1340, ರಾಮನಗರ 1049, ಹಾಸನ 1572, ಚಾಮರಾಜನಗರದಲ್ಲಿ 403 ಅರ್ಜಿಗಳನ್ನು ಸಲ್ಲಿಸಲಾಗಿದೆ.
-ಸೂರ್ಯಕಾಂತ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!
Kalaburagi: 77 ಪರೀಕ್ಷೆ ಬರೆದ ಕನ್ನಡ ಶಿಕ್ಷಕನಿಂದ ವಿಶ್ವದಾಖಲೆ!
Chincholi: ಬಟ್ಟೆ ಒಗೆಯುವ ವೇಳೆ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ
Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ
Aland: ನಿಂಬರ್ಗಾ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆಯಿಂದ 160 ಮಂದಿ ಅಸ್ವಸ್ಥ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.