ಮಹಿಳೆ ತಂಟೆಗೆ ಹೋದರೆ ಶಾಕ್‌ ಹೊಡೆಸುತ್ತೆ ಚಪ್ಪಲಿ!

ಟ್ರ್ಯಾಕ್‌ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ

Team Udayavani, Dec 15, 2022, 10:25 AM IST

ಮಹಿಳೆ ತಂಟೆಗೆ ಹೋದರೆ ಶಾಕ್‌ ಹೊಡೆಸುತ್ತೆ ಚಪ್ಪಲಿ!

ಕಲಬುರಗಿ: ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ, ಕೊಲೆಯಂತಹ ದಾಳಿಗಳನ್ನು ಆರಂಭಿಕವಾಗಿ ಹತ್ತಿಕ್ಕುವ ಅಥವಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನಗರದ ಬಾಲಕಿಯೊಬ್ಬಳು ವಿಶೇಷ ಸಾಧನ ಕಂಡುಹಿಡಿದಿದ್ದಾಳೆ.

ನಗರದ ಎಸ್‌.ಆರ್‌.ಎನ್‌. ಮೆಹತಾ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿಜಯಲಕ್ಷ್ಮೀ ಬಿರಾದಾರ ತಯಾರು ಮಾಡಿರುವ ಸಾಧನ ಈಗ ರಾಜ್ಯ- ದೇಶವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ವಿದೇಶದಲ್ಲಿ ಈ ಸಾಧನ ಪ್ರಸ್ತುತಪಡಿಸಲು ಆಹ್ವಾನವೂ ಬಂದಿದೆ. 2023ರ ಜನವರಿಯಲ್ಲಿ ನಡೆಯುವ ಸೈನ್ಸ್‌ ಫೇರ್‌ನಲ್ಲಿ ಪ್ರದರ್ಶನವಾಗಲಿದೆ.

ಏನಿದು ಸಾಧನ ಸದ್ಯ ಭಾರತ ಸೇರಿದಂತೆ ಜಗತ್ತಿನ ಮಹಿಳೆಯರನ್ನು ಕಾಡುವ ಬೀದಿ ಕಾಮಣ್ಣರಿಗೆ ಶಿಕ್ಷೆ ನೀಡುವ ಸಾಧನ ಇದಾಗಿದೆ. ಮಹಿಳೆ ತನ್ನ ಮೇಲಾಗುವ ದಾಳಿಯಿಂದ ತಪ್ಪಿಸಿಕೊಳ್ಳಲು ಸಿದ್ಧಪಡಿಸಿದ ಸಾಧನವೂ ಆಗಿದೆ. ಇದು ಎಲೆಕ್ಟ್ರಾನಿಕ್ಸ್‌ ಸಾಧನ ಬಳಸಿಕೊಂಡು ಮಾಡಿರುವ ಚಪ್ಪಲಿ ಅಥವಾ ಪಾದರಕ್ಷೆ. ಇದರ ವೈಜ್ಞಾನಿಕ ಹೆಸರು ಆ್ಯಂಟಿ ರೇಪ್‌ ಫುಟ್‌ವೇರ್‌.

ಇದನ್ನು ಬ್ಲಿಂಕ್‌ ಆಪ್‌ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಈ ಚಪ್ಪಲಿ ಕೆಳಭಾಗದಲ್ಲಿ ಬ್ಯಾಟರಿ ಚಾಲಿತ 0.5ರಷ್ಟು ಆ್ಯಂಪಿಯರ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತದೆ. ಮಷಿನ್‌ ನಡೆಯುವಾಗಲೇ ಬ್ಯಾಟರಿ ಚಾರ್ಜ್‌ ಆಗುತ್ತದೆ.

ಸಂಕಷ್ಟದಲ್ಲಿರುವ ಮಹಿಳೆ ಹೆಬ್ಬೆರಳ ಬಳಿ ಬಟನ್‌ ಒತ್ತಿದರೆ ಸಾಕು, ಪೊಲೀಸರಿಗೆ ಮತ್ತು ಕುಟುಂಬದವರಿಗೆ ಎಚ್ಚರಿಕೆ ಸಂದೇಶ ಹೋಗುವಂತಹ ವ್ಯವಸ್ಥೆ ರೂಪಿಸಲಾಗಿದೆ. ಚಿಪ್‌ ಇದ್ದು, ಅಪ್ಲಿಕೇಶನ್‌ನಲ್ಲಿ ಯಾರ ನಂಬರ್‌ ದಾಖಲಿಸಿರುತ್ತೇವೆಯೋ ಆ ನಂಬರ್‌ಗೆ ಸಹಾಯದ ಸಂದೇಶ ಹೋಗುತ್ತದೆ. ಇದರಿಂದ ಸಂಕಷ್ಟಕ್ಕೊಳಗಾದವರು ಎಲ್ಲಿದ್ದಾರೆ ಎಂಬುದನ್ನು ಟ್ರ್ಯಾಕ್‌ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ.

ಬಾಲಕಿ ಕಂಡುಹಿಡಿದ ವಿಶೇಷ ಸಾಧನ; ಏನಿದು ಐಡಿಯಾ?
ಈ ಸಾಧನ ಮಹಿಳೆಯರ ಮೇಲೆ ಯಾರಾದರೂ ದಾಳಿ ಮಾಡಿದರೆ ವಿರೋಧಿಸಲು ಅನುಕೂಲವಾಗುತ್ತದೆ. ಹೆಬ್ಬೆರಳಿನಿಂದಲೇ ಆಪರೇಟ್‌ ಮಾಡಬಹುದು. ಹೆಬ್ಬೆರಳಿನಿಂದ ಮುಂಭಾಗದಲ್ಲಿ ಒತ್ತಿದರೆ ಚಪ್ಪಲಿಯ ಹಿಮ್ಮಡಿಯಲ್ಲಿರುವ ಬ್ಯಾಟರಿ ಶುರುವಾಗುತ್ತದೆ. ಇದರ ಮುಖಾಂತರ ಮುಂಭಾಗದ ತುದಿಯಲ್ಲಿ ಅಳವಡಿಸಿರುವ ಸಾಧನದಲ್ಲಿ ವಿದ್ಯುತ್‌ ಪ್ರವಹಿಸಿ ಅದು ಎದುರಿನ ವ್ಯಕ್ತಿಗೆ ಶಾಕ್‌ ಹೊಡೆಸುತ್ತದೆ. ಇದರಿಂದ ಸಂಭಾವ್ಯ ಆಪತ್ತಿನಿಂದ ಮಹಿಳೆ ಪಾರಾಗಬಹುದು. ಶಿಕ್ಷಕರ ಮಾರ್ಗದರ್ಶನ ಪಡೆದು ಈ ಪಾದರಕ್ಷೆ ರೂಪಿಸಿದ್ದೇನೆ ಎನ್ನುತ್ತಾಳೆ ವಿಜಯಲಕ್ಷ್ಮೀ ಬಿರಾದಾರ.

ಚಾರ್ಜೆಬಲ್‌ ಬ್ಯಾಟರಿ
ಫಿಜೋ ಎಲೆಕ್ಟ್ರಿಕ್‌ಎಫೆಕ್ಸ್‌ಟ್‌ ತಣ್ತೀದಡಿ ಈ ಚಪ್ಪಲಿಗಳನ್ನು ನಿರ್ಮಿಸಲಾಗಿದೆ. ಇದು ವ್ಯಕ್ತಿ ನಡೆಯುತ್ತಿರುವಾಗಲೇ ಚಾರ್ಜ್‌ ಆಗುತ್ತದೆ. ಈ ಶಕ್ತಿ ಚಾರ್ಜೆಬಲ್‌ ಬ್ಯಾಟರಿಯಲ್ಲಿ ಸಂಗ್ರಹವಾಗಿರುತ್ತದೆ. ವ್ಯಕ್ತಿ ನಿಮ್ಮ ಮೇಲೆ ದಾಳಿ ಮಾಡಿದಾಗ ಹೆಬ್ಬೆರಳನ್ನು ಒತ್ತಿದಾಗ ಸಾಧನ ಆರಂಭವಾಗುತ್ತದೆ. ವಿದ್ಯುತ್‌ ಪ್ರವಹಿಸಿ ದಾಳಿ ಮಾಡಿದ ವ್ಯಕ್ತಿಗೆ ಶಾಕ್‌ ತಗಲುತ್ತದೆ. ಇದರಿಂದ ವ್ಯಕ್ತಿಯನ್ನು ಹಿಮ್ಮೆಟ್ಟಿಸಬಹುದು.

 

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

Devegowda

Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್‌.ಡಿ.ದೇವೇಗೌಡ

Sathish-rajanna-mahadevappa

Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್‌ ಲೀಡರ್‌ʼ ಅಸ್ತ್ರ

Jayalalittha-Golds

Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.