![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 28, 2020, 11:57 AM IST
ಆಳಂದ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಡೋಳಾ ಗ್ರಾಪಂ ಕಚೇರಿ ಎದುರು ಪ್ರಗತಿಪರರು ಹಾಗೂ ಆಯ್ದ ಸದಸ್ಯರು ಸೇರಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
14ನೇ ಹಣಕಾಸು ಅಡಿಯಲ್ಲಿ ಖಂಡಾಳ ಗ್ರಾಮ ವಿಕಾಸ ಅನುದಾನ 7.5 ಲಕ್ಷ ಹಣ ಎತ್ತಿ ಹಾಕಿದ್ದು, ಮರು ಪಾವತಿಸಲು ಕಳೆದ ಮೂರು ವರ್ಷದ ಹಿಂದೆ ಪ್ರತಿಭಟನೆ ಕೈಗೊಂಡಾಗ ಲೆಕ್ಕ ವಿಭಾಗದಿಂದ 6.76 ಲಕ್ಷ ರೂ. ಅವ್ಯವಹಾರ ಪತ್ತೆಯಾಗಿತ್ತು. ಆಗ ಸಂಬಂಧಿ ತ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಕೈಗೊಳ್ಳಲಾಯಿತು. ಎರಡು ವರ್ಷದ ಬಳಿಕ ಇದೇ ಅಧಿಕಾರಿಯನ್ನು ಮತ್ತೆ ತಡೋಳಾ ಗ್ರಾಪಂಗೆ ನಿಯೋಜಿಸಲಾಗಿದೆ. ಈ ನಿಯೋಜಿತ ಅಧಿಕಾರಿ 2 ತಿಂಗಳಲ್ಲೇ ಮತ್ತೆ 2 ಲಕ್ಷ ರೂಪಾಯಿ ಅವ್ಯವಹಾರ ಎಸಗಿದ್ದು, ಇಂಥ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಮೊಹ್ಮದ್ ಸಲೀಂ ಮನವಿ ಸ್ವೀಕರಿಸಿ, ಎರಡು ದಿನಗಳಲ್ಲಿ ಸಮಿತಿ ರಚಿಸಿ ಗ್ರಾಪಂ ಅವ್ಯವಹಾರ ಪರಿಶೀಲಿಸಲಾಗುವುದು. ಧರಣಿ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಆದರೆ, ಧರಣಿನಿರತರು ಸಮಿತಿ ರಚಿಸಿ ಅವ್ಯವಹಾರ ಕುರಿತು ಪರಿಶೀಲನೆ ಆರಂಭಿಸುವ ತನಕ್ಕ ಧರಣಿ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು.
ಗ್ರಾಮದ ಹಿರಿಯ ಮುಖಂಡ ಮೌಲಾ ಮುಲ್ಲಾ, ಅಜೀತ ಆರ್. ಪಾಟೀಲ, ಮಹಾವೀರ ಕಾಂಬಳೆ, ಮಹಾದೇವ ಸಿಂದೆ, ಮೈಲಾರಿ ಜೋಗೆ, ಆಶಾ ಕ ಮುಲ್ಲಾ, ಗ್ರಾಪಂ ಸದಸ್ಯ ಉಮೇಶ ಘೋಡಕೆ, ಯಾದವ ಜಾಧವ, ಗ್ರಾಪಂ ಸದಸ್ಯ ಅಜೀತ ಪಟೇಲ ಹಾಗೂ ವಿಜಯಕುಮಾರ ಕಾಂಬಳೆ, ಭೀಮಸೇನ ಜಮಾದಾರ, ಜೈಭೀಮ ಗಾಯಕವಾಡ, ಪಾಂಡುರಂಗ ಸಿಂಧೆ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.