![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 30, 2021, 9:18 PM IST
ಕಲಬುರಗಿ: ನಾವು ಹಚ್ಚುವ ದೀಪಗಳು ಎಣ್ಣೆ ಇರುವ ವರೆಗೂ ಮಾತ್ರ ಉರಿಯುತ್ತದೆ. ಎಣ್ಣೆ ಮುಗಿದ ನಂತರ ಆ ದೀಪ ನಂದಿ ಹೋಗುತ್ತದೆ. ಜ್ಞಾನ ಎನ್ನುವ ದೀಪ ಎಂದಿಗೂ ನಂದುವುದಿಲ್ಲ ಎಂದು ಪ್ರವಚನಕಾರ ಪಂಡಿತ ಬ್ರಹ್ಮಣ್ಯಾಚಾರ್ಯ ಹೇಳಿದರು.
ಜಯತೀರ್ಥ ನಗರದ ಲಕ್ಷಿ ನಾರಾಯಣ ಮಂದಿರದಲ್ಲಿ ಆಯೋಜಿಸಿದ್ದ ವೇದವ್ಯಾಸ ಸೇವಾ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಹೃದಯದಲ್ಲಿ ನಂದಿ ಹೋಗದ ಜ್ಞಾನ ದೀಪವನ್ನು ಹಚ್ಚಿಕೊಂಡು ಸನ್ಮಾರ್ಗದತ್ತ ಸಾಗಬೇಕು. ಎಲ್ಲಿ ಕತ್ತಲೆ ಇರುತ್ತದೆಯೋ ಅಲ್ಲಿ ಕಳ್ಳರ ಕಾಟ ಇರುತ್ತದೆ.
ಬೆಳಕಿದ್ದಲ್ಲಿ ಕಳ್ಳರ ಕಾಟ ಇರುವುದಿಲ್ಲ. ಅದೇ ರೀತಿ ಎಲ್ಲಿ ಅಜ್ಞಾನ ಎಂಬ ಕತ್ತಲೆ ಇರುತ್ತದೆಯೋ ಅಲ್ಲಿ ಕಷ್ಟ, ನೋವುಗಳಿರುತ್ತವೆ. ಜೀವನದಲ್ಲಿ ಬರುವ ಕಷ್ಟ, ನೋವುಗಳನ್ನು ಶಮನ ಗೊಳಿಸುವ ಶಕ್ತಿ ಜ್ಞಾನದ ಬೆಳಕಿಗಿದೆ. ಎಲ್ಲಿ ಜ್ಞಾನದ ಬೆಳಕು ಬೆಳಗುತ್ತಿರುತ್ತದೆಯೋ ಅಲ್ಲಿ ಕಷ್ಟ, ನೋವು ಇರುವುದಿಲ್ಲ ಎಂದರು.
ನಿರಂತರ ಪ್ರವಚನ ಆಯೋಜಿಸುವ ಉದ್ದೇಶದಿಂದ ಜಯತೀರ್ಥ ನಗರದ ನಿವಾಸಿಗಳು ಶ್ರೀ ವೇದವ್ಯಾಸ ಸೇವಾ ಪ್ರತಿಷ್ಠಾನ ಸ್ಥಾಪಿಸಿದ್ದು ಸ್ತುತ್ಯಾರ್ಹ ಎಂದು ಶ್ಲಾಘಿಸಿದರು. ಕಾರ್ಯಕ್ರಮ ನಂತರ ಹಿರಿಯ ವಿದ್ವಾಂಸರಾದ ಗಿರೀಶಾಚಾರ್ಯ ಅವಧಾನಿ ರಾಮಾಯಣದ ಬಾಲಕಾಂಡದ ಕುರಿತು ಪ್ರವಚನ ನೀಡಿದರು.
ಶಾಮ ಸುಂದರ ಕುಲಕರ್ಣಿ ನಿರೂಪಿಸಿದರು, ರವಿ ಲಾತೂರಕರ ವಂದಿಸಿದರು. ಪ್ರತಿಷ್ಠಾನದ ಗೌರವ ಅಧ್ಯಕ್ಷ ಬಾಲಕೃಷ್ಣ ಲಾತೂರಕರ, ಅಧ್ಯಕ್ಷ ರಾಮಾಚಾರ್ಯ ಜೋಶಿ ನಗನೂರ, ಪ್ರಮುಖರಾದ ಶ್ರೀನಿವಾಸ ಆಚಾರ್ಯ, ಪ್ರಾಣೇಶ ಮುಜುಂದಾರ್, ಶಶಿಧರ ಜೋಷಿ, ಸುರೇಶ ಕುಲಕರ್ಣಿ, ಅನಿಲ ಕುಲಕರ್ಣಿ, ಸುಬ್ಟಾರಾವ ಕುಲಕರ್ಣಿ, ಧನುಷ್, ಜಡಿ ಸಂಜಯ, ವಿಠuಲ ಕುಲಕರ್ಣಿ, ನರಸಿಂಗರಾವ್ ಕುಲಕರ್ಣಿ, ಛಾಯಾ ಮುಳೂರು, ಜ್ಯೋತಿ ಲಾತೂರಕರ, ರಮಾ ಜೋಶಿ ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.