ಮಾರುಕಟ್ಟೆ ಮೇಲೂ ಕೋವಿಡ್‌ ಪ್ರಭಾವ

ತರಕಾರಿ ಬೆಲೆ ಅರ್ಧದಷ್ಟು ಇಳಿಕೆ ಕೈಗೆಟಕುವ ದರದಲ್ಲಿ ಈರುಳ್ಳಿ-ನುಗ್ಗೆಕಾಯಿ ಮಾರಾಟ

Team Udayavani, Mar 14, 2020, 10:38 AM IST

14-March-1

ಜೇವರ್ಗಿ: ಬೇಸಿಗೆ ಆರಂಭದೊಡನೆ ತರಕಾರಿಗಳು ತೀರ ಅಗ್ಗವಾಗಿದ್ದು, ಗ್ರಾಹಕರ ಮೇಲಿನ ಹೊರೆ ಅರ್ಧದಷ್ಟು ತಗ್ಗಿದ್ದು, ಕೋವಿಡ್‌-19 ಪ್ರಭಾವ ತರಕಾರಿ ಮಾರಾಟಕ್ಕೂ ತಟ್ಟಿದೆ ಎನ್ನಲಾಗುತ್ತಿದೆ.

ಸದ್ಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿದ್ದರೂ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಬೆಲೆಗಳು ಇಳಿಕೆ ಕಾಣುತ್ತಿವೆ. ಮಾರಕಟ್ಟೆಯಲ್ಲಿನ ಶೇ. 80ರಷ್ಟು ತರಕಾರಿಗಳ ಬೆಲೆಯು ತಿಂಗಳಿಂದ ಈಚೆಗೆ ಅರ್ಧದಷ್ಟು ಇಳಿಕೆ ಆಗಿವೆ. ಕಳೆದ ಕೆಲವು ತಿಂಗಳಿನಿಂದ ಗಗನಮುಖೀಯಾಗಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆ ಸದ್ಯ ಯಥಾಸ್ಥಿತಿಗೆ ಮರಳಿದೆ.

ಕೈಗೆಟುಕುವ ದರದಲ್ಲಿ ಈರುಳ್ಳಿ ಸಿಗುತ್ತಿರುವ ಕಾರಣ ಕೊಳ್ಳುವವರು ಖುಷಿಯಾಗಿದ್ದಾರೆ. ಟೊಮೊಟೋ ಬೆಲೆಯಲ್ಲಿ ಮತ್ತೆ ತೀವ್ರ ಕುಸಿತ ಕಾಣತೊಡಗಿದ್ದು, ಬೆಳೆಗಾರರಲ್ಲಿ ಆತಂಕ ತಂದೊಡ್ಡಿದೆ. ಸಗಟು ದರದಲ್ಲಿ 5ರೂ.ಗಿಂತ ಕಡಿಮೆ ಬೆಲೆಗೆ ವ್ಯಾಪಾರ ಆಗತೊಡಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇದರ ಸಂಪುರ್ಣ ಲಾಭ ಇನ್ನೂ ಗ್ರಾಹಕರಿಗೆ ತಲುಪುತ್ತಿಲ್ಲ.

ಕೆಲವು ತಿಂಗಳ ಹಿಂದಷ್ಟೆ ನುಗ್ಗೆಕಾಯಿ ಬೆಲೆ ಕೇಳಿ ಹೌಹಾರುತ್ತಿದ್ದವರೂ ಈಗ ಕೆ.ಜಿ ಗಟ್ಟಲೇ ಕಾಯಿಯನ್ನು ಬ್ಯಾಗಿಗೆ ಇಳಿಸತೊಡಗಿದ್ದಾರೆ. ನುಗ್ಗೆ ಸಾಕಷ್ಟು ಅಗ್ಗವಾಗಿದೆ, ಹಸಿ ಮೆಣಸಿನಕಾಯಿ ಬೆಲೆ ಸಹ ಕೊಳ್ಳುವವರ ಕಿವಿಗೆ ಹಿತವಾಗಿದೆ. ಉಳಿದಂತೆ ಮುಲ್ಲಂಗಿ, ಕ್ಯಾರೆಟ್‌, ಸೌತೆಕಾಯಿ, ಆಲೂಗಡ್ಡೆ, ಮೆಂತೆಪಲ್ಯಾ, ಪುಂಡಿಪಲ್ಯೆ, ಕೊತಂಬರಿ ಸೊಪ್ಪು, ಗೋಬಿ, ಪೂಲ್‌ ಗೋಬಿ, ಬದನೆಕಾಯಿ ಸಹಿತ ಪ್ರಮುಖ ತರಕಾರಿಗಳ ಬೆಲೆಗಳು ಇಳಿಮುಖವಾಗುತ್ತಿದೆ.

ಮಾರ್ಚ್‌ ತಿಂಗಳು ಬಂದರೂ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕೇಳುವವರು ಇಲ್ಲದಂತಾಗಿದೆ. ದಪ್ಪ ಗಾತ್ರದ ಕಾಯಿಗಳು 2ರೂ. ದರದಲ್ಲಿ ಮಾರಾಟ ಆಗುತ್ತಿವೆ. ಇನ್ನೂ ಕೆಲವು ಕಡೆ 10ರೂ.ಗೆ 10 ನಿಂಬೆಹಣ್ಣು ಮಾರಾಟ ಮಾಡಲಾಗುತ್ತಿದೆ. ಯಥೇಚ್ಛ ಪ್ರಮಾಣದಲ್ಲಿ ಉತ್ಪನ್ನ ಬಂದಿದ್ದರೂ ಬೇಡಿಕೆ ಇಲ್ಲದ ಕಾರಣ ಬೆಲೆ ಕಡಿಮೆಯೇ ಇದೆ. ಇದ್ದುದರಲ್ಲಿ ಆಲೂಗಡ್ಡೆ ಕೊಂಚ ಬೆಲೆ ಉಳಿಸಿಕೊಂಡಿದೆ. ಕೆ.ಜಿಗೆ 25ರಿಂದ 30ರೂ.ಗೆ ಮಾರಾಟವಾಗುತ್ತಿದೆ.

ಸೊಪ್ಪುಗಳ ಬೆಲೆಯಲ್ಲೂ ಸಾಕಷ್ಟು ಇಳಿಮುಖವಾಗಿದೆ. ಕೊತ್ತಂಬರಿ ದೊಡ್ಡ ಗಾತ್ರದ ಕಟ್ಟಿಗೆ 5ರೂ. ರಂತೆ ಮಾರಾಟ ನಡೆದರೆ, ಮೆಂತೆ ಪಲ್ಯಾ 10 ರೂ.ಗೆ ಐದು ಕಟ್ಟು, ಪುಂಡಿಪಲ್ಯೆ 5ರೂ.ಗೆ ನಾಲ್ಕು ಕಟ್ಟು ಹೀಗೆ ವಿವಿಧ ತರಹದ ಸೊಪ್ಪುಗಳು 10ರೂ. ಒಳಗೆ ಸಿಗುತ್ತಿವೆ.

ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಉತ್ಪನ್ನ ಬರುತ್ತಿದೆ. ಆದರೆ ಬೇಡಿಕೆಯೇ ಇಲ್ಲ. ಹೀಗಾಗಿ ಎಲ್ಲ ತರಕಾರಿಗಳ ಬೆಲೆ ಅರ್ಧದಷ್ಟು ತಗ್ಗಿದೆ. ಹೊರ ರಾಜ್ಯಗಳಿಂದ ತರಕಾರಿಗೆ ಬೇಡಿಕೆ ಕುಸಿದಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.
ಯುನೂಸ್‌ ಇಬ್ರಾಹಿಂ ಬಾಗವಾನ್‌,
ತರಕಾರಿ ವ್ಯಾಪಾರಿ

ಈರುಳ್ಳಿ, ಟೊಮೊಟೋದಂತ ನಿತ್ಯ ಬಳಕೆಯ ತರಕಾರಿ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಸ್ವಲ್ಪ ಹಣದಲ್ಲೇ ಬುಟ್ಟಿ ತುಂಬ ತರಕಾರಿ ಒಯ್ಯಬಹುದು.
ವಿಜಯಲಕ್ಷ್ಮೀ ಪೊಲೀಸ್‌ ಪಾಟೀಲ,
ಗೃಹಿಣಿ.

ವಿಜಯಕುಮಾರ ಎಸ್‌.ಕಲ್ಲಾ

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.