Kalaburagi; ಭರ್ಜರಿ ಮಳೆ: ತಂಪಾಯಿತು ಕಾದು ಕೆಂಡವಾಗಿದ್ದ ಇಳೆ
Team Udayavani, Apr 11, 2024, 8:58 PM IST
ಕಲಬುರಗಿ: ಈ ವರ್ಷದ ಬೇಸಿಗೆ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯತ್ಕಿಂತಲೂ ಹೆಚ್ಚು ರಣಬಿಸಿಲಿನಿಂದ ಕಾದು ಕೆಂಡವಾಗಿದ್ದ ಕಲಬುರಗಿ ಜಿಲ್ಲೆಯ ನೆಲಕ್ಕೆ ಗುರುವಾರ ಸಂಜೆ ಭಾರಿ ಮಳೆ ಬಿದ್ದು ನೆಲ ತಂಪಾಯಿತು. ಬಹುತೇಕ ಜಿಲ್ಲೆಯ ಎಲ್ಲ ಕಡೆಯಲ್ಲಿ ಮಳೆ ಆಗಿರುವ ಸಾಧ್ಯತೆಗಳಿವೆ. ಸಣ್ಣ ಗುಡುಗು ಮಿಂಚಿನ ಸಮೇತ ಧಾರಾಕಾರ ಮಳೆ ಸುರಿದು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿಗಳಲ್ಲಿ ನೀರು ಹರಿಯಿತು.
ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ವಾಡಿ, ಆಳಂದ, ಅಂಬಲಗಾ, ನಿಂಬರ್ಗಾ, ಆಜಾದಪುರ, ಕಾಳಗಿ ಭಾರಿ ಮಳೆಯಾಗಿದೆ. ಅಫಜಲಪುರ ಸಣ್ಣ ಪ್ರಮಾಣದ ಮಳೆಯಾಗಿದೆ. ಇನ್ನೂ ಹಕವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಿಂಚು, ಗುಡುಗು ಸಮೇತ ಮಳೆಯಾಗಿದೆ.
ಮಳೆಗೂ ಮುನ್ನ ಬೀಸೀದ ಬಿರುಗಾಳಿ ಹಲವು ತಾಲೂಕುಗಳಲ್ಲಿ ಅವಾಂತರ ಸೃಷ್ಟಿ ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಅಲ್ಲಲ್ಲಿ ಮನೆ ಮುಂಭಾಗದ ಪತ್ರಾಸ ಹಾರಿ ಹೋಗಿವೆ.
ಭಾರಿ ಪ್ರಮಾಣದಲ್ಲಿ ಗುಡುಗಿದ್ದರೂ, ಸಿಡಿಲು ಬಿದ್ದ ಮಾಹಿತಿ ಸಿಕ್ಕಿಲ್ಲ. ಅದರೆ, ಸಿಡಿಲು ಬೀಳುವ ಸಾಧ್ಯತೆ ಹೆಚ್ಚಿದ್ದು ಜನರು ರಕ್ಷಣಾತ್ಮಕ ಪ್ರದೇಶದಲ್ಲಿ ಮಳೆಯಿಂದ ಆಸರೆ ಪಡೆಯಬೇಕು ಎಂದು ಜಿಲ್ಲಾಡಳಿತ ಗುರುವಾರ ಸಂಜೆ ಕೊನೆ ಘಳಿಗೆಯಲ್ಲಿ ಜನರಿಗೆ ಮಾಹಿತಿ ತಲುಪಿಸುವ ಪ್ರಯತ್ನವೂ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್?
Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.