Kalaburagi; ರಾಡಿ ನೀರು ಪೂರೈಕೆ: ಈಜು ಕೋಳವೂ ಬಂದ್
ರಾಡಿ ನೀರಿನಿಂದ ಕಲಬುರಗಿ ಮಹಾನಗರ ದಲ್ಲಿ ಹಲವು ತೊಂದರೆಗಳು
Team Udayavani, Jun 20, 2024, 7:09 PM IST
ಕಲಬುರಗಿ: ರಾಡಿ (ಕಲುಷಿತ) ನೀರು ಪೂರೈಕೆಯಿಂದ ಇಲ್ಲಿನ ಜೀಮ್ಸ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಬಂದ್ ಮಾಡಿರುವ ನಡುವೆ ಈಗ ಈಜುಕೋಳ ಸಹ ಬಂದಾಗಿದೆ.
ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣ ದಲ್ಲಿರುವ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಈಜುಕೋಳ ರಾಡಿ ನೀರು ಪೂರೈಕೆ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ.
ಈಜುಕೋಳಕ್ಜೆ ಮಣ್ಣು ಮಿಶ್ರಿತ ನೀರು ಪೂರೈಕೆಯಾಗಿದ್ದು, ಶುದ್ದೀಕರಣ ಮಾಡದ ಮಟ್ಟಿದೆ ರಾಡಿ ನೀರಾಗಿದ್ದರಿಂದ ನೀರು ಶುದ್ದಗೊಳ್ಳದೇ ಹಿನ್ನೆಲೆಯಲ್ಲಿ ವಾರ ಕಾಲ ಈಜುಕೋಳ ವನ್ನೇ ಬಂದ್ ಮಾಡಲಾಗಿದೆ.
ಗುರುವಾರ ಎಂದಿನಂತೆ ದಿನಾಲು ಈಜಾಡುವ ಈಜು ಪ್ರಿಯರು ಈಜುಕೋಳಕ್ಕೆ ಹೋದರೆ ರಾಡಿ ನೀರಿನಿಂದ ಈಜುಕೋಳ ಬಂದ್ ಮಾಡಲಾಗಿದೆ ಎಂದು ಈಜುಕೋಳ ನಿರ್ವಹಣಾ ಸಿಬ್ಬಂದಿ ತಿಳಿಸಿದರು.
ರಾಡಿ ನೀರು ಎಷ್ಟು ಪ್ರಮಾಣದಲ್ಲಿ ಇದೆ ಎಂದರೆ ನೀರಿನಲ್ಲಿ ಈಜಾಡಿದರೆ ಮೈಗೆ ಮಣ್ಣು ಹತ್ತಿಕೊಳ್ಳುವಂತಿದೆ. ನೀರು ಎಷ್ಟೇ ಶುದ್ಧ ಮಾಡಿದರೆ ಆಗೋದಿಲ್ಲ. ನೀರು ಬದಲಾಯಿಸುವುದು ಸೂಕ್ತವಾಗಿದೆ ಎಂದು ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ದಿನವೂ ಬೆಳಗ್ಗೆ ಸಾವಿರ ಹಾಗೂ ಸಂಜೆ ಐದಾರು ಜನ ಈಜಾಡುತ್ತಾರೆ. ಇವರೆಲ್ಲರೂ ಶುಲ್ಕ ತುಂಬಿ ಈಜಾಡುತ್ತಾರೆ. ಬೇಸಿಗೆ ದಿನದಲ್ಲಂತು ಮಕ್ಕಳಿಗೆ ವಿಶೇಷ ಶಿಬಿರ ಮೂಲಕ ಈಜು ತರಬೇತಿ ಸಹ ನಡೆದಿವೆ. ಅವರೆಲ್ಲರೂ ಈಗ ಈಜು ಬಲ್ಲವರಾಗಿದ್ದಾರೆ. ಈಗ ಈಜಾಡಬೇಕೆಂದರೆ ಈಜುಕೋಳವೇ ಬಂದಾಗಿದೆ.
ಈಜುಕೋಳ ಈ ಹಿಂದೆ ವಿದ್ಯುತ್ ಕೊರತೆ ಹಾಗೂ ಸಕಾಲಕ್ಕೆ ಕಚ್ಚಾ ಸಾಮಾಗ್ರಿಗಳ ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ಬಂದಾಗಿದ್ದರೆ ಇದೇ ಪ್ರಥಮ ಬಾರಿಗೆ ರಾಡಿ ನೀರಿನಿಂದ ಬಂದಾಗಿದೆ. ಒಟ್ಟಾರೆ ಉಪಯೋಗಕ್ಕೆ ಬಾರದ ರಾಡಿ ನೀರು ಕಲಬುರಗಿ ಮಹಾನಗರ ದಲ್ಲಿ ಹಲವು ತೊಂದರೆ ಗಳಿಗೆ ಎಡೆ ಮಾಡಿದೆಯಲ್ಲದೇ ಜೀವನದ ಮೇಲೂ ಪರಿಣಾಮ ಬೀರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM-DCM ವಿಚಾರದಲ್ಲಿ ಹೈಕಮಾಂಡ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ: ರಂಭಾಪುರಿ ಶ್ರೀ
Kalaburagi: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ತಡೆಗೆ ಮಹಿಳಾ ಅಯೋಗದ ಸೆಲ್: ಡಾ।ನಾಗಲಕ್ಷ್ಮಿ
DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ
Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ
Kalaburagi: ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಗತಿ ಪರಿಶೀಲನಾ ಸಭೆ
MUST WATCH
ಹೊಸ ಸೇರ್ಪಡೆ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು
Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.