![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 13, 2022, 2:26 PM IST
ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಪಟೇಲ್ ಕಾಲೋನಿಯಲ್ಲಿ ಕಳೆದ 3 ದಿನಗಳಿಂದ ಚಿರತೆ ಮರಿಗಳು ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಪಟೇಲ್ ಕಾಲೊನಿಯು ಮುಲ್ಲಾ ಮರದಡಿಯ ಪಕ್ಕದಲ್ಲಿರುವುದರಿಂದ ಪೊದೆಯಲ್ಲಿ ಕುಳಿತಿದ್ದ ಚಿರತೆ ಮರಿಗಳು ಕಳೆದ 3 ದಿನದಿಂದ ಪಟೇಲ್ ಕಾಲೋನಿ ಕೆಲವು ಬಡಾವಣೆಗಳಲ್ಲಿ ರಾತ್ರಿ ಹೊತ್ತು ತಿರುಗಾಡುತ್ತಿವೆ ಎಂದು ಅಲ್ಲಿನ ಮುಖಂಡರಾದ ಖಲೀಲ್ ಪಟೇಲ್ ತಿಳಿಸಿದ್ದಾರೆ .
ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಿದ್ಧಾರೂಢ ಹೊಕ್ಕುಂಡಿ, ನಟರಾಜ ಅವರು ಪೊದೆಯಲ್ಲಿ ಚಿರತೆ ಮರಿಗಳು ಇರಬಹುದೆಂದು ಊಹಿಸಿ ಗಿಡಗಂಟಿಗಳನ್ನು ತೆರವುಗೊಳಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಪಟೇಲ್ ಕಾಲೋನಿಯ ಚರಂಡಿ ಸುತ್ತಮುತ್ತ ಭಾರಿ ಹುಲ್ಲು ಬೆಳೆದು ಚರಂಡಿಯೇ ಹುಲ್ಲಿನ ಪೊದೆಗಳಲ್ಲಿ ಅವಿತುಕೊಂಡಿದೆ ಎಂದು ಜನರು ಹೇಳುತ್ತಿದ್ದಾರೆ. ಚಿರತೆ ಮರಿಗಳು ಕಾಣಿಸಿಕೊಂಡಿರುದರಿ೦ದ ಸಣ್ಣ ಪುಟ್ಟ ಮಕ್ಕಳು ರಾತ್ರಿ ಹೊತ್ತಿನಲ್ಲಿ ಮತ್ತು ಹಗಲಲ್ಲೂ ತಿರುಗಾಡಲು ಹೆದರುವಂತಾಗಿದೆ ಎಂದು ಮಸೂದ್ ಸೌದಾಗರ್ ತಿಳಿಸಿದ್ದಾರೆ.
ಪುರಸಭೆ ಉಪಾಧ್ಯಕ್ಷ ಶಬ್ಬೀರ್ ಸೌದಾಗರ್, ಸದಸ್ಯರಾದ ಮಸೂದ್ ಸೌದಾಗರ್, ಅಬ್ದುಲ್ ಬಾಸಿತ್ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.