ವೇದದ ಮಹತ್ವ ಎಲ್ಲರಿಗೂ ತಿಳಿಸಿ
Team Udayavani, Apr 10, 2017, 3:37 PM IST
ಕಲಬುರಗಿ: ವೇದಗಳ ಸಂರಕ್ಷಣೆಯಾಗಬೇಕು ಹಾಗೂ ವೇದದ ಮಹತ್ವ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶ ದಿಂದ ವೇದಪಾರಾಯಣ ಅಭಿ ಯಾನ ಆರಂಭವಾಗಿದ್ದು, ವೇದ ಪಾರಾಯಣ ಗಳನ್ನು ಹೆಚ್ಚೆಚ್ಚು ಮಾಡಿಸಬೇಕೆಂದು ಪಂ| ಮಧುಸೂಧನ ಶಾಸ್ತ್ರೀ ಹಂಪಿಹೋಳಿ ಹೇಳಿದರು.
ನಗರದ ಸಾಯಿ ಮಂದಿರದಲ್ಲಿ ರವಿವಾರ ಬೆಳಗ್ಗೆ ನಡೆದ ವೇದಪಾರಾಯಣ ಅಭಿಯಾನದ 7 ನೇ ವಾರ್ಷಿಕ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷ್ಣಾದ ಶೇಷಭಟ್ಟರು, ಪುಣೆ, ಮುಂಬೈ, ಬೀದರ, ವಿಜಯಪುರ, ಕಲಬುರಗಿ, ಬೆಳಗಾವಿ ನಗರದ ವೇದ ವಿದ್ವಾಂಸರು ಭಾಗವಹಿಸಿದ್ದರು. ಸುಮಾರು 110 ಕ್ಕೂ ಹೆಚ್ಚು ವೇದ ಪಾರಾಯಣ ನಡೆಯಿತು. ಉಪನ್ಯಾಸಕರಾಗಿ ಡಾ| ಯೋಗೇಶ ಜೋಶಿ ವೇದದ ಉತ್ಪತ್ತಿ, ಬೆಳವಣಿಗೆ ಹಾಗೂ ಮಹತ್ವ ತಿಳಿಸಿದರು.
ದಾನಿಗಳಿಗೆ ವಸ್ತ್ರ ಮಂತ್ರಾಕ್ಷತೆ, ಫಲಪುಷ್ಪ ನೀಡಿ ಆಶೀರ್ವದಿಸಲಾಯಿತು ವೇದ ವಿದ್ವಾಂಸರಿಗೆ ದಕ್ಷಿಣೆ ಹಾಗೂ ವಸ್ತ್ರ ನೀಡಿ ಸತ್ಕರಿಸಲಾಯಿತು. ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಲೋಕೇಶಭಟ್ಟ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.