ಫಲಕನಾಮಾ ರೈಲು ಕಲಬುರಗಿವರೆಗೂ ಸಂಚರಿಸಲಿ
Team Udayavani, Mar 30, 2022, 12:28 PM IST
ವಾಡಿ: ಹೈದ್ರಾಬಾದ ಫಲಕನಾಮಾ ಪ್ಯಾಸೆಂಜರ್ ರೈಲನ್ನು ವಾಡಿ ನಿಲ್ದಾಣದಲ್ಲೇ ತಡೆಯದೇ ಅದನ್ನು ಕಲಬುರಗಿ ವರೆಗೂ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ದಲಿತ ಸೇನೆ ಮುಖಂಡರು ರೈಲ್ವೆ ಡಿಆರ್ಎಂಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರಿಗಾಗಿ ಒದಗಿಸಲಾದ ವಿವಿಧ ಸೌಕರ್ಯಗಳ ಪರಿಸ್ಥಿತಿ ಅವಲೋಕಿಸಿದ ಸೆಂಟ್ರಲ್ ರೈಲ್ವೆ ಮಹಾ ನಿರ್ದೇಶಕರನ್ನು ಭೇಟಿ ಮಾಡಿದ ದಲಿತ ಮುಖಂಡರು, ವಿವಿಧ ಬೇಡಿಕೆಗಳ ಮನವಿಪತ್ರ ಸಲ್ಲಿಸಿ ಮಾತುಕತೆ ನಡೆಸಿದರು.
ಪ್ರತಿನಿತ್ಯ ಹೈದ್ರಾಬಾದ್ದಿಂದ ವಾಡಿ ಜಂಕ್ಷನ್ ನಿಲ್ದಾಣದ ವರೆಗೆ ಫಲಕನಾಮಾ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ. ಬೆಳಗ್ಗೆ 11 ಗಂಟೆಗೆ ವಾಡಿ ನಿಲ್ದಾಣ ತಲುಪುವ ಈ ರೈಲನ್ನು ಅನಗತ್ಯವಾಗಿ ಮುಂದೆ ಚಲಿಸದಂತೆ ತಡೆಯಲಾಗಿದೆ. ವಾಡಿ ನಿಲ್ದಾಣದಿಂದಲೇ ಮತ್ತೆ ಹೈದ್ರಾಬಾದ್ನತ್ತ ಹೊರಡುತ್ತಿದೆ. ಇದರಿಂದ ಈ ಭಾಗದ ಸಾಮಾನ್ಯ ಪ್ರಯಾಣಿಕರಿಗೆ ಜಿಲ್ಲಾ ಕೇಂದ್ರದ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ.
ಕಲಬುರಗಿ ನಗರಕ್ಕೆ ಪ್ರಯಾಣ ಬೆಳೆಸುವ ಶಾಲೆ-ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು, ಪ್ರಯಾಣಿಕರು, ಆಸ್ಪತ್ರೆಗೆ ಹೋಗುವ ರೋಗಿಗಳು ಹೀಗೆ ದಿನಕ್ಕೆ ಸಾವಿರಾರು ಜನ ವಾಡಿ-ಕಲಬುರಗಿ ಮಧ್ಯೆ ಹೋಗಿ ಬರುವ ಕಾಯಂ ಪ್ರಯಾಣಿಕರಿದ್ದಾರೆ. ಲಾಕ್ಡೌನ್ ಜಾರಿಗೂ ಮುನ್ನ ಫಲಕನಾಮಾ ರೈಲು ಕಲಬುರಗಿ ವರೆಗೆ ಓಡುತ್ತಿತ್ತು. ಕೊರೊನಾ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ರೈಲು ಸಂಚಾರ ತಡೆಯಲಾಗಿದೆ. ಈಗ ಕೋವಿಡ್ ಕರಾಳ ಛಾಯೆ ಕಡಿಮೆಯಾಗಿದ್ದು, ಪ್ಯಾಸೆಂಜರ್ ರೈಲುಗಳು ಮತ್ತು ಎಕ್ಸ್ಪ್ರೆಸ್ ರೈಲುಗಳು ಹಳಿ ಹಿಡಿದಿವೆ. ಆದರೆ ಫಲಕನಾಮಾ ಪ್ಯಾಸೆಂಜರ್ ರೈಲು ಮಾತ್ರ ಕಲಬುರಗಿ ವರೆಗೆ ಚಲಿಸುತ್ತಿಲ್ಲ. ಈ ರೈಲು ಕೂಡಲೇ ಕಲಬುರಗಿ ವರೆಗೆ ಚಲಿಸುವಂತೆ ಕ್ರಮಕೈಗೊಂಡು ಜನರಿಗೆ ಅನುಕೂಲ ಒದಗಿಸಬೇಕು ಎಂದು ಅಂಬೇಡ್ಕರ್ ದಲಿತ ಸೇನೆ ತಾಲೂಕು ಅಧ್ಯಕ್ಷ ರಾಜು ಕೊಲ್ಲೂರ ಮನವಿ ಮಾಡಿದ್ದಾರೆ. ಮುಖಂಡರಾದ ಹಾಜಪ್ಪ ಲಾಡ್ಲಾಪುರ, ರಾಜು ಗಟ್ಟು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್ ಅಸಮಾಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.