![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 13, 2021, 4:59 PM IST
ಅಫಜಲಪುರ: ನನಗೆ ಮತ ನೀಡಿ ಗೆಲ್ಲಿಸಿದ ಮತದಾರ ಪ್ರಭುಗಳ ಋಣ ತೀರಿಸುವ ಕೆಲಸ ನನ್ನದು. ಕ್ಷೇತ್ರದ ಅಭಿವೃದ್ಧಿಗಾಗಿ ಜೀವ ಮುಡಿಪಾಗಿಟ್ಟಿದ್ದೇನೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಚಿನಮಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕು ಅಭಿವೃದ್ಧಿಯಾಗಬೇಕಾದರೆ ಗ್ರಾಮೀಣ ಪ್ರದೇಶದ ಜನರ ಬದುಕು ಮತ್ತು ರೈತರ ಬದುಕು ಹಸನಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ 58 ಕೋಟಿ ರೂ. ವೆಚ್ಚದಲ್ಲಿ 16 ಕೆರೆ ತುಂಬುವ ಯೋಜನೆ ಮಾಡಿಸಿದ್ದೇನೆ. ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ.
ಚಿನಮಳ್ಳಿ ಗ್ರಾಮದಲ್ಲಿನ ಬ್ರಿಜ್ ಕಂ ಬ್ಯಾರೇಜ್ಗೆ ಹೈಡ್ರಾಲಿಕ್ ಗೇಟ್ಗಾಗಿ 60 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ತಡೆಗೋಡೆಗಾಗಿ 16 ಕೋಟಿ ಖರ್ಚು ಮಾಡಲಾಗುತ್ತಿದೆ. ಅಲ್ಲದೆ ಗ್ರಾಮದಲ್ಲಿನ ದಕ್ಷಿಣ ಕಾಶಿ ಖ್ಯಾತಿಯ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ 1.28 ಕೋಟಿ ಅನುದಾನದ ಕ್ರಿಯಾ ಯೋಜನೆ ಮಾಡಲಾಗಿದ್ದು, ಆದಷ್ಟು ಬೇಗ ಅನುದಾನ ಬರಲಿದೆ ಎಂದರು. ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ ಮಾತನಾಡಿ, ಶಾಸಕ ಎಂ.ವೈ. ಪಾಟೀಲ್ ಅವರಿಗೆ ಅಭಿವೃದ್ಧಿ ಕೆಲಸ ಬಂದಾಗ ಯಾವ ಊರು, ಯಾವ ಜನರೆಂದು ನೋಡುವುದಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಒಂದಿಲ್ಲೊಂದು ಕಾಮಗಾರಿಗೆ ಅಡಿಗಲ್ಲು, ಚಾಲನೆ, ಉದ್ಘಾಟನೆಗಳು ನಡೆಯುತ್ತಿವೆ.
ನಾನು ಕೂಡ ಜಿ.ಪಂ ಉಪಾಧ್ಯಕ್ಷೆಯಾಗಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡು ಶಾಲಾ ಕಟ್ಟಡಗಳು, ರಸ್ತೆ, ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದೇನೆ ಎಂದರು. ಮುಖಂಡ ಬಾಷಾ ಪಟೇಲ್ ಹಸರಗುಂಡಗಿ ಮಾತನಾಡಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ನಮ್ಮ ನಾಯಕರಾದ ಎಂ.ವೈ. ಪಾಟೀಲ್ ಅವರನ್ನು ಟೀಕಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ. ಹೀಗಾಗಿ ಮಾಲೀಕಯ್ಯ ಗುತ್ತೇದಾರ ತಮ್ಮ ಕೂಲಿಂಗ್ ಗ್ಲಾಸ್ ತೆಗೆದಿಟ್ಟು ಮತಕ್ಷೇತ್ರದಲ್ಲಿ ಓಡಾಡಲಿ ಆಗಲಾದರೂ ಅವರಿಗೆ ಶಾಸಕರ ಅಭಿವೃದ್ಧಿ ಕೆಲಸಗಳು ಕಾಣುತ್ತವೆ ಎಂದರು. ಮುಖಂಡ ಸಿದ್ದು ಶಿರಸಗಿ ಮಾತನಾಡಿ, ಶಾಸಕ ಎಂ.ವೈ. ಪಾಟೀಲ್ ಅವರ ಅಭಿವೃದ್ಧಿ ಕೆಲಸಗಳು ವಿರೋಧಿ ಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಟೀಕೆ ಮಾಡುತ್ತಾರೆ.
ಆದರೆ ಶಾಸಕರು ಯಾರ ಟೀಕೆಗೂ ಕಿವಿಗೊಡದೆ ಅಭಿವೃದ್ಧಿ ಕೆಲಸಗಳ ಮೂಲಕವೇ ಎಲ್ಲರಿಗೂ ಉತ್ತರ ನೀಡುತ್ತಿದ್ದಾರೆ. ಚಿನಮಳ್ಳಿ ಗ್ರಾಮ ಮುಂಬರುವ ದಿನಗಳಲ್ಲಿ ಆದರ್ಶ ಗ್ರಾಮವಾಗಲಿದೆ ಎಂದರು. ಹಸರಗುಂಡಗಿ ಗ್ರಾ.ಪಂ ಅಧ್ಯಕ್ಷ ಬೈಲಪ್ಪ ಪಟ್ಟೆದಾರ, ಸಿದ್ದು ಶಿರಸಗಿ, ಅಜಯ್ ಪಾಟೀಲ್, ಪ್ರಭು ಸಾಹುಕಾರ, ಪ್ರಭು ಹಿರಾಪೂರ, ಶರಣು ಕುಂಬಾರ, ಮಲ್ಲಿಕಾರ್ಜುನ ನಾಟಿಕಾರ, ಶರಣು ಜಮಾದಾರ, ಶಾಮರಾಯ ಪಾಟೀಲ್, ಲಕ್ಷ್ಮಣ ಪಾಟೀಲ್, ಕಲ್ಲು ಸಾಹುಕಾರ, ಅಸ್ಪಾಕ ಬಂದರವಾಡ, ಅವ್ವಣ್ಣಗೌಡ ಕಿರಸಾವಳಗಿ, ನಾಗರಾಜ ಮೇಳಕುಂದಾ, ಶರಣು ತಳಕೇರಿ, ಶರಣು ಗುಜ್ಜ, ಕೆಆರ್ ಐಡಿಎಲ್ ಜೆಇ ರಾಜಶೇಖರ, ಪಿಡಿಒ ಸೇರಿದಂತೆ ಇತರರು ಇದ್ದರು. ಭೋಜರಾವ ಪಾಟೀಲ್ ಸ್ವಾಗತಿಸಿದರು. ಶಿವು ಬೆಳಗುಂಪಿ ನಿರೂಪಿಸಿದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.