Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ


Team Udayavani, Nov 14, 2024, 11:37 AM IST

Maharashtra Election; BJP has nothing but 370: Mallikarjuna Kharge

ಕಲಬುರಗಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯವರಿಗೆ 370 ಆರ್ಟಿಕಲ್ ಹೊರತು ಪಡಿಸಿ ಜನರಿಗೆ ಕೊಡಲು ಏನು ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು

ಸಂಸತ್ತಿನ ಚುನಾವಣೆಗಳಲ್ಲಿ ಜಾತಿ ಧರ್ಮವನ್ನು ಮುಂದೆ ಮಾಡಿಕೊಂಡು ಮತ ಕೇಳಿದಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ರಾಷ್ಟ್ರ ನಾಯಕರು ಜಾತಿ ಧರ್ಮದ ಹೆಸರಲ್ಲಿ ಮತ ಕೇಳಿಕೊಂಡು ಓಡಾಡುತ್ತಿದ್ದಾರೆ ವಿನಹ ರೈತರ ಸಮಸ್ಯೆಗಳು ಅವರ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರಿಕೆ ಎಂಎಸ್ ಪಿ ಹಾಗೂ ರೈತರಿಗೆ ಉತ್ತಮ ಕೃಷಿ ಮಾಡಲು ಬೇಕಾದ ಉಪಕರಣಗಳನ್ನು ನೀಡದೆ ಇರುವುದು, ಮಧ್ಯಮ ವರ್ಗ ವ್ಯಾಪಾರಿ ವರ್ಗದ ಮೇಲೆ ಸೇರಿರುವ ಜಿಎಸ್​ಟಿ ಕುರಿತು ಮಾತನಾಡದೆ ಇರುವುದು, ಇನ್ನೂ ಹಲವಾರು ವಿಚಾರಗಳನ್ನು ಬಿಟ್ಟು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಇದೇ ವೇಳೆ ಕರ್ನಾಟಕದಲ್ಲಿ ನೀಡಿರುವ ಗ್ಯಾರಂಟಿಯಂತೆ ಮಹಾರಾಷ್ಟ್ರದಲ್ಲೂ ಹಲವು ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದರು.

ನಾವು ಅಧಿಕಾರಕ್ಕೆ ಬಂದರೆ ಹೀಗಿರುವ ಟೊಳ್ಳು ಭರವಸೆಗಳ ಸುಳ್ಳು ಮತ್ತು ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಜನರಿಗೆ ಮೂಲಭೂತ ಸೌಕರ್ಯ ಸೌಕರ್ಯಗಳು ಸೇರಿದಂತೆ ಅವರ ಅಗತ್ಯಗಳನ್ನು ಪೂರೈಕೆ ಮಾಡಲು ಸಜ್ಜಾಗುತ್ತೇವೆ ಎಂದರು.

ಉತ್ತಮ ಜನ ಬೆಂಬಲ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಾದರಿಯಂತೆ ಅಲ್ಲೂ ಕೂಡ ಐದು ಗ್ಯಾರಂಟಿಗಳನ್ನು ನಾವು ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ. ಆದ್ದರಿಂದ ಗೆಲ್ಲುವ ವಿಶ್ವಾಸ ಉಂಟಾಗಿದೆ ಎಂದರು.

ಅದಾನಿ ವಿರುದ್ದ ಮಾತಾಡಿದರೆ ಪದೇ ಪದೇ ಮಾತನಾಡುತ್ತೀರಿ ಏನ್ನುತ್ತಾರೆ. ಅದಾನಿ ದೇಶವನ್ನು ಲೂಟಿ ಮಾಡುತ್ತಿದ್ದಾನೆ, ರಿಯಾಕ್ಷನರಿ ಸರ್ಕಾರಗಳಿಗೆ ಬೆಂಬಲ ಮಾಡುತ್ತಿದ್ದಾನೆ. ಇದನ್ನು ಬಳಕೆ ಮಾಡುವ ಬಿಜೆಪಿ ಯಾವ ಪಕ್ಷ ತತ್ವ ಸಿದ್ದಾಂತ ಮೇಲೆ ನಿಂತಿದೆ ಎಂದು ಪ್ರಶ್ನಿಸಿದ ಅವರು, ಇಂತಹ ಕ್ರೋನಿ ಕ್ಯಾಪಿಟಲ್ ಗೆ ಬೆಂಬಲಿಸಿಅವರ ಮುಖಾಂತರ ಹಣ ಪಡೆದು ಬಿಜೆಪಿಗರು ಚುನಾವಣೆ ಮಾಡುತಿದ್ದಾರೆ ಎಂದು ಆರೋಪ ಮಾಡಿದರು.

ಪ್ರಧಾನಿ ಮೋದಿ, ಅಮಿತ್ ಶಾ ಸಂಪತ್ತು ಇದ್ದವರನ್ನೇ ಬೆಳೆಸಲು ಮುಂದಾಗಿದ್ದಾರೆ. ಹಾಗಾಗಿ ಮಹಾರಾಷ್ಟ್ರ ದಲ್ಲಿ ಹಣವಂತರಿಗೆ ಮಣೆ ಹಾಕಿದ್ದು, ನಿಜವಾಗಿ ಕೆಲಸ ಮಾಡಿದವರು, ಟಿಕೆಟ್ ಭರವಸೆ ಇಟ್ಟುಕೊಂಡವರು, ಜನತಂತ್ರ ನಂಬಿದವರಿಗೆ ನಿರಾಶೆಯಾಗಿದೆ ಎಂದರು.

ರಜಾಕಾರರ ದಾಳಿ ಸಂದರ್ಭದಲ್ಲಿ ಖರ್ಗೆ ಕುಟುಂಬದ ಬಗ್ಗೆ ಹೇಳಿಕೆ ವಿಚಾರವಾಗಿ ಯೋಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡದ ಮಲ್ಲಿಕಾರ್ಜುನ ಖರ್ಗೆ, ಈಗಾಗಲೇ ಅವರ ಹೇಳಿಕೆಗೆ ಉತ್ತರ ಕೊಟ್ಟಿದ್ದೆನೆ ಮತ್ತೆ ಮಾತನಾಡುವುದಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಮೀಸಲಾತಿ ಗೊಂದಲವಿದೆ ಎನ್ನುವ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ಖರ್ಗೆ, ಸಂವಿಧಾನ ತಂದ ಮೇಲೆ ಸುಟ್ಟು ಹಾಕಿರುವುದು ಅವರೇ ಅಲ್ಲವೇ? ರಾಮಲೀಲಾ ಮೈದಾನದಲ್ಲಿ ಸಂವಿಧಾನ ಒಪ್ಪದೆ ಸುಟ್ಟು ಹಾಕಿದವರು ತಿರಂಗಾ ದ್ವಜವನ್ನು ಕೂಡ ಒಪ್ಪಿಲ್ಲ‌. ಈಗ ಸಂವಿಧಾನ, ಮೀಸಲಾತಿ ಮಾತನಾಡುತ್ತಿರುವುದು ನಗೆ ಪಾಟಲಿನ ವಿಚಾರ ಎಂದರು.

ಟಾಪ್ ನ್ಯೂಸ್

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Delhi-BJp

Setback: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್‌..ಆಪ್‌ನ 3 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ

Arrested: ಬಾಕಿ ಹಣ ಬಿಡುಗಡೆಗೆ 10 ಲಕ್ಷ ರೂ. ಲಂಚ… ರಕ್ಷಣಾ ಖಾತೆಯ 3 ಮಂದಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Ashwin Vaishnav

Bengaluru; ನಗರದಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ: ಅಶ್ವಿನಿ ವೈಷ್ಣವ್

MUST WATCH

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

ಹೊಸ ಸೇರ್ಪಡೆ

Delhi-Stampede-Railway

Maha Kumbh Rush: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 16 ಮಂದಿ ದುರ್ಮರಣ!

Kottigehara-Bill

Kottigehara: 35 ವರ್ಷಗಳ ಹಿಂದೆ ಸೇವಿಸಿದ್ದ ಊಟದ ಬಿಲ್‌ ಪಾವತಿ!

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

Ranveer Allahbadia: ನಾನು ಎಲ್ಲೂ ಓಡಿ ಹೋಗಿಲ್ಲ: ಅಲಹಬಾದಿಯಾ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

‘Y’ security: ತಮಿಳು ನಟ ವಿಜಯ್‌ಗೆ ಭದ್ರತೆ ಕೊಟ್ಟ ಕೇಂದ್ರ ಸರ್ಕಾರ

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Justice Abhay Oka: ಕೋರ್ಟ್ ಗೆ “ಮಹಾ’ಗಿಂತ ಕರ್ನಾಟಕದಲ್ಲಿ ಹೆಚ್ಚು ಮೂಲಸೌಕರ್ಯ: ಜಡ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.