ಸಿಹಿ ಬರಲ್ಲ-ಉಪ್ಪು ನೀರಿಗೆ ಬರವಿಲ್ಲ
Team Udayavani, Apr 28, 2017, 2:52 PM IST
ವಾಡಿ: ಬಿಸಿಲು ಕಾವು ಏರುತ್ತಿದ್ದಂತೆ ಹಲವು ಗ್ರಾಮಗಳಲ್ಲಿ ಜಲಕ್ಷಾಮ ಉಂಟಾಗುತ್ತಿದ್ದು, ಬೋರ್ವೆಲ್ ನೀರು ಕುಡಿದು ಕೀಲು ನೋವು ಸಂಕಟಗಳೊಂದಿಗೆ ಗ್ರಾಮಸ್ಥರು ಬದುಕು ದೂಡುವಂತಾಗಿದೆ. ಪಟ್ಟಣ ಸಮೀಪದ ಹಳಕರ್ಟಿ, ಲಾಡ್ಲಾಪುರ ಗ್ರಾಮಗಳಿಗೆ ಕುಡಿಯುವ ಶುದ್ಧ ನೀರಿನ ಸಮಸ್ಯೆ ಎದುರಾಗಿದ್ದು, ತೆರೆದ ಬಾವಿ, ಕೊಳವೆ ಬಾವಿಗಳ ಕೊಳೆ ನೀರೆ ಗತಿಯಾಗಿದೆ.
ಬೋರ್ವೆಲ್ಗಳಿಂದ ಬರುವ ಲವಣ ಮಿಶ್ರಿತ ಉಪ್ಪು ನೀರು ಗಂಟಲು ಕೊರೆಯುತ್ತಿದೆ. ಬಾವಿಗಳ ಸವಳು ನೀರು, ದೇಹದ ಗೂಡಿಗೆ ರೋಗದ ಸಮಸ್ಯೆ ತಂದಿಡುತ್ತಿದೆ. ಹಳಕರ್ಟಿ ಗ್ರಾಮದ ವಿವಿಧ ಬಡಾವಣೆಗಳಿಗೆ ಶುದ್ಧೀಕರಿಸದ ಅಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ.
ಸ್ವಚ್ಚಗೊಳಿಸದ ಬಾವಿಗಳ ನೀರು ಹಸಿರುಪಾಚಿಯಿಂದ ಕೂಡಿದ್ದು, ಹುಳುಗಳು ಕಾಣಿಸಿಕೊಂಡಿವೆ. ಪ್ಲೋರಾಯಿಡ್ ಮಿಶ್ರಿತ ಬೋರ್ ವೆಲ್ ನೀರು ಸರಬರಾಜಿಗೆ ಬರವಿಲ್ಲ. ಸಾಕಾಗುವಷ್ಟು ನೀರು ಪೂರೈಕೆಯಾಗುತ್ತಿದೆ. ಆದರೆ ಆ ಉಪ್ಪು ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ.
ಕೆಲ ಬೋರ್ವೆಲ್ ಗಳಿಂದ ಸಿಹಿ ನೀರು ಬರುತ್ತಿದ್ದು, ಅಗತ್ಯಕ್ಕೆ ತಕ್ಕಷ್ಟು ನೀರು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯತಿ ಆಡಳಿತ ವಿಫಲವಾಗಿದೆ ಎಂದು ಉಭಯ ಗ್ರಾಮಸ್ಥರು ದೂರಿದ್ದಾರೆ. ಲಾಡ್ಲಾಪುರ ಗ್ರಾಮದ ಬೀದಿಯ ನಳಗಳಿಂದ ನೀರು ಬೇಕಾಬಿಟ್ಟಿ ಪೋಲಾಗುತ್ತಿದ್ದು, ಜವಾಬ್ದಾರಿಯಿಂದ ಜಲ ರಕ್ಷಣೆಗೆ ಮುಂದಾಗಬೇಕಿದ್ದ ಗ್ರಾಪಂ ಅಧಿಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ನಿಷ್ಕಾಳಜಿ ತೋರುತ್ತಿದ್ದಾರೆ.
ಜಲಕ್ಷಾಮದ ಭೀಕರ ಪರಸ್ಥಿತಿ ಮಧ್ಯೆ ಜೀವಜಲದೊಂದಿಗೆ ಮಕ್ಕಳು ಆಟವಾಡುತ್ತಿರುವ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ನೀರು ಸರಬರಾಜು ನಿಯಮ ಪಾಲಿಸದ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೋರ್ವೆಲ್ ನೀರು ಬಳಕೆಗಾಗುತ್ತಿದ್ದು, ಕುಡಿಯಲು ನೀರಿಲ್ಲದಂತಾಗಿದೆ. ಶುದ್ಧ ನೀರಿನ ಭಾಗ್ಯ ನಮಗೇಕಿಲ್ಲ ಎಂಬ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸವವರೇ ಇಲ್ಲದಂತಾಗಿದೆ.
ಒಂದೆಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ನೀರು ಬೀದಿ ಪಾಲಾಗುತ್ತಿದೆ. ಜಾನುವಾರುಗಳು ಕುಡಿಯಲು ಹಿಂಜರಿಯುವ ಬೋರ್ ವೆಲ್ನ ಉಪ್ಪು ನೀರು ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಕುಡಿಯಲು ಶುದ್ಧೀಕರಿಸಿದ ನೀರು ಸರಬರಾಜು ಮಾಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
* ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aland: ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು
Chincholi: ಸಾಲ ಭಾದೆ, ಮುಂಗಾರು ಬೆಳೆ ಹಾನಿಯಿಂದ ಮನನೊಂದು ರೈತ ಆತ್ಮಹತ್ಯೆ
Chittapur: 120 ಮನೆಗಳಿಗೆ ನುಗ್ಗಿದ ಮಳೆ ನೀರು; ಅಪಾರ ಹಾನಿ
Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ
ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ! ಕಾಂಗ್ರೆಸ್ನವರು ಸಂಘದ ಟ್ರೈನಿಂಗ್ ತಗೊಳ್ಳಿ: ಸೂಲಿಬೆಲೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Israel ಸರ್ಜಿಕಲ್ ಸ್ಟ್ರೈಕ್: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್ ಬಾಂಬ್!
BCCI: ಇಂದು ಬಿಸಿಸಿಐ ವಾರ್ಷಿಕ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.