![cbsc](https://www.udayavani.com/wp-content/uploads/2025/02/cbsc-415x265.jpg)
![cbsc](https://www.udayavani.com/wp-content/uploads/2025/02/cbsc-415x265.jpg)
Team Udayavani, Sep 9, 2022, 5:23 PM IST
ಆಳಂದ: ಪಟ್ಟಣದ ಕೆಲ ರಸ್ತೆಗಳಿಗೆ ಹೆಸರು ಬದಲಾವಣೆಗೆ ಮುಂದಾದ ಪುರಸಭೆ ನಿರ್ಣಯಕ್ಕೆ ರಜ್ವಿರೋಡ್ ವ್ಯಾಪಾರಿಗಳ ಸಂಘ ಹಾಗೂ ಅಸೋಶಿಯನ್ ಅಧ್ಯಕ್ಷ ರಫೀಕ್ ಇನಾಮಾದಾರ ತೀವ್ರ ವಿರೋಧ ವ್ಯಕ್ತಪಡಿಸಿದರು.
ಪಟ್ಟಣದ ಲಿಂಗಾಯಿತ ಭವನದ ಅಭಿ ಡೈ ಇನ್ ಹೋಟೆಲ್ ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಜ್ವಿರೋಡ್ ಎನ್ನುವ ಹೆಸರಿಗೆ ಐತಿಹಾಸಿಕ ಪುರಾವೆ ಇದೆ. ಹೆಸರು ಬದಲಾಯಿಸಬೇಕಾದರೆ ಹೊಸ ರಸ್ತೆಗೆ ಹೆಸರು ಸೂಚಿಸಿ ಎಂದು ಮನವಿ ಮಾಡಿದರು.
ಪಟ್ಟಣದ ವಿವಿಧ ರಸ್ತೆಗಳಿಗಳಿಗೆ ಸ್ವಾತಂತ್ರ್ಯ ಸೇನಾನಿಗಳ ಹೆಸರಿನಲ್ಲಿ ನಾಮಕರಣ ಮಾಡುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ, ರಜ್ವಿರೋಡ್ ರಸ್ತೆ ಹೆಸರನ್ನು ಬದಲಾವಣೆ ಮಾಡಬೇಡಿ, ಅದಕ್ಕೆ ತನ್ನದೇ ಆದ ಇತಿಹಾಸ ಇದೆ. ಮಟಕಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಕ್ರಾಸ್ ಹೆಸರು ಬದಲಾಗಬಾರದು ಎಂದು ಪುನರುಚ್ಚರಿಸಿದರು.
ಸೆ. 16ರಂದು ಕರೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡಾವಳಿಯ 4ರಲ್ಲಿ ರಸ್ತೆ ನಾಮಕರಣ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಯಾವ ರಸ್ತೆಗೂ ನಾಮಕರಣ ಕೈಗೊಳ್ಳಲು ವಿರೋಧವಿಲ್ಲ. ಆದರೆ ಬಸ್ ನಿಲ್ದಾಣದಿಂದ ಸಿದ್ಧಾರ್ಥ ಚೌಕ್ ವರೆಗೆ ಇರುವ ರಸ್ತೆಗೆ ಹೈದ್ರಾಬಾದ್ನ ಇಬ್ರಾಹಿಂ ರಜ್ವಿ ಅವರು ಬರಗಾಲದಲ್ಲಿ ಜನರಿಗೆ ಕೆಲಸಕೊಡುವ ಉದ್ದೇಶದಿಂದ ಹೈದ್ರಾಬಾದ್ನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಿ ಈ ರಸ್ತೆ ನಿರ್ಮಿಸಿದ್ದಾರೆ. ಅವರ ಸಮಾಧಿಯೂ ಇಲ್ಲಿನ ದರ್ಗಾದಲ್ಲಿದೆ. ಏಕಾಂತರಾಮಯ್ಯನ ಮಂದಿರ, ಲಾಡ್ಲೆ ಮಶಾಕ್ ದರ್ಗಾದಂತ ರಸ್ತೆಗಳು ಐತಿಹಾಸವಾಗಿವೆ. ಆದ್ದರಿಂದ ಈ ಹೆಸರನ್ನು ಯಥಾವತ್ತಾಗಿ ಇಡಬೇಕು ಎಂದು ಆಗ್ರಹಿಸಿದರು.
ಜನರ ಆಸೆಯಂತೆ ಕೆಲಸಗಳಾಗಬೇಕು. ಆದರೆ ಶಾಸಕರ ಆಸೆಯಂತೆ ಕೆಲಸಗಳು ನಡೆಯುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಯಾವುದೇ ಧರ್ಮದ ಯುವಕರು ಬಲಿಯಾಗದೆ ಅಭಿವೃದ್ಧಿಗೆ ಒತ್ತುಕೊಡಬೇಕು. ಪ್ರತಿಯೊಂದು ಆಡಳಿತದಲ್ಲಿ ಶಾಸಕರ ಬದಲು ಅವರ ಪುತ್ರ ಹರ್ಷಾನಂದ ಹಸ್ತಕ್ಷೇಪ ಮಾಡತೊಡಗಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಜೆಡಿಎಸ್ ಸದಸ್ಯ ವೈಹೀದ್ ಜರ್ದಿ, ಸಂಘದ ಉಪಾಧ್ಯಕ್ಷ ಅಪ್ಪಾಸ್ ಅಲಿ ಜರ್ದಿ, ಫೀರೋಜ್ ಪಟೇಲ್ ಮತ್ತಿತರರಿದ್ದರು.
Kalaburagi: ಸಾವಿರ ಕೋ.ರೂ ವೆಚ್ಚದ ಕಲ್ಯಾಣಪಥ ಯೋಜನೆಗೆ ಶೀಘ್ರ ಅಡಿಗಲ್ಲು: ಡಾ. ಅಜಯ್ ಸಿಂಗ್
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
Question paper leak ವದಂತಿ ನಂಬದಂತೆ ಸಿಬಿಎಸ್ಇ ಮನವಿ
Madhya Pradesh; ಎ.1ರಿಂದ ಕಡಿಮೆ ಅಲ್ಕೋಹಾಲ್ ಇರುವ ಬಾರ್ ಶುರು
ಸಿಎಸ್ಟಿ – ಮಂಗಳೂರು ಎಕ್ಸ್ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
ಲಂಬವಾಗಿ ಟೇಕಾಫ್ ಆಗುವ ಏರ್ ಆ್ಯಂಬುಲೆನ್ಸ್ ಶೀಘ್ರ ಭಾರತದಲ್ಲಿ ಲಭ್ಯ
Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?
You seem to have an Ad Blocker on.
To continue reading, please turn it off or whitelist Udayavani.