![Nothing CMF ನಿಂದ ಫೋನ್, ವಾಚ್ , ಬಡ್ಸ್ ಬಿಡುಗಡೆ](https://www.udayavani.com/wp-content/uploads/2024/07/WATCH-415x226.jpg)
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ
Team Udayavani, Feb 21, 2017, 2:47 PM IST
![gul5.jpg](https://www.udayavani.com/wp-content/uploads/2017/02/21/gul5.jpg)
ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಗರದಲ್ಲಿ ರಾಜ್ಯವ್ಯಾಪಿ ಕರೆ ಮೇರೆಗೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮುಖ್ಯಮಂತ್ರಿಗಳ ಪರವಾಗಿ 1000 ಕೋಟಿ ರೂ. ನೀಡಿರುವ ಕುರಿತು ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಾಗಿದೆ. ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವ ಡೈರಿಯಲ್ಲಿ ಪಕ್ಷದ ವರಿಷ್ಠರಿಗೆ ಹಣ ಸಂದಾಯ ಮಾಡಿದ್ದು, ದಾಖಲೆ ಇದೆ. ಅದನ್ನು ಸ್ವತಃ ಗೋವಿಂದರಾಜು ಅವರು ಐಟಿ ಇಲಾಖೆಗೆ ಡೈರಿಯಲ್ಲಿನ ಅಂಶಗಳು ಬಿಜೆಪಿಯವರಿಗೆ ಹೇಗೆ ಗೊತ್ತಾಗಿವೆ ಎಂದು ಪತ್ರ ಬರೆಯುವ ಮುಖಾಂತರ ಒಪ್ಪಿಕೊಂಡಿದ್ದಾರೆ.
ಈ ಕುರಿತು ಸಮಗ್ರ ಮಾಹಿತಿ ಬಹಿರಂಗಪಡಿಸಲು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಕ್ಕಿನ ಮೇಲ್ಸೇತುವೆ ಯೋಜನೆಗೆ ಮುಖ್ಯಮಂತ್ರಿಗಳ ಆಪ್ತರಿಗೆ, ಕುಟುಂಬದವರಿಗೆ 65 ಕೋಟಿ ರೂ. ಲಂಚ ನೀಡಲಾಗಿದೆ. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಒಂದು ದಾಖಲೆ ತೋರಿಸಲಿ ಎಂದು ಮೊಂಡುವಾದ ಪ್ರತಿಪಾದಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದಲ್ಲಿ ವರದಿಯಾದಂತೆ ಸಚಿವ ರಮೇಶ ಜಾರಕಿಹೊಳಿ ಮತ್ತು ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷಿ ಹೆಬ್ಟಾಳಕರ್ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದು 162 ಕೋಟಿ ರೂ.ಗಳ ಅಕ್ರಮ ಸಂಪತ್ತು, ದಾಖಲೆಗಳಿಲ್ಲದ 41 ಲಕ್ಷ ರೂ. ನಗದು, 12 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದರೂ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನು ನೋಡಿದರೆ ಮುಖ್ಯಮಂತ್ರಿಗಳು ಭ್ರಷ್ಟರ ಜತೆ ಕೈಗೂಡಿಸಿರುವುದು ಸಾಬೀತುಪಡಿಸುತ್ತದೆ. ಒಟ್ಟಾರೆ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪಕ್ಷದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಪಕ್ಷದ ನಗರ ಜಿಲ್ಲಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸಚಿವರಾದ ಬಾಬುರಾವ ಚವ್ಹಾಣ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ವಿಧಾನ ಪರಿಷತ್ ಸದಸ್ಯರಾದ ಕೆ.ಬಿ. ಶಾಣಪ್ಪ, ಅಮರನಾಥ ಪಾಟೀಲ,
ಮಾಜಿ ಶಾಸಕ ಎಂ.ವೈ. ಪಾಟೀಲ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮುಖಂಡರಾದ ದಯಾಘನ್ ಧಾರವಾಡಕರ, ರವಿ ಬಿರಾದಾರ, ಪ್ರಕಾಶ ಜಮಾದಾರ, ಶರಣು ಸಲಗರ, ಸೂರ್ಯಕಾಂತ ನಾಕೇದಾರ, ವಿದ್ಯಾಸಾಗರ ಕುಲಕರ್ಣಿ, ಸಂಗಮೇಶ ರಾಜೋಳೆ, ಬಸವರಾಜ ಮತ್ತಿಮೂಡ, ಶಿವಶರಣಪ್ಪ ನಿಗ್ಗುಡಗಿ, ಮಲ್ಲಿಕಾರ್ಜುನ ಲಿಂಗದಳ್ಳಿ, ಶ್ಯಾಮರಾವ ಪ್ಯಾಟಿ, ನಾಮದೇವ ರಾಠೊಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
![Nothing CMF ನಿಂದ ಫೋನ್, ವಾಚ್ , ಬಡ್ಸ್ ಬಿಡುಗಡೆ](https://www.udayavani.com/wp-content/uploads/2024/07/WATCH-415x226.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ](https://www.udayavani.com/wp-content/uploads/2024/07/SWAMIJI-150x98.jpg)
Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ
![Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ](https://www.udayavani.com/wp-content/uploads/2024/07/sahitya-150x83.jpg)
Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ
![6-kalburgi](https://www.udayavani.com/wp-content/uploads/2024/07/6-kalburgi-150x90.jpg)
Kalaburagi: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ
![4-chincholi](https://www.udayavani.com/wp-content/uploads/2024/07/4-chincholi-150x90.jpg)
Chincholi: ಆಕ್ಸಿಜನ್ ಪ್ಲಾಂಟ್ ನಲ್ಲಿ ಅನಿಲ ಸೋರಿಕೆ
![Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್](https://www.udayavani.com/wp-content/uploads/2024/07/alok-1-150x83.jpg)
Flashing lights of vehicles; ಮೂರು ದಿನದಲ್ಲಿ 3700 ಪ್ರಕರಣ: ಅಲೋಕ್ ಕುಮಾರ್
MUST WATCH
ಹೊಸ ಸೇರ್ಪಡೆ
![Nothing CMF ನಿಂದ ಫೋನ್, ವಾಚ್ , ಬಡ್ಸ್ ಬಿಡುಗಡೆ](https://www.udayavani.com/wp-content/uploads/2024/07/WATCH-150x82.jpg)
Nothing CMF ನಿಂದ ಫೋನ್, ವಾಚ್ , ಬಡ್ಸ್ ಬಿಡುಗಡೆ
![Russiya-Modi](https://www.udayavani.com/wp-content/uploads/2024/07/Russiya-Modi-150x90.jpg)
Modi Russia Visit: ರಷ್ಯಾದ ಮಾಸ್ಕೊಗೆ ಬಂದಿಳಿದ ಪ್ರಧಾನಿ ಮೋದಿ
![Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ](https://www.udayavani.com/wp-content/uploads/2024/07/aa-1-150x94.jpg)
Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ
![1-saddasd](https://www.udayavani.com/wp-content/uploads/2024/07/1-saddasd-150x82.jpg)
Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ
![1-weewq](https://www.udayavani.com/wp-content/uploads/2024/07/1-weewq-150x94.jpg)
Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.