![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 7, 2020, 12:14 PM IST
ಕಲಬುರ್ಗಿ: ಮೌಲ್ಯಗಳು ಅಪಮೌಲ್ಯಗಳಾಗುತ್ತಿರುವ ಸಂದರ್ಭದಲ್ಲಿ ಜನಪದ ಸಾಹಿತ್ಯ ಎಂದಿಗಿಂತ ಹೆಚ್ಚು ಅವಶ್ಯಕವಾಗಿದೆ ಎಂದು ಡಾ. ಶೈಲಜಾ ಬಾಗೇವಾಡಿ ಹೇಳಿದರು.
ಸಮ್ಮೇಳನದ ದ್ವಿತೀಯದಿನ ನಡೆದ ಜಾನಪದ ಜಗತ್ತು ಗೋಷ್ಠಿಯಲ್ಲಿ ಜಾನಪದ ಸಾಹಿತ್ಯದ ವಿಷಯದ ಕುರಿತು ಮಾತನಾಡಿದರು. ಜಾಗತೀಕರಣದ ಯುಗದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಮಾನವೀಯ ಮೌಲ್ಯಗಳು, ಜೀವನ ಪದ್ಧತಿ, ರೀತಿ-ನೀತಿ ಪ್ರತಿಪಾದಿಸುವ ಜಾನಪದ ಸಾಹಿತ್ಯ ಹೆಚ್ಚು ಅವಶ್ಯಕವೆನಿಸುತ್ತದೆ ಎಂದರು. ಜಾನಪದ ಸಾಹಿತ್ಯದಲ್ಲಿನ
ಜೀವನಮೌಲ್ಯ ಶಿಷ್ಟ ಸಾಹಿತ್ಯದಲ್ಲಿ ಸಿಗಲಾರದು.
ಅನುಭವಾಮೃತವೇ ಇದಕ್ಕೆ ಕಾರಣವಾಗಿದೆ. ಜಾನಪದ ಸಾಹಿತ್ಯದಲ್ಲಿ ವೈಯಕ್ತಿಕ ಮೌಲ್ಯಕ್ಕಿಂತ, ಸಾಮಾಜಿಕ ಮೌಲ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಜಾನಪದವು ಹೃದಯದಿಂದ ಹೃದಯಕ್ಕೆ ಹರಿಯುವ ಜೀವದ್ರವ್ಯವಾಗಿದೆ. ಬದುಕಿನ ರಸಾನುಭವ ಇದರಲ್ಲಿದೆ. ಅದರೂ ಕೆಲವರು ಜಾನಪದ ಸಾಹಿತ್ಯವನ್ನು ಲಘುವಾಗಿ ಪರಿಗಣಿಸುತ್ತಿರುವುದು ದುರ್ದೈವದ ಸಂಗತಿ. ಜನವಾಣಿ ಬೇರು, ಕವಿವಾಣಿ ಹೂವು ಎಂದು ಹಿರಿಯ ಕವಿಗಳೇ ಹೇಳಿದ್ದನ್ನು ಸ್ಮರಿಸಿಕೊಳ್ಳುವುದು ಸೂಕ್ತವಾಗಿದೆ ಎಂದರು. ಡಾ.ರಾಜಶ್ರೀ ಜಾನಪದ ಹಾಗೂ ಸಮಕಾಲೀನತೆ ಕುರಿತು ಮಾತನಾಡಿ, ಪ್ರಸ್ತುತ ಜಾನಪದ ಲಿಖೀತ ರೂಪದಲ್ಲಿ ಮಾತ್ರವಲ್ಲ, ಆದು ನಾಗರಿಕ ಹಾಗೂ ಜಾಗತಿಕ ನೆಲೆಯಲ್ಲಿ ವಿಸ್ತರಿತಗೊಂಡಿದೆ.
ಜಾನಪದವನ್ನು ಅಧ್ಯಯನ ಶಿಸ್ತಾಗಿ ಬೆಳೆಸಲಾಗುತ್ತಿದೆ. ಇದು ಪರಿಶೀಲನೆಯ ಹೊಸ ವಿಷಯವಾಗಿ ರೂಪಗೊಂಡಿದೆ ಎಂದರು. ಡಾ.ಹಣಮಂತರಾವ ದೊಡ್ಡಮನಿ ಜಾನಪದ ಕಲೆಗಳು ಕುರಿತು ಮಾತನಾಡಿ, ಬಾಯಿಯಿಂದ ಕಿವಿಗೆ ಕಂಠಸ್ಥವಾಗಿ ಬಂದ ಸಾಹಿತ್ಯವೇ ಜಾನಪದ. ಮಾನವರಲ್ಲಿ ಮಾನವೀಯ ಮೌಲ್ಯಗಳು ಅರಂಭಗೊಂಡಂದಿನಿಂದ ಜಾನಪದ ಅರಂಭಗೊಂಡಿದೆ. ಜಾಗತೀಕರಣದ ಯುಗದಲ್ಲಿ ಯಂತ್ರಗಳಿಂದಾಗಿ ಜಾನಪದ ಹಾಡುಗಳು ಮಾಯವಾಗುತ್ತಿವೆ. 10-15 ದಿನಗಳ ಕಾಲ ನಡೆಯುತ್ತಿದ್ದ ಮದುವೆಗಳು ಕೆಲ ಗಂಟೆಗಳಿಗೆ ಸೀಮಿತಗೊಳ್ಳುತ್ತಿರುವುದರಿಂದ ಜಾನಪದಕ್ಕೆ ಆಚರಣೆಗಳಲ್ಲಿ ಸ್ಥಾನ ಇಲ್ಲವಾಗಿದೆ.
ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ತತ್ವಪದಗಳಿಂದ ಜಾನಪದವನ್ನು ಜನರಿಗೆ ಮುಟ್ಟಿಸುವ ಪ್ರಮುಖ ಕಾರ್ಯ ಮಾಡಿದರು ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬಿ.ಆರ್. ಪೊಲೀಸ್ ಪಾಟೀಲ, ಬಯಲಾಟ ಹಾಗೂ ಯಕ್ಷಗಾನ ಕುರಿತು ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ಬದಲಿಗೆ ಜಾನಪದ ಸಾಹಿತ್ಯವನ್ನು ನೀಡುವ ಅವಶ್ಯಕತೆಯಿದೆ. ಇದೇ ಸಂದರ್ಭದಲ್ಲಿ ಅಪ್ಪಟ ಜಾನಪದ ಹಾಡುಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಹೆಚ್ಚು ಜನರಿಗೆ ಮುಟ್ಟಿಸಬೇಕು. ಜಾನಪದ ಸಾಹಿತ್ಯವನ್ನು ಓದಿದರೆ ಸಾಲದು, ಅದನ್ನು ಅನ್ವಯಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉತ್ತರ ಕನ್ನಡದವರು ಯಕ್ಷಗಾನ ಬೆಳೆಸಿದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದವರು ದೊಡ್ಡಾಟ, ಸಣ್ಣಾಟ ಬೆಳೆಸಬೇಕು. ನಮ್ಮ ಕಲೆಗಳನ್ನು ಪೋತ್ಸಾಹಿಸಬೇಕು ಎಂದರು.
ವಿಶ್ವನಾಥ ಕೋಟಿ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.