ಸಮಾಜಕ್ಕಾಗಿ ಸಂಶೋಧನೆ ಮಾಡಿ
Team Udayavani, Feb 11, 2017, 2:48 PM IST
ಕಲಬುರಗಿ: ಸಮಾಜಕ್ಕಾಗಿ ಮತ್ತು ಸಮಾಜ ನಂಬುವಂತ ಸಂಶೋಧನೆ ಮಾಡಿ. ಅದಕ್ಕಾಗಿ ಒಂದಷ್ಟು ಶ್ರಮವಹಿಸಿ. ಅದರಿಂದ ನಿಮ್ಮ ಜೀವನಕ್ಕೆ ಮಹತ್ವ ಸಿಗಲಿದೆ ಎಂದು ಗುವಿವಿ ಕುಲಪ್ರತಿ ಪ್ರೊ| ಎಸ್.ಆರ್. ನಿರಂಜನ್ ಹೇಳಿದರು.
ಇಲ್ಲಿನ ಗುವಿವಿ ಮಂಥನ ಸಭಾಗಂಣದಲ್ಲಿ ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮ್ಮದೊಂದು ಸಂಶೋಧನೆ ಸಮಾಜದಲ್ಲಿನ ಜನರಿಗೆ ಅನುಕೂಲ ಆಗುವಂತಿದ್ದರೆ ಅದೂ ನಿಜಕ್ಕೂ ಉತ್ತಮ ಸಂಶೋಧನೆ. ಅದು ನಿಮ್ಮನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ. ವಿಷಯಗಳ ಸುತ್ತಲಿನ ಪರಿಧಿಯಲ್ಲಿ ಕಳೆದು ಹೋಗದೆ ಅದರ ತಳಕ್ಕೆ ಹೋಗಿ ಹುಡುಕಿ ಬರೆಯಿರಿ. ಪ್ರತಿಯೊಂದು ಪ್ರಬಂಧ ಜಾಗತಿಕ ಮಟ್ಟದಲ್ಲಿ ನಿಮ್ಮ ಸ್ಥಾನವನ್ನು ಖಾತರಿ ಮಾಡುತ್ತದೆ ಎಂದರು.
ಗುವಿವಿಯಲ್ಲಿ ಹಲವಾರು ಉಪನ್ಯಾಸ ಮಾಲಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಹೊಣೆ ಸಂಶೋಧನಾ ವಿದ್ಯಾರ್ಥಿಗಳ ಮೇಲಿದೆ. ಒಂದು ಉಪನ್ಯಾಸ ವಿದ್ಯಾರ್ಥಿಗೆ ಆಮ್ಲಜನಕ ಇದ್ದಂತೆ. ಅದನ್ನು ಎಷ್ಟು ಸರಿಯಾಗಿ ಬಳಕೆ ಮಾಡಲಾಗುತ್ತದೋ ಅಷ್ಟು ಒಳ್ಳೆಯ ಭವಿಷ್ಯ ರೂಪುಗೊಳ್ಳುವುದು ಎಂದರು.
ಗುವಿವಿ ಕುಲಸಚಿವ ಪ್ರೊ| ದಯಾನಂದ ಅಗಸರ ಮಾತನಾಡಿ, ಸಾಮಾಜಿಕ ಕಳಕಳಿಯಿಂದ ಮಾಡಿದ ಸಂಶೋಧನೆ ಸಮಾಜಕ್ಕೆ ಸಹಾಯಕವಾಗುತ್ತದೆ ಎಂದು ಹೇಳಿದರು. ಉಪನ್ಯಾಸ ಮಾಲಿಕೆ ವಿಷಯವನ್ನು ಪ್ರೊ| ಮೂಲ್ಗೆ ಮಂಡಿಸಿದರು. ಪ್ರೊ| ವೆಂಕಟರಮನ್, ಸಂಶೋಧನಾ ವಿದ್ಯಾರ್ಥಿಗಳಾದ ಮೋಹನ್, ಮೊಹನರೆಡ್ಡಿ, ವಿದ್ಯಾರ್ಥಿನಿ ಹಿನಾ, ಪರ್ವಿನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೆ ವೇಳೆ ಆಯ್ಕೆಗೊಂಡ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿನಿ ನಗ್ಮಾ ಎಸ್. ನಿರೂಪಿಸಿದರು. ಪ್ರೊ| ಪ್ರತಿಮಾ ಮಠದ ಸ್ವಾಗತಿಸಿದರು. ಪ್ರೊ| ಚಂದ್ರಕಾಂತ ಕೆಳಮನಿ ಪರಿಚಯಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಧಿಕಾರಿ ಕೆ.ಸಿದ್ದಪ್ಪ, ಪ್ರೊ| ಶಿವಣ್ಣವರ, ಪ್ರೊ| ಸಣ್ಣಕ್ಕಿ, ಪ್ರೊ| ಅಂಬಿಕಾ ಪ್ರಸಾದ, ಪ್ರೊ| ಕೆ. ಲಿಂಗಪ್ಪ, ಪ್ರೊ| ಸುಲೊಚನಾ, ಡಾ| ಆನಂದ ನಾಯಕ, ಡಾ| ಪ್ರಕಾಶ ನಾಯಕ, ಪ್ರೊ| ಗಾಯಕವಾಡ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ
Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.