Shettar ಐಟಿ-ಇಡಿ, ಸಿಬಿಐ ಭಯದಿಂದ ಕಾಂಗ್ರೆಸ್ ಬಿಟ್ಟಿರಬಹುದು: ಪ್ರಿಯಾಂಕ್
Team Udayavani, Jan 26, 2024, 9:20 PM IST
ಕಲಬುರಗಿ: ಕರ್ನಾಟಕದ ಬಿಜೆಪಿ ನಾಯಕರ ಬಗ್ಗೆ ಕೇಂದ್ರ ನಾಯಕರಿಗೆ ಭರವಸೆ ಇಲ್ಲ. ಆ ಕಾರಣದಿಂದಲೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದವರನ್ನೆಲ್ಲ ಪುನಃ ಗಾಳ ಹಾಕಿ ಕರೆಯಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಜಗದೀಶ ಶೆಟ್ಟರ ಅವರನ್ನು ಕರೆಯಿಸಿಕೊಂಡಿರುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಮತ್ತು ವಿಜಯೇಂದ್ರ ನಾಯಕತ್ವ ದಲ್ಲಿ ಬಿಜೆಪಿ ಸಾಧಿಸಲು ಸಾಧ್ಯ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯ ಬಿಜೆಪಿ ಕೈಬಲಪಡಿಸಲಾಗುತ್ತಿದೆ. ಶೆಟ್ಟರ ಹೇಳಿದಂತೆ ಪ್ರಧಾನಿ ಮೋದಿ ಕೈ ಬಲಪಡಿಸಲು ಅಲ್ಲ ಎಂದು ಕಿಚಾಯಿಸಿದರು.
ಈ ಎಲ್ಲ ಬೆಳವಣಿಗೆ ಗಮನಿಸುತ್ತಿದ್ದರೆ ಕರ್ನಾಟಕದಲ್ಲಿ ಮೋದಿ ಅಲೆ ಏನೂ ಇಲ್ಲ. ಕನ್ನಡಿಗರ ಅಸ್ಮಿತೆಯೇ ದೊಡ್ಡ ಶಕ್ತಿ. ಅದನ್ನು ಪಡೆಯಲು ಬಿಜೆಪಿ ವಿಫಲವಾಗಿದೆ ಎನ್ನುವುದು ಸ್ಪಷ್ಟ ಎಂದ ಪ್ರಿಯಾಂಕ್, ಕಳೆದ ಚುನಾವಣೆಯಲ್ಲಿ ಯಾವ ಬಿಜೆಪಿ ನಾಯಕರ ಮುಂದಾಳತ್ವದಲ್ಲಿ ಬಿಜೆಪಿ ಸಾಗಿತ್ತೋ ಅದೆಲ್ಲವೂ ಕೇಂದ್ರದ ನಾಯಕರಿಗೂ ಗೊತ್ತಿದೆ. ಹೀಗಾಗಿ ಅವರು ಪುನಃ ಎಲ್ಲರನ್ನು ಕರೆಯಿಸಿಕೊಳ್ಳುತ್ತಿದ್ದಾರೆ ಎಂದರು.
ಐಟಿಯಿಂದ ಬೆದರಿಕೆ: ಕೇಂದ್ರವಲ್ಲ, ರಾಜ್ಯದಲ್ಲೂ ಐಟಿ-ಇಡಿ ಮತ್ತು ಸಿಬಿಐಯಿಂದ ಬೆದರಿಕೆಗಳನ್ನು ಹಾಕಿಸಿ ಬಿಜೆಪಿ ಬಿಟ್ಟು ಹೋದವರನ್ನು ಕರೆಯಿಸಿಕೊಳ್ಳುವುದು, ಬೇರೆ ಪಕ್ಷದಲ್ಲಿ ಬಲಾಡ್ಯರಿದ್ದರೆ ಅವರನ್ನು ಕರೆದು ತಮ್ಮಲ್ಲಿ ಸ್ಥಾನ ಕೊಡುವುದು ಬಿಜೆಪಿ ಕೇಂದ್ರ ನಾಯಕರಿಗೆ ಮಾಮೂಲಿಯಾಗಿದೆ. ವಾಸ್ತವದಲ್ಲಿ ಸಿಬಿಐ, ಐಟಿ ಮತ್ತು ಇಡಿ ಅಧಿಕಾರಿಗಳೇ ಬಿಜೆಪಿ ಸ್ಟಾರ್ ಕ್ಯಾಂಪೇನರ್ಗಳು ಎಂದು ಛೇಡಿಸಿದರು.
ಇದರ ಭಾಗವಾಗಿ ಶೆಟ್ಟರ ಅವರನ್ನು ಬೆದರಿಸಿರಬಹುದು. ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಪಕ್ಷದವರು ಅವಮಾನ ಮಾಡಿ ಟಿಕೆಟ್ ಕೊಟ್ಟಿರಲಿಲ್ಲವೋ ಆಗ, ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ನಮ್ಮಲ್ಲಿ ಬಂದರಲ್ಲ. ಈಗ ಏನಾಗಿದೆ ಅವರಿಗೆ? ವಿಧಾನ ಪರಿಷತ್ ಸದಸ್ಯತ್ವ ಕೊಟ್ಟಿರಲಿಲ್ಲವೆ? ಚುನಾವಣೆಯಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ?ಎಂದು ಪ್ರಶ್ನಿಸಿದರು.
ಶೆಟ್ಟರ ಅವರೇ ಹೇಳುವಂತೆ, ಮೋದಿ ಕೈ ಬಲಪಡಿಸಲು ವಾಪಸು ಹೋಗಿದ್ದಾರಂತೆ. ಹಾಗಿದ್ದರೆ ಕರ್ನಾಟಕದಲ್ಲಿ ಮೋದಿ ಕೈ ಬಲವಿಲ್ಲವೇ? ಬಿಜೆಪಿ ಸ್ಟ್ರಾಂಗ್ ಇಲ್ಲವೋ? ಅಥವಾ ಈಗಿರುವ ನಾಯಕರ ಕುರಿತು ಕೇಂದ್ರ ನಾಯಕರಿಗೆ ನಂಬಿಕೆ ಉಳಿದಿಲ್ಲವೋ ಎಂದು ಪ್ರಶ್ನಿಸಿದರು.
ಶಾಸಕ ಲಕ್ಷ್ಮಣ ಸವದಿ ಕುರಿತು ಕೇಳಿದಾಗ, ಆ ಎಲ್ಲ ವಿಚಾರಗಳನ್ನು ಪಕ್ಷದ ಅಧ್ಯಕ್ಷರು, ಹಿರಿಯರು ನೋಡಿಕೊಳ್ಳುತ್ತಾರೆ. 138 ವರ್ಷದ ಕಾಂಗ್ರೆಸ್ ಯಾರೇ ಬಂದರೂ, ಹೋದರೂ ವಿಚಲಿತಗೊಳ್ಳುವುದಿಲ್ಲ. ಇದರ ಬೇರು ಬಲವಾಗಿವೆ ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!
Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ
Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.