![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Dec 17, 2022, 3:40 PM IST
ಕಲಬುರಗಿ: ವರ್ಷದೊಳಗೆ ತಲೆ ಎತ್ತಿರುವ ಜಿಲ್ಲೆಯ ಚಿಂಚೋಳಿ ಬಳಿಯ ಸಿದ್ದಸಿರಿ ( ಸಕ್ಕರೆ ಕಾರ್ಖಾನೆ ) ಇಥೆನಾಲ್ ಮತ್ತು ವಿದ್ಯುತ್ ಉತ್ಪಾದನಾ ಘಟಕವನ್ನುಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಶಾಸಕ ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 18ಕ್ಕೆ ಇಥೆನಾಲ್ ಘಟಕ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಫೆಬ್ರವರಿ ಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಿದ್ದಗೊಂಡ ನಂತರ ಪ್ರಧಾನಿ ಅವರಿಂದ ಉದ್ಘಾಟನೆಯಾಗಲಿದ್ದು, ಪ್ರಧಾನಿಮಂತ್ರಿಗಳ ದಿನಾಂಕ ಪಡೆಯುವಂತೆ ಕೇಂದ್ರದ ಸಚಿವ ರಾದ ಪ್ರಹ್ಲಾದ ಜೋಶಿ, ಭಗವಂತ ಖೂಬಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಹೇಗಿದ್ದರೂ ಚುನಾವಣೆ ಇರುವುದರಿಂದ 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಫೆಬ್ರವರಿ ಎರಡನೇ ವಾರದಲ್ಲಿ ಉದ್ಘಾಟನೆಗೆ ಮುಹೂರ್ತ ಸಿಗುವ ಸಾಧ್ಯತೆಗಳಿವೆ ಎಂದರು.
ಪ್ರಾಯೋಗಿಕ ವಾಗಿ ಪ್ರಾರಂಭವಾದ ನಂತರ ಜನವರಿ 27ಕ್ಕೆ ಎಥೆನಾಲ್ ಉತ್ಪಾದನೆ ಶುರುವಾಗುತ್ತದೆ. ಅದೇ ರೀತಿ 30 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸಹ ಸಿದ್ದಗೊಂಡಿದ್ದು, ಒಟ್ಟಾರೆ ಪ್ರಧಾನಿ ಅವರು ಸಿದ್ದಸಿರಿ ಇಥೆನಾಲ್ ಹಾಗೂ ವಿದ್ಯುತ್ ಉತ್ಪಾದನಾ ಘಟಕ ಉದ್ಘಾಟಿಸುವರು. 30 ಮೆಗಾವ್ಯಾಟ್ ಕೊಜೆನ್ ಘಟಕದಲ್ಲಿ 12ರಿಂದ 15 ಮೆಗಾವ್ಯಾಟ್ ವಿದ್ಯುತ್ ರಫ್ತು ಮಾಡಲು ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.ಮುಂದಿನ ವರ್ಷದಿಂದ 16 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಯುವ ಹಾಗೂ ದಿನಕ್ಕೆ 10 ಲಕ್ಷ ಟನ್ ಕಬ್ಬು ಪ್ರತಿದಿನ ನುರಿಯಲಿದೆ. ಕಬ್ಬು ಪೂರೈಸಿದ ರೈತರಿಗೆ 15 ದಿನದೊಳಗೆ ಹಣ ಪಾವತಿಸಲಾಗುವುದು. ಒಟ್ಟಾರೆ ಕಬ್ಬಿನ ( ಸಕ್ಕರೆ) ಕಾರ್ಖಾನೆಯಿಂದ 15 ಸಾವಿರ ಜನರು ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಪಡೆಯುವಂತಾಗಿದೆ ಎಂದು ಯತ್ನಾಳ್ ಹೇಳಿದರು.
ಅಧಿವೇಶನದಲ್ಲಿ ಆಸಕ್ತಿಯಿಂದ ಭಾಗಿ
ತಾವಂತು ಸಚಿವ ಸ್ಥಾನ ಕೇಳಿಯೇ ಇಲ್ಲ. ಹೀಗಾಗಿ ಅಸಮಾಧಾನ ಮಾತೇ ಬರದು. ಆದ್ದರಿಂದ ಬೆಳಗಾವಿ ಅಧಿವೇಶನದಿಂದ ದೂರ ಉಳಿಯುವ ಪ್ರಶ್ನೆಯೇ ಎದುರಾಗದು. ಪಂಚಮಸಾಲಿ ಮೀಸಲಾತಿ, ವಕೀಲರ ರಕ್ಷಣೆ ಕಾಯ್ದೆ, ಓಪಿಎಸ್ ಪದ್ದತಿ ಜಾರಿ, ಕೋಲಿ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಿಕೆ, ಕುರುಬರಿಗೆ ಎಸ್ಟಿಗೆ ಸೇರಿಸುವುದು ಸೇರಿದಂತೆ ಹತ್ತಾರು ವಿಷಯಗಳ ಕುರಿತು ಪ್ರಮುಖ ವಾಗಿ ಚರ್ಚಿಸಬೇಕಿದೆ ಎಂದರು.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಇಲ್ಲವೇ ಸಿಎಂ ಬದಲಾವಣೆ ಹೈಕಮಾಂಡ್ ಗೆ ಬಿಟ್ಟದ್ದು, ಇನ್ನೆರಡು ಸಚಿವರಿಂದ ರಾಜೀನಾಮೆ ಪಡೆದು ಅವರೆಡು ಖಾತೆ ಬೊಮ್ಮಾಯಿಯೇ ಇಟ್ಟುಕೊಳ್ಳಲಿ ಎಂದು ಯತ್ನಾಳ್ ವ್ಯಂಗ್ಯ ವಾಡಿದರು.
ಪಿಎಸ್ಐ ಹಗರಣದ ಪ್ರಮುಖ ಕಿಂಗ್ ಪಿನ್ ಮಹಾಂತೇಶ ಪಾಟೀಲ್ ಜಾಮೀನು ಮೇಲೆ ಬಿಡುಗಡೆಯಾಗಿ ಬಂದಿದ್ದರಿಂದ ಮಾಜಿ ಶಾಸಕ ಕಾಂಗ್ರೆಸ್ ನ ಅಲ್ಲಮಪ್ರಭು ಪಾಟೀಲ್ ಸನ್ಮಾನ ಮಾಡಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು, ಬಿಟ್ಟಿದ್ದರೆ ತುಲಾಭಾರ ಸಹ ಮಾಡ್ತಾರೆ ಕಾಂಗ್ರೆಸ್ ನವರು. ಹಗರಣ ಎಲ್ಲ ಆಯಾಮಗಳಿಂದ ಸಂಪೂರ್ಣ ತನಿಖೆ ನಡೆಯುತ್ತಿಲ್ಲ. ಐಪಿಎಸ್ ಅಧಿಕಾರಿ ಪೌಲ್ ಅವರನ್ನು ಬಂಧಿಸಲಾಗಿದೆ.ಇದರ ಹಿಂದೆ ಅನೇಕ ರಾಜಕಾರಣಿಗಳಿದ್ದಾರೆ. ಮಾಜಿ ಮುಖ್ಯಮಂತ್ರಿ ಮಗ ಸಹ ಇದ್ದಾನೆ. ಇದೇ ಕಾರಣಕ್ಕೆ ತನಿಖೆ ಆಳವಾಗಿ ನಡೆಯುತ್ತಿಲ್ಲ. ಆದರೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.
ಕಾಂಗ್ರೆಸ್ ನವರು ಹಿಂದೂಗಳ ಹತ್ಯೆ ಯಾದ ಬಗ್ಗೆ ಒಮ್ಮೆಯಾದರೂ ಖಂಡಿಸಿದ್ದಾರೆಯೇ. ಅದೇ ಅಲ್ಪಸಂಖ್ಯಾತ ರ ಕೊಲೆಯಾದರೆ ಗಂಟಲು ಹರಿದುಕೊಳ್ಳುತ್ತಾರೆ. ಭಯೋತ್ಪಾದನೆ ಬೆಂಬಲವೇ ಇವರ ಅಜೆಂಡಾವಾಗಿದೆ ಎಂದು ಟೀಕಿಸಿದರು.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.