ಕಲ್ಲಾನೆ-ಕಾಟೆ ದರವಾಜ್‌ ನವೀಕರಣಕ್ಕೆ ಚಿಂತನೆ


Team Udayavani, Mar 23, 2018, 3:51 PM IST

gul-3.jpg

ರಾಯಚೂರು: ನಗರದ ಐತಿಹಾಸಿಕ ಕುರುಹುಗಳಾದ ಕಲ್ಲಾನೆ, ಕಾಟೆ ದರವಾಜ್‌ಗಳ ದುರಸ್ತಿ ಮತ್ತು ನವೀಕರಣಕ್ಕೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಮುಂದಾಗಿದ್ದು, ಸುಮಾರು 57 ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. 15 ಲಕ್ಷ ರೂ. ವೆಚ್ಚದಲ್ಲಿ ಕಲ್ಲಾನೆ ಹಾಗೂ 52 ಲಕ್ಷ ರೂ. ವೆಚ್ಚದಲ್ಲಿ ಕಾಟೆ ದರವಾಜ್‌ವನ್ನು ನವೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರಾಚ್ಯವಸ್ತು ಮತ್ತು
ಪುರಾತತ್ವ ಇಲಾಖೆಯಿಂದಲೇ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಂತದಲ್ಲಿದೆ ಎಂದು ತಿಳಿದು ಬಂದಿದೆ. 

ರಾಯಚೂರನ್ನು ಪ್ರತಿನಿಧಿಸುವ ಐತಿಹಾಸಿಕ ಸ್ಮಾರಕಗಳಲ್ಲಿ ಕಲ್ಲಾನೆ ಕೂಡ ಒಂದು. ಸಮೀಪದ ಮಲಯಾಬಾದ್‌ನಲ್ಲಿರುವ ಸ್ಥಳದಲ್ಲೂ ಸಾಕಷ್ಟು ಕಲ್ಲಾನೆಗಳ ಅವಶೇಷಗಳಿವೆ. ಆದರೆ, ನಗರದ ಮಧ್ಯಭಾಗದಲ್ಲಿನ ಕಲ್ಲಾನೆ ಮಾತ್ರ ಸಂರಕ್ಷಿಸಲ್ಪಟ್ಟಿದೆ.

ಈ ಕಲ್ಲಾನೆ ಪಕ್ಕದಲ್ಲೇ ಬ್ರಿಟಿಷರು ಮೂರು ಕಂದಿಲುಗಳುಳ್ಳ ಕಂಬ ನಿರ್ಮಿಸುವ ಮೂಲಕ ಈ ಸ್ಥಳವನ್ನು ಸುಂದರ ವೃತ್ತವನ್ನಾಗಿ ರೂಪಿಸಿದ್ದರು. ಅದು ತೀನ್‌ ಕಂದಿಲ್‌ ವೃತ್ತ ಎಂದೂ ಪ್ರಸಿದ್ಧಿ ಹೊಂದಿದೆ. ಆದರೆ, ಕಾಲಕ್ರಮೇಣ ಸುತ್ತಲೂ ಕಟ್ಟಡಗಳು ನಿರ್ಮಾಣಗೊಂಡು ಕಲ್ಲಾನೆಯೇ ಕಾಣದಂತಾಗಿದೆ. ಸುತ್ತಲೂ ಚರಂಡಿ ನೀರು ಸಂಗ್ರಹಗೊಂಡು ಅದರ ಅಂದಗೆಟ್ಟಿದೆ.

ದುರಸ್ತಿಗೆ ಮುಂದಾಗಿತ್ತು ನಗರಸಭೆ: ಕಲ್ಲಾನೆ ಸುತ್ತಲಿನ ಪ್ರದೇಶದ ದುರಸ್ತಿಗೆಂದು ನಗರಸಭೆ 15 ಲಕ್ಷ ರೂ. ಮೀಸಲಿಟ್ಟಿದ್ದಾಗಿ ತಿಳಿಸಿತ್ತು. ಆದರೆ , ಈ ವಿಚಾರ ಅರಿತ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ದುರಸ್ತಿ ಮಾಡುವುದಾದರೆ ಕ್ರಮಬದ್ಧತೆ ಅನುಸರಿಸಬೇಕು. ಹೀಗಾಗಿ ನಾವೇ ಮಾಡುತ್ತೇವೆ ಎಂದು ತಿಳಿಸಿದೆ. ಆದರೆ, ನಗರಸಭೆ ಮೀಸಲಿಟ್ಟ 15 ಲಕ್ಷ ರೂ. ಅನುದಾನ ಇಲಾಖೆಗೆ ನೀಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇಲಾಖೆಯಿಂದಲೇ 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲು ಪ್ರಸ್ತಾವನೆ
ಸಲ್ಲಿಸಲಾಗುತ್ತಿದೆ.

ಕಾಟೆ ದರವಾಜ್‌ ದುರಸ್ತಿ: ತನ್ವೀರ್‌ ಸೇಠ್… ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ನಗರದ ಕಾಟೆ ದರವಾಜ್‌ ಅಭಿವೃದ್ಧಿಗೆ ಮಾಜಿ ಶಾಸಕ ಸೈಯ್ಯದ್‌ ಯಾಸೀನ್‌ ಸಾಕಷ್ಟು ಒತ್ತಾಯ ಮಾಡಿದ್ದರು. ಕಾಟೆ ದರವಾಜ್‌ ಐತಿಹಾಸಿಕ ತಾಣವಾಗಿದ್ದು, ಅವಸಾನ ಸ್ಥಿತಿಯಲ್ಲಿದೆ. ಅಲ್ಲದೇ, ಈ ಸುಂದರ ಕಟ್ಟಡ ಸಾಕಷ್ಟು ಒತ್ತುವರಿಗೆ ಒಳಪಡುತ್ತಿದೆ. ಅದರ ಮೂಲ ಅಂದವನ್ನು ಉಳಿಸುವ ಕೆಲಸವಾಗಬೇಕು. ಅದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು. ಆದರೆ, ಆಗ ಅದು ಸಾಕಾರಗೊಂಡಿಲ್ಲ. ಪ್ರಾಚ್ಯವಸ್ತು ಇಲಾಖೆ ಈಗ ಕಲ್ಲಾನೆ ಜತೆಗೆ ಕಾಟೆ ದರವಾಜ್‌ ದುರಸ್ತಿಗೂ ಮುಂದಾಗಿದ್ದು, 52 ಲಕ್ಷ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

ದುರಸ್ತಿಗೂ ನಿಯಮಗಳುಂಟು: ಐತಿಹಾಸಿಕ ಸ್ಥಳಗಳ ದುರಸ್ತಿಗೆ, ಮರು ನಿರ್ಮಾಣಕ್ಕೆ ತನ್ನದೇ ಆದ ನಿಯಮಗಳಿವೆ. ಆದರೆ, ಈಚೆಗೆ ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಟಿಪ್ಪು ಸುಲ್ತಾನ್‌ ಉದ್ಯಾನವನ ಬಳಿಯ ಕೋಟೆ ದುರಸ್ತಿಗೆ ಜಿಲ್ಲಾಧಿಕಾರಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದರು. ಆದರೆ, ಇದು ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಗಮನಕ್ಕೆ ಇರಲಿಲ್ಲ. ಗುತ್ತಿಗೆ ಪಡೆದವರು ಸಿಮೆಂಟ್‌ ಬಳಸಿ ಮನಬಂದಂತೆ ಕಟ್ಟಡ ನಿರ್ಮಿಸಿದ್ದಾರೆ. ತಕ್ಷಣಕ್ಕೆ ಮಧ್ಯ ಪ್ರವೇಶಿಸಿದ ಇಲಾಖೆ ಕಾಮಗಾರಿ ನಿಲ್ಲಿಸಿದೆ. ಈಗ
ಟೆಂಡರ್‌ ರದ್ದುಗೊಳಿಸಿದ್ದು, ಮಾಡಿದ ಕೆಲಸವೆಲ್ಲ ವ್ಯರ್ಥವಾಗಲಿದೆ. ಅಲ್ಲದೇ, ಕೊಟ್ಯಂತರ ಮೊತ್ತದ ಕೆಲಸಕ್ಕೆ ಗುತ್ತಿಗೆದಾರರು ಕೇವಲ 100 ಮೀಟರ್‌ ಗೆ ಕ್ರಿಯಾಯೋಜನೆ ರೂಪಿಸುವ ಮೂಲಕ ಜಿಲ್ಲಾಡಳಿತಕ್ಕೆ ವಂಚನೆ ಮಾಡಲು ಮುಂದಾಗಿದ್ದರು ಎಂದು ದೂರುತ್ತಾರೆ ಇಲಾಖೆ ಅಧಿಕಾರಿಗಳು. ನಗರದ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮುಂದಾಗಿರುವ ಪುರಾತತ್ವ ಇಲಾಖೆ ಕಾರ್ಯ ಪ್ರಶಂಸನೀಯ. ಆದರೆ, ಅದೇ ಸ್ಮಾರಕಗಳು ಹಾಳಾಗುತ್ತಿದ್ದರೂ ಕ್ರಮ ಕೈಗೊಳ್ಳದ ನಗರಾಡಳಿತ, ಜಿಲ್ಲಾಡಳಿತದ ವಿರುದ್ಧ ಜನ ಬೇಸರ
ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸ್ಮಾರಕಗಳ ರಕ್ಷಣೆಗೆ ವಿಶೇಷ ಒತ್ತು ನೀಡಬೇಕಿದೆ.

ನಗರದಲ್ಲಿ ಐದು ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ನಿರ್ವಹಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಕಲ್ಲಾನೆ, ಕಾಟೆ ದರವಾಜ್‌ ಕೂಡ ಸೇರಿವೆ. ಕಲ್ಲಾನೆಯನ್ನು ಮೇಲಕ್ಕೆತ್ತಿ ಸುತ್ತಲೂ ಫೆನ್ಸಿಂಗ್‌ ಮಾಡಲು ನಿರ್ಧರಿಸಿದ್ದು, 15 ಲಕ್ಷ ರೂ. ಯೋಜನೆ
ರೂಪಿಸಲಾಗಿದೆ. ಕಾಟೆ ದರವಾಜ್‌ ದುರಸ್ತಿಗೆ 52 ಲಕ್ಷ ರೂ. ಯೋಜನೆ ರೂಪಿಸಿದ್ದು, ಇಲಾಖೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. 
ಶೇಷೇಶ್ವರ್‌, ಪುರಾತತ್ವ ಇಲಾಖೆ ಮೇಲ್ವಿಚಾರಕ.

ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sharana-Patil

Covid Scam: ಕೋವಿಡ್‌ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌

All set for the Indian Cultural Festival

Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Collection of donations in the name of Sri Siddalinga of Siddaganga Math: Old students upset

ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ

Togari completely destroyed by neti disease

Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.