ಮಳೆಯಲ್ಲಿ ಹರಿದು ಹೋಯ್ತು ತರಕಾರಿ
Team Udayavani, Aug 31, 2017, 10:59 AM IST
ಅಫಜಲಪುರ: ಕುಂಭದ್ರೋಣ ಮಳೆ ಪ್ರಭಾವದಿಂದ ಪಟ್ಟಣದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯಿಂದ
ಸೋಮವಾರದ ಸಂತೆಯಲ್ಲಿದ್ದ ತರಕಾರಿ ಹರಿದು ಹೋಗಿ ವ್ಯಾಪಾರಿಗಳು ಕಂಗಾಲಾಗುವಂತೆ ಆಗಿತ್ತು.
ಪಟ್ಟಣದ ಮಳೇಂದ್ರ ಮಠದಿಂದ ಚೌಡಿ, ನಿಚೆಗಲ್ಲಿ ಹಾಗೂ ಹಳೆ ಪುರಸಭೆ ಕಚೇರಿ ವರೆಗೂ ಕಿರಿದಾದ ರಸ್ತೆಗಳಲ್ಲಿ ವಾರದ ಸಂತೆ ನೆರೆಯುತ್ತದೆ. ಈ ರಸ್ತೆಗಳಿಗೆ ದೊಡ್ಡದಾದ ಚರಂಡಿ ವ್ಯವಸ್ಥೆಯೂ ಇಲ್ಲ, ಜನಸಾಮಾನ್ಯರು ಓಡಾಡಲು ಹೆಚ್ಚಿನ ಸ್ಥಳಾವಕಾಶವೂ ಇಲ್ಲ. ಹೀಗಾಗಿ ಈ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲದಂತಾಗಿದೆ.
ಸೋಮವಾರ ಸುರಿದ ಮಳೆಗೆ ವಾರದ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದ ತರಕಾರಿ ಸಂಪೂರ್ಣ ಮಳೆ
ನೀರಲ್ಲಿ ಕೊಚ್ಚಿ ಹೋಯಿತು. ಬೀದಿ ವ್ಯಾಪಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಸಣ್ಣ ರೈತರು ಇದರಿಂದ
ಸಂಕಷ್ಟ ಅನುಭವಿಸುವಂತೆ ಆಯಿತು. ಪಟ್ಟಣದ ನಿವಾಸಿಗಳು, ಅಕ್ಕಪಕ್ಕದ ಗ್ರಾಮಗಳ ಜನರು ತರಕಾರಿಗಳನ್ನು ಕೊಂಡು ಹೋಗಬೇಕಾಗಿತ್ತು. ಆದರೆ ಪಟ್ಟಣದ ಕಿರಿದಾದ ರಸ್ತೆಗಳಲ್ಲಿ ಹರಿದ ಮಳೆ ನೀರಲ್ಲಿ ತರಕಾರಿಗಳು ಕೊಚ್ಚಿಕೊಂಡು ಹೋಗುವುದನ್ನು ಕಂಡು ವ್ಯಾಪಾರಿಗಳು ಮರುಗಿದರೆ, ಗ್ರಾಹಕರು ಪರದಾಡುವಂತೆ ಆಗಿತ್ತು.
ಸ್ಥಳಾಂತರ ಆಗದ ವಾರದ ಸಂತೆ: ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ಖಾಯಂ ವಾರದ ಸಂತೆಕಟ್ಟೆ ನಿರ್ಮಾಣವಾಗಿ ವರ್ಷಗಳೇ ಗತಿಸಿವೆ. ಈಗ ಪುನಃ ವಾರದ ಸಂತೆ ಕಟ್ಟೆಯಲ್ಲಿ ಜಾಲಿ ಕಂಟಿ ಬೆಳೆದು ಹಾಳಾಗುತ್ತಿದೆ. ಆದರೂ ವಾರದ ಸಂತೆಯನ್ನು ಎಪಿಎಂಸಿ ಯಾರ್ಡ್ನಲ್ಲಿರುವ ವಾರದ ಸಂತೆ ಕಟ್ಟೆಗೆ ಸ್ಥಳಾಂತರಿಸಲು
ಸಂಬಂಧಪಟ್ಟವರು ಮುಂದಾಗುತ್ತಿಲ್ಲ. ಆರೋಪ: ಜೆಡಿಎಸ್ ಪಕ್ಷದ ವತಿಯಿಂದ ರೈತರೊಡನೆ ಸೇರಿ ವಾರದ ಸಂತೆಯನ್ನು ಎಪಿಎಂಸಿ ಯಾರ್ಡ್ ನಲ್ಲಿರುವ ಖಾಯಂ ಸಂತೆ ಕಟ್ಟೆಗೆ ಸ್ಥಳಾಂತರಿಸಬೇಕೆಂದು ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ನೀಡಿದ್ದೇವೆ, ಹೋರಾಟಗಳು ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ಆರೋಪಿಸಿದ್ದಾರೆ. ನಾವು ನೀರಿನ ಕೊರತೆಯಲ್ಲೂ ಕಷ್ಟ ಪಟ್ಟು ತರಕಾರಿ ಬೆಳೆದು ಪಟ್ಟಣಕ್ಕೆ ಮಾರಾಟಕ್ಕೆ ತಂದರೆ ಮಳೆಯು ನಮ್ಮೊಂದಿಗೆ ಆಟವಾಡಿದಂತಾಯ್ತು. ಮಳೆ ನೀರಲ್ಲಿ ನಾವು ಕಷ್ಟ ಪಟ್ಟು ಬೆಳೆದ ತರಕಾರಿ ಕೊಚ್ಚಿ ಹೋಗುವಾಗ ನಮ್ಮ ಜೀವ ಹೋದಂತಾಯ್ತು.
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aland: ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು
Chincholi: ಸಾಲ ಭಾದೆ, ಮುಂಗಾರು ಬೆಳೆ ಹಾನಿಯಿಂದ ಮನನೊಂದು ರೈತ ಆತ್ಮಹತ್ಯೆ
Chittapur: 120 ಮನೆಗಳಿಗೆ ನುಗ್ಗಿದ ಮಳೆ ನೀರು; ಅಪಾರ ಹಾನಿ
Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ
ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ! ಕಾಂಗ್ರೆಸ್ನವರು ಸಂಘದ ಟ್ರೈನಿಂಗ್ ತಗೊಳ್ಳಿ: ಸೂಲಿಬೆಲೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.