Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು


Team Udayavani, Nov 11, 2024, 4:11 PM IST

Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು

ಕಲಬುರಗಿ: ರೈತರ ಜಮೀನು ಹಾಗೂ ಮಠ ಮಂದಿರಗಳ ಆಸ್ತಿಯಲ್ಲಿ ವಕ್ಫ್ ನಮೂದನೆ ಮಾಡುತ್ತಿರುವುದು ಸಮಾಜದಲ್ಲಿ ಅಶಾಂತಿ ಹಾಗೂ ತಲ್ಲಣ ನಿರ್ಮಾಣ ಮಾಡುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿ ರದ್ದುಗೊಳಿಸಿ ಹಿಂದೂ ನಾಗರೀಕರ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾ‌ಡಿನ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ‌

ಕಲಬುರಗಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು, ಮಠ, ಮಂದಿರಗಳ ಆಸ್ತಿಗಳ ಮೇಲೆ ವಕ್ಫ್ ಮಂಡಳಿ ತನ್ನ ಹೆಸರಿಗೆ ಬದಲಾವಣೆ ಮಾಡುತ್ತಿರುವುದನ್ನು ತಕ್ಷಣ ತಡೆಹಿಡಿದು ಹಿಂದುಗಳಿಗೂ ಕೂಡಾ ಸನಾತನ ಮಂಡಳಿ ರಚನೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.‌

ರಾಜ್ಯಾದ್ಯಂತ ರೈತರು ಉಳುಮೆ ಮಾಡುತ್ತಿರುವ ಜಮೀನು, ಹಿಂದುಗಳ ಮಠ, ಮಂದಿರಗಳ ಮೇಲೆ ಹಾಗು ಸಂರಕ್ಷಿತ ಸ್ಮಾರಕಗಳ ಮೇಲೆ ವಕ್ಫ್ ಮಂಡಳಿ ಹೆಸರಿಗೆ ಅಸ್ತಿ ವರ್ಗಾವಣೆ ಮಾಡುತ್ತಿರುವುದು ಮತ್ತು ಪ್ರಕರಣಗಳನ್ನು ದಾಖಲಿಸುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆಯಲ್ಲದೇ ಸಮಸ್ತ ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆ ತರುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು ಸಹ ಪಾಲ್ಗೊಂಡು, ಈಗಾಗಲೇ ಸುಮಾರು ಹಿಂದುಗಳ ಆಸ್ತಿಗಳ ಪಹಣಿಯಲ್ಲಿ ವಕ್ಷ್ ಬೋರ್ಡ್ ಎಂದು ಬಂದಿದ್ದು, ಅದನ್ನು ಈ ಕೂಡಲೇ ತೆಗೆದುಹಾಕಿ ಹಿಂದೂಗಳಿಗೆ ಮಾರಕವಾಗಿರುವ ವಕ್ಫ್ ಬೋರ್ಡ್ ರದ್ದುಗೊಳಿಸಿ ಎಲ್ಲಾ ಹಿಂದೂಗಳಿಗಾಗಿ ಸನಾತನ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೆಕೆಂದು ಆಗ್ರಹಿಸಿದರು.‌

ಹಿಂದೂ ನಾಗರಿಕ ಸಮಿತಿಯ ಸಂಚಾಲಕ ಎಂ ಎಸ್ ಪಾಟಾಲ ನರಿಬೋಳ ಮಾತನಾಡಿ ವಕ್ಷ್ ಬೋರ್ಡ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಿ ವಕ್ಷ್ ಆಸ್ತಿ ರಾಷ್ಠ್ರೀಕರಣ ಮಾಡಬೇಕು‌, ಇಲ್ಲವೇ ಸನಾತನ ಮಂಡಳಿ ರಚಿಸಿ ಪೇಜಾವರ ಶ್ರೀಗಳು ಹಾಗೂ ಜಗದ್ಗುರು ಪಂಚಾಚಾರ್ಯರು ಸೇರಿ ಹಿರಿಯ ಶ್ರೀಗಳ ಮಾರ್ಗದರ್ಶನ ಮಂಡಳಿ ಮಾಡಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಹಿಂದೂಗಳಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಪಾಳಾದ ಗುರುಮುರ್ತಿ ಶಿವಾಚಾರ್ಯರು ಮಾತನಾಡಿ, ವಕ್ಷ್ ಬೋರ್ಡನಿಂದ ಹಿಂದೂಗಳ ಜಮೀನು,‌ ಮಠ ಮಂದಿರಗಳು ಹಾಗೂ ಮನೆಗಳನ್ನು ಕಬ್ಜಾ ಮಾಡಲು ಹೊರಟಿದೆ.‌ ಒಂದೇ ದೇಶದಲ್ಲಿ ಎರಡೆರಡು ಕಾನೂನು ಒಪ್ಪುವಂತದ್ದಲ್ಲ. ಕೂಡಲೆ ವಕ್ಷ್ ಬೋರ್ಡ ರದ್ದು ಪಡಿಸಿ ಹಿಂದುಗಳ ಆಸ್ತಿ ಕಬಳಿಕೆ ಕುರಿತಾಗಿ ಎದ್ದಿರುವ ಗೊಂದಲ ಸರಿಪಡಿಸಿಬೇಕು. ‌ಇಲ್ಲದಿದ್ದರೆ ಶಾಂತಿಯುತವಾದ ಹೋರಾಟ ಮುಂದೆ ದೇಶದ ಮಠಾಧೀಶರು, ಸಾಧು ಸಂತರು ಹಾಗೂ ಮತ್ತು ಇತರೆಲ್ಲರೂ ಸೇರಿ ಕ್ರಾಂತಿಕಾರಿಗಳಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಹ ಸಂಚಾಲಕ ಲಕ್ಮಿಕಾಂತ ಸ್ವಾದಿ ಸಹ ಮಾತನಾಡಿ, ಹಿಂದೂ ಧರ್ಮಕ್ಕೆ ಖುತ್ತು ಬಂದಾಗ ಹಿಂದೆ ಮುಂದೆ ನೋಡದೆ ಹೋರಾಟಕ್ಕಿಳಿಯುವ ಮಠಾಧೀಶರು ನಮ್ಮ ಹೋರಾಟದಲ್ಲಿದ್ದಾರೆ. ಇನ್ನು ಕೆಲ ಮಠಾಧೀಶರು ಅನಿವಾರ್ಯ ಕಾರಣಗಳಿಂದ ಬರಲಿಕ್ಕಾಗಿಲ್ಲಾ.  ಆದರೆ ಕೆಲ ಮಠಾಧೀಶರು ಹೇಗಿದ್ದಾರೆಂದರೆ ಅವರಿಗೆ ಧರ್ಮ ಹೋರಾಟ ಬೇಕಾಗಿಲ್ಲ. ಶೋಕಿ ಮಾಡುವುದರಲ್ಲಿ ಬಿಜಿ ಇದ್ದಾರೆ. ಮತ್ತು ರಾಜಕಾರಣಿ ಮನೆಗೆ ಕರೆದಾಗ ಹೋಗುತ್ತಾರೆ.‌ ಇದನ್ನು ಭಕ್ತರು ಈಗ ಅವಲೋಕಿಸುವ ಕಾಲ‌ ಬಂದಿದೆ ಎಂದರು.

ಅತನೂರಿನ ಗುರುಬಸವ ಶಿವಾಚಾರ್ಯರು, ತೊನಸನಳ್ಳಿ  ರೆವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಚಂದನಕೇರ ರನಚೆಟ್ಟಿ ಶಿವಾಚಾರ್ಯರು, ನಿಡಗುಂದಾ, ಕರುಣೆಶ್ವರ ಶಿವಾಚಾರ್ಯರು, ಸೂಗುರ ಚನ್ನರುದ್ರ ಮುನಿಸ್ವಾಮಿಗಳು, ಶಹಾಬಾದ್ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿ ಮಹಾಸ್ವಾಮಿಗಳು, ಕೇದಾರಲಿಂಗ ದೇವರು, ಬಾಬುರಾವ್ ಪೂಜಾರಿ, ಪ್ರಮುಖರಾದ ಅನುದೀಪ್ ದಂಡೋತಿ, ಮಹೇಶ ಕೆಂಬಾವಿ ಸಿದ್ರಾಮಯ್ಯಾ ಹಿರೆಮಠ, ಸಿದ್ದು ಕಂದಗಲ್, ರವೀಂದ್ರ ಕುಲಕರ್ಣಿ, ಭೀಮಸನರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ನಂದು ಕಟ್ಟಿ ರಾಜೇಶ್ವರಿ ದೇಶಮುಖ್, ಸುಮಾ ಕವಲ್ದಾರ ಮಹಾದೇವಿ ಕೆಸರಟಗಿ, ದಯಾನಂದ ಪಾಟೀಲ, ಆದಿನಾಥ ಹಿರಾ, ಕಲ್ಯಾಣರಾವ ಪಾಟೀಲ, ಶ್ರವಣಕುಮಾರ ನಾಯಕ ಸಿದ್ರಾಮಪ್ಪಾ ಅಲಗೂಡಕರ್ ವಿರಣ್ಣಾ ಬೇಲೂರೆ,  ಸಂತೋಷ ಸೋನಾವಣೆ, ಸಿದ್ದು ಕಂದಗಲ್, ಸಂಗಮೇಶ್ ಕಾಳನೂರ್, ಚಿದಾನಂದ್ ಸ್ವಾಮಿ, ವಿಜಯಲಕ್ಷ್ಮಿ ಎಮ್ಮಿಗನೂರ್, ಮಹಾದೇವಿ ಪಾಟೀಲ, ಪ್ರಸನ್ನ ದೇಶಪಾಂಡೆ, ಶಿವು ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಿಸಿ ವಿರುದ್ಧ ಆಕ್ರೋಶ: ಪ್ರತಿಭಟನೆ ನಡೆಸಿ ಗಂಟೆಗಟ್ಟಲೆ ಘೋಷಣೆಗಳನ್ನು ಕೂಗುತ್ತಿದ್ದರೂ ಯಾವ ಅಧಿಕಾರಿಗಳು ಮನವಿ ಪತ್ರ ಸ್ವಿಕರಿಸಲು ಬಾರದೆ ಇದ್ದಿದ್ದರ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹೋರಾಟಗಾರರು ಹಿಂದೂ ವಿರೋಧಿ ಜಿಲ್ಲಾದಿಕಾರಿಗೆ ಧಿಕ್ಕಾರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಎಂದು ಘೋಷ ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಸಿದ ಪ್ರಸಂಗ ಇದೇ ಸಂದರ್ಭದಲ್ಲಿ ನಡೆಯಿತು.

ಟಾಪ್ ನ್ಯೂಸ್

Yuvanidhi-meet

Mangaluru: ಯುವನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ: ಜಿ.ಪಂ.ಸಿಇಒ ಡಾ.ಆನಂದ್‌

Kantabare-Kambla

Kinnigoli: ಜಾನಪದ, ಧಾರ್ಮಿಕ ಐತಿಹ್ಯದ ಐಕಳ ಕಂಬಳದಿಂದ ಊರಿಗೇ ಹಬ್ಬ: ಡಾ.ರಾಜೇಂದ್ರ ಕುಮಾರ್‌

DH-mastakabhisheka

Dharmasthala: ದಯೆ ಇದ್ದರಷ್ಟೇ ಧರ್ಮಕ್ಕೆ ಅರ್ಥ: ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು

Baloch ದಾಳಿ: 18 ಪಾಕಿಸ್ಥಾನ ಸೈನಿಕರ ಸಾವು: ಗುಂಡಿನ ಚಕಮಕಿಯಲ್ಲಿ 23 ಬಂಡುಕೋರರ ಸಾವು

Baloch attack: 18 ಪಾಕಿಸ್ಥಾನ ಸೈನಿಕರ ಸಾವು: ಗುಂಡಿನ ಚಕಮಕಿಯಲ್ಲಿ 23 ಬಂಡುಕೋರರ ಸಾವು

minister george kurien: ಹಣ ಬೇಕಿದ್ದರೆ ಕೇರಳ ಹಿಂದುಳಿದಿದೆ ಎಂದು ಘೋಷಿಸಿ

Minister george kurien: ಹಣ ಬೇಕಿದ್ದರೆ ಕೇರಳ ಹಿಂದುಳಿದಿದೆ ಎಂದು ಘೋಷಿಸಿ

Minister Suresh Gopi: ಮೇಲ್ಜಾತಿಗೆ ಬುಡಕಟ್ಟು ಖಾತೆ ಕೊಡಬೇಕು

Minister Suresh Gopi: ಮೇಲ್ಜಾತಿಗೆ ಬುಡಕಟ್ಟು ಖಾತೆ ಕೊಡಬೇಕು

ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಮೋದಿ ನಿರ್ಧಾರ: ಸಚಿವೆ ನಿರ್ಮಲಾ

ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಮೋದಿ ನಿರ್ಧಾರ: ಸಚಿವೆ ನಿರ್ಮಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-patil

Advisor Post: ಹುದ್ದೆಗೆ ಸುಮ್ಮನೇ ರಾಜೀನಾಮೆ ಕೊಟ್ಟಿಲ್ಲ, ಸಮಸ್ಯೆಗಳಿವೆ: ಬಿ.ಆರ್‌.ಪಾಟೀಲ್‌

Kalaburagi: Budget is pro-people: Shobha Karandlaje

Kalaburagi: ಬಜೆಟ್ ಜನಪರವಾಗಿದೆ, ಸರಕಾರಕ್ಕೆ ಅಧಿಕೃತ ಪತ್ರ ಬರೆಯುವ ತಾಕತ್ತಿಲ್ಲ: ಶೋಭಾ

ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ. ಆರ್. ಪಾಟೀಲ್ ರಾಜೀನಾಮೆ

Kalaburagi: ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ. ಆರ್. ಪಾಟೀಲ್ ರಾಜೀನಾಮೆ

Kalaburagi: ಹೆಣ್ಣು, ಹೊನ್ನು ಮಣ್ಣಿನ ಮೌಲ್ಯ ಎಂದಿಗೂ ಕಡಿಮೆಯಾಗಲ್ಲ:‌ ಕವಿತಾ ಮಿಶ್ರಾ

Kalaburagi: ಹೆಣ್ಣು, ಹೊನ್ನು ಮಣ್ಣಿನ ಮೌಲ್ಯ ಎಂದಿಗೂ ಕಡಿಮೆಯಾಗಲ್ಲ:‌ ಕವಿತಾ ಮಿಶ್ರಾ

vijayendra-3

BJP; ಘೋಷಣೆಯಾಗಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ವಿಜಯೇಂದ್ರ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Yuvanidhi-meet

Mangaluru: ಯುವನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ: ಜಿ.ಪಂ.ಸಿಇಒ ಡಾ.ಆನಂದ್‌

Kantabare-Kambla

Kinnigoli: ಜಾನಪದ, ಧಾರ್ಮಿಕ ಐತಿಹ್ಯದ ಐಕಳ ಕಂಬಳದಿಂದ ಊರಿಗೇ ಹಬ್ಬ: ಡಾ.ರಾಜೇಂದ್ರ ಕುಮಾರ್‌

DH-mastakabhisheka

Dharmasthala: ದಯೆ ಇದ್ದರಷ್ಟೇ ಧರ್ಮಕ್ಕೆ ಅರ್ಥ: ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು

Baloch ದಾಳಿ: 18 ಪಾಕಿಸ್ಥಾನ ಸೈನಿಕರ ಸಾವು: ಗುಂಡಿನ ಚಕಮಕಿಯಲ್ಲಿ 23 ಬಂಡುಕೋರರ ಸಾವು

Baloch attack: 18 ಪಾಕಿಸ್ಥಾನ ಸೈನಿಕರ ಸಾವು: ಗುಂಡಿನ ಚಕಮಕಿಯಲ್ಲಿ 23 ಬಂಡುಕೋರರ ಸಾವು

minister george kurien: ಹಣ ಬೇಕಿದ್ದರೆ ಕೇರಳ ಹಿಂದುಳಿದಿದೆ ಎಂದು ಘೋಷಿಸಿ

Minister george kurien: ಹಣ ಬೇಕಿದ್ದರೆ ಕೇರಳ ಹಿಂದುಳಿದಿದೆ ಎಂದು ಘೋಷಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.