Kalaburagi: ಪಠ್ಯದ ಅಂಕದ ಜತೆಗೆ ಜೀವನದ ಅಂಕವೂ ಗಳಿಸಿ: ಲಿಂಗರಾಜಪ್ಪ ಅಪ್ಪ


Team Udayavani, Jun 21, 2024, 2:17 PM IST

Kalaburagi: ಪಠ್ಯದ ಅಂಕದ ಜತೆಗೆ ಜೀವನದ ಅಂಕವೂ ಗಳಿಸಿ: ಲಿಂಗರಾಜಪ್ಪ ಅಪ್ಪ

ಕಲಬುರಗಿ: ವಿದ್ಯಾರ್ಥಿಗಳು ಪಠ್ಯದ ಅಂಕದ ಜತೆಗೆ ಜೀವನದ ಅಂದರೆ ಆರೋಗ್ಯ ಭಾಗ್ಯದ ಅಂಕವೂ ಗಳಿಸಬೇಕು ಎಂದು ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜಪ್ಪ ಅಪ್ಪ ಕಿವಿ ಮಾತು ಹೇಳಿದರು.

ನಗರದ ಸಮಾಧಾನದಲ್ಲಿ ಸಮಾಧಾನ ಯೋಗ ಸಾಧನೆ ಮತ್ತು ರೋಗ ಚಿಕಿತ್ಸಾ ಕೇಂದ್ರ, ಚತುರಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಉದಯವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ವಿಶ್ವಯೋಗೋತ್ಸವ ಉದ್ಘಾಟಿಸಿ ಮಾತನಾಡಿದರು.

ಪಠ್ಯದಷ್ಟೇ ಆರೋಗ್ಯ ಎಂಬುದು ಮಕ್ಕಳ ಹಾಗೂ ಪಾಲಕರಿಗೆ ಹೆಚ್ಚಿನ ಅರಿವು ಬರ್ತಾ ಇಲ್ಲ. ಬಾಲ್ಯದಲ್ಲಿ ಆಟ- ಊಟ ಜೋರು ಇರಬೇಕು ಎಂದು ಅಪ್ಪ ಅವರು ಮಾರ್ಮಿಕವಾಗಿ ಹೇಳಿದರು.

ಆಹಾರ, ಜ್ಞಾನ, ದುಡಿಮೆ ಮಹತ್ವ ನಮಗೆ ಸಂಪೂರ್ಣ ಇರಬೇಕು. ‌ನೂರು ಸಲ ನೆನಪಿಡದಿದ್ದರೆ ಉಪಯೋಗವಿಲ್ಲ. ಒಂದು ಸಲ ಓದಿ ನೂರು ಸಲ ಓದಿದ ಹಾಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಒಟ್ಟಾರೆ ಸಂಸ್ಕಾರ ಮೈಗೂಡಿಸಿಕೊಳ್ಳಬೇಕೆಂದರು.

ಯೋಗ ಶಿಕ್ಷಕ ನಿತ್ಯಾನಂದ ಬಂಡಿ ಮಾತನಾಡಿ, ಯೋಗ ಒಂದಿನ ಮಾತ್ರ ಮಾಡುವುದಲ್ಲ. ನಿತ್ಯ ಕಾಯಕವಾಗಬೇಕು.‌ ಪ್ರೋಟೋಕಾಲ್ ಆಗಬೇಕೆಂದರು.

ಧ್ಯಾನ, ‌ಮೌನ‌ ಹಾಗೂ ‌ಯೋಗದಲ್ಲಿ ಅಗಾಧವಾದ ಶಕ್ತಿವಿದೆ.‌ ಇವುಗಳನ್ನು ಸತತ ಮೈಗೂಡಿಸಿಕೊಂಡಲ್ಲಿ ಏನೆಲ್ಲ ಪಡೆಯಬಹುದು ಎಂಬುದರ ಕುರಿತು ಬಂಡಿ ವಿವರಣೆ ನೀಡಿದರು. ನಂತರ ಬಂಡಿ ಅವರು ಯೋಗ ಹೇಳಿಕೊಟ್ಟರು.‌ ರಾಜಕುಮಾರ ಬಾಳಿ ಅವರು ಆಹಾರ ಸೇವನೆ ವೈಜ್ಞಾನಿಕ ಮಹತ್ವದ ಕುರಿತಾಗಿ ಕಾರ್ಯಕ್ರಮದಲ್ಲಿ ವಿವರಣೆ ನೀಡಿದರು. ‌

ಯೋಗ ಶಿಕ್ಷಕರಾದ ಡಾ.‌ಸಂಗಮೇಶ ಹತ್ತಿ, ಶಿವನಗೌಡ ಪಾಟೀಲ, ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ಉದಯವಾಣಿ ಜಾಹೀರಾತು ವಿಭಾಗದ ಡೆಪ್ಯೂಟಿ ಮ್ಯಾನೇಜರ ನಾಗಶೆಟ್ಟಿ ಡಾಕುಳಗಿ, ವರದಿಗಾರ ಸೂರ್ಯಕಾಂತ ಜಮಾದಾರ ಸೇರಿದಂತೆ ಮುಂತಾದವರಿದ್ದರು.

ಉದಯವಾಣಿ ಉಪ ಮುಖ್ಯ ವರದಿಗಾರ ಹಣಮಂತರಾವ ಭೈರಾಮಡಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ‌ಸಮಾಧಾನದ ಹಿರಿಯ ಭಕ್ತರಾದ ಎ.ಬಿ.ಪಾಟೀಲ ಬಮ್ಮನಳ್ಳಿ ನಿರೂಪಿಸಿ ವಂದಿಸಿದರು.

ಯೋಗ ಕಾರ್ಯಕ್ರಮದಲ್ಲಿ ಸಮಾಧಾನ ಭಕ್ತರು, ಶ್ರೀ ಗುರು ವಿದ್ಯಾಪೀಠ, ಖಣದಾಳದ ಶಾಲಾ ಹಾಗೂ ಅಭಿಷೇಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ‌

ಟಾಪ್ ನ್ಯೂಸ್

1-kim-un-jang

North Korea; ದಕ್ಷಿಣ ಕೊರಿಯ ಹಾಡು ಕೇಳಿದ ಯುವಕನ ಶಿರಚ್ಛೇದ!

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

ಇಂದಿನಿಂದ 3 ದೇಸಿ ಕಾನೂನು ಜಾರಿ

ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

D. K. Shivakumar ಕೆಪಿಸಿಸಿ ಪಟ್ಟಕ್ಕೆ ಕುತ್ತು: ಖಂಡ್ರೆಗೆ ಪಟ್ಟ ?

D. K. Shivakumar ಕೆಪಿಸಿಸಿ ಪಟ್ಟಕ್ಕೆ ಕುತ್ತು: ಖಂಡ್ರೆಗೆ ಪಟ್ಟ ?

1-kedar

Kedarnath ದೇಗುಲದ ಸಮೀಪ ಹಿಮಪಾತ: ವೀಡಿಯೋ ವೈರಲ್‌

1-avadhesh

Ayodhya MP ಅವಧೇಶ್‌ ವಿಪಕ್ಷಗಳ ಉಪ ಸ್ಪೀಕರ್‌ ಅಭ್ಯರ್ಥಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rmabha

CM-DCM ವಿಚಾರದಲ್ಲಿ ಹೈಕಮಾಂಡ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ: ರಂಭಾಪುರಿ ಶ್ರೀ

Kalaburagi: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ತಡೆಗೆ ಮಹಿಳಾ ಅಯೋಗದ ಸೆಲ್: ಡಾ|ನಾಗಲಕ್ಷ್ಮಿ

Kalaburagi: ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ತಡೆಗೆ ಮಹಿಳಾ ಅಯೋಗದ ಸೆಲ್: ಡಾ।ನಾಗಲಕ್ಷ್ಮಿ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

Revenue Minister Byre Gowda’s progress review meeting at Kalaburagi

Kalaburagi: ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಗತಿ ಪರಿಶೀಲನಾ ಸಭೆ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

1-kim-un-jang

North Korea; ದಕ್ಷಿಣ ಕೊರಿಯ ಹಾಡು ಕೇಳಿದ ಯುವಕನ ಶಿರಚ್ಛೇದ!

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

Leopard ಮೊಸಳೆ ಹಿಡಿಯುವ ದೃಶ್ಯ ಎಂಬ ಸುಳ್ಳು ಸುದ್ದಿ ವೈರಲ್‌

ಇಂದಿನಿಂದ 3 ದೇಸಿ ಕಾನೂನು ಜಾರಿ

ಇಂದಿನಿಂದ 3 ದೇಸಿ ಕಾನೂನು ಜಾರಿ; ಏನೆಲ್ಲ ಹೊಸತು?

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

Karnataka ರಾಜ್ಯದಲ್ಲೂ 3 ಹೊಸ ಕಾನೂನು ಜಾರಿ

D. K. Shivakumar ಕೆಪಿಸಿಸಿ ಪಟ್ಟಕ್ಕೆ ಕುತ್ತು: ಖಂಡ್ರೆಗೆ ಪಟ್ಟ ?

D. K. Shivakumar ಕೆಪಿಸಿಸಿ ಪಟ್ಟಕ್ಕೆ ಕುತ್ತು: ಖಂಡ್ರೆಗೆ ಪಟ್ಟ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.