ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ


Team Udayavani, Oct 11, 2019, 5:41 AM IST

banni-kadiyuva

ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಬನ್ನಿ ಕಡಿಯುವ ಮೂಲಕ ಬುಧವಾರ ಮುಂಜಾನೆ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ ಎಳೆಯಲಾಯಿತು.

ಮಂಗಳವಾರ ರಾತ್ರಿ ದಟ್ಟ ಮಂಜು ಕವಿದ ವಾತಾವರಣದ ನಡುವೆಯೇ ಹತ್ತು ದೇಗುಲಗಳಿಂದ ಹೊರಟ ಚಲನವಲನಗಳ ನ್ನೊಳಗೊಂಡ ಮಂಟಪಗಳು ಮಡಿಕೇರಿಯ ರಾಜಬೀದಿಯಲ್ಲಿ ಸಾಗಿ ಬರುವ ಮೂಲಕ ದಸರಾ ಜನೋತ್ಸವದ ಅಂತಿಮ ದಿನಕ್ಕೆ ಮೆರಗನ್ನು ನೀಡಿದವು. ಚುಮುಚುಮು ಚಳಿಯ ನಡುವೆಯೇ ಸಾವಿರಾರು ಮಂದಿ ಕಣ್ತುಂಬಿಕೊಂಡರು. ಡಿಜೆ, ಬ್ಯಾಂಡ್‌, ವಾಲಗದ ನಾದಕ್ಕೆ ಕುಣಿದು ಕುಪ್ಪಳಿಸುವುದರೊಂದಿಗೆ ಮಡಿಕೇರಿ ದಸರಾದ ಸವಿಯನ್ನು ಅನುಭವಿಸಿತು.

ಶೋಭಾಯಾತ್ರೆಯಲ್ಲಿ ದಂಡಿನ ಮಾರಿಯಮ್ಮ ದೇವಾಲಯದ ಮಂಟಪ ಪ್ರಥಮ ಸ್ಥಾನ ಪಡೆದರೆ, ಕುಂದುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪ ದ್ವಿತೀಯ ಹಾಗೂ ಕೋಟೆ ಮಹಾಗಣಪತಿ ದಸರಾ ಸಮಿತಿಯ ಮಂಟಪ ತೃತೀಯ ಬಹುಮಾನ ಪಡೆಯಿತು. ದಂಡಿನ ಮಾರಿಯಮ್ಮ ದೇವಾಲಯ: ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಹಾಗೂ ಈ ಬಾರಿ ದಶಮಂಟಪ ಸಮಿತಿಯ ಜವಾಬ್ದಾರಿ ಹೊತ್ತಿದ್ದ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ನರಸಿಂಹನಿಂದ ಹಿರಣ್ಯ ಕಶಿಪುವಿನ ವಧೆ ಕಥಾ ಸಾರಾಂಶವನ್ನು ಹೊಂದಿರುವ ಎಂಟು ಚಲನಶೀಲ ಕಲಾಕೃತಿಗಳನ್ನು ಮಂಟಪದಲ್ಲಿ ಅಳವಡಿಸಿತ್ತು. ಎರಡು ಟ್ರ್ಯಾಕ್ಟರ್‌ಗಳಲ್ಲಿ ಅಳವಡಿಸಲಾಗಿದ್ದ ಕಲಾಕೃತಿಗಳಿಗೆ ದಿಂಡಿಗಲ್‌ನ ಎಂ.ಪಿ. ಲೈಟಿಂಗ್ಸ್‌ನವರು ದೀಪಾಲಂಕಾರ ಮಾಡಿದ್ದರು. ಹುದಬೂರಿನ ಕಲಾವಿದ ಮಹದೇವಪ್ಪ ಆ್ಯಂಡ್‌ ಸನ್ಸ್‌ ಅವರ ಕೈಚಳಕದಿಂದ ತಯಾರಾದ ಕಲಾಕೃತಿಗಳಿಗೆ ಮಡಿಕೇರಿಯ ಸುಬ್ರಮಣಿ ಮತ್ತು ತಂಡ ಪ್ಲಾಟ್‌ಫಾರಂ ಒದಗಿಸಿದರೆ, ಟ್ರ್ಯಾಕ್ಟರ್‌ ಸೆಟ್ಟಿಂಗ್ಸ್‌ನ್ನು ಮಡಿಕೇರಿ ಆರಾಧನ ಆರ್ಟ್ಸ್ನ ಆನಂದ್‌ ತಂಡ ಮತ್ತು ಕಲಾಕೃತಿಗಳ ಚಲನವಲವನ್ನು ದಿನೇಶ್‌ ನಾಯರ್‌ ಮತ್ತು ತಂಡ ನಿರ್ವಹಿಸಿತು. ಪೂಕೋಡ್‌ನ‌ ಜಾಲಿ ತಂಡದ ವಾದ್ಯಗೋಷ್ಠಿ, ಮಡಿಕೇರಿಯ ಸ್ಕಂದ ಡೆಕೋರೇಟರ್ನ ಅನಿಲ್‌ ಮತ್ತು ತಂಡದವರು ಧ್ವನಿವರ್ಧಕ ಫೈರ್‌ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್‌ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ನಿರ್ಮಿಸಲಾಗಿತ್ತು.

ಕೋಟೆ ಮಹಾ ಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾದ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿತ್ತು. ಮಡಿಕೇರಿಯ ನಜೀರ್‌ ಪೂಜಾ ಪೈಟಿಂಗ್ಸ್‌ ಬೋರ್ಡ್‌ ಅಳವಡಿಸಿದ್ದು, ಕಥಾ ನಿರ್ವಹಣೆಯನ್ನು ಆರ್‌.ಬಿ. ರವಿ ನಿರ್ವಹಿಸಿದರು. ಲೋಕೇಶ್‌ ಫ್ಯೂಚರ್‌ ಈವೆಂಟ್ಸ್‌ ಸ್ಟುಡಿಯೋ ಸೆಟ್ಟಿಂಗ್ಸ್‌ ಮತ್ತು ಸೌಂಡ್ಸ್‌ ಒದಗಿಸಿತ್ತು. 23 ಕಲಾಕೃತಿಗಳ ಚಲನ-ವಲನ ವ್ಯವಸ್ಥೆಯನ್ನು ಮಡಿಕೇರಿಯ ಹೊನ್ನಪ್ಪ ಮತ್ತು ಸುರೇಶ್‌, ಸಿದ್ದಪ್ಪಾಜಿ ಕ್ರಿಯೇಷನ್ಸ್‌ ನಿರ್ವಹಿಸಿತು. ಪ್ರಥಮ ಸ್ಥಾನ ಪಡೆದ ಮಂಟಪಕ್ಕೆ 20 ಗ್ರಾಂ ಚಿನ್ನ, ದ್ವಿತೀಯ ಸ್ಥಾನ ಪಡೆಯುವ ಮಂಟಪಕ್ಕೆ 14 ಗ್ರಾಂ ಚಿನ್ನ, ತೃತೀಯ ಸ್ಥಾನ ಪಡೆಯುವ ಮಂಟಪಕ್ಕೆ 10ಗ್ರಾಂ ಚಿನ್ನ ಹಾಗೂ ಉಳಿದ ಮಂಟಪಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ಟಾಪ್ ನ್ಯೂಸ್

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು

BJP: ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.