![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 9, 2022, 5:27 PM IST
ಮಡಿಕೇರಿ: ಅ. 17ರ ರಾತ್ರಿ ನಡೆಯುವ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಕಟ್ಟು ವಿಧಿಸುವ ಕಾರ್ಯ ನಡೆಯಿತು.
ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಭಗಂಡೇಶ್ವರ ದೇವಾಲಯ ತಕ್ಕರು ಹಾಗೂ ತಲಕಾವೇರಿ ದೇವಾಲಯ ತಕ್ಕರು, ಗ್ರಾಮದ ಹಿರಿಯರು ಹಾಗೂ ನಾಲ್ಕು ಗ್ರಾಮದ ದೇವಾಲಯಗಳ ತಕ್ಕ ಮುಖ್ಯಸ್ಥರು, ಅರ್ಚಕರು ಸೇರಿ ಸ್ಥಳೀಯರಾದ ರವಿ ಹೆಬ್ಬಾರ್ ಮನೆಗೆ ತೆರಳಿ ಬಾಳೆಗೊನೆ ಕಡಿದು ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ ಕಟ್ಟಿ ಆಜ್ಞಾ ಮುಹೂರ್ತ ಮಾಡಲಾಯಿತು.
ಈ ಸಂದರ್ಭ ಭಗಂಡೇಶ್ವರ ದೇಗುಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇಗುಲ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ರವಿ ಹೆಬ್ಬಾರ್, ಭಾಗಮಂಡಲ ಗ್ರಾಮಸ್ಥರು ಹಾಜರಿದ್ದರು.
ಅ.14 ರಂದು ಅಪರಾಹ್ನ 11.45ಕ್ಕೆ ಅಕ್ಷಯಪಾತ್ರೆ, 4.15ಕ್ಕೆ ಕಾಣಿಕೆ ಡಬ್ಬಿ ಇರಿಸುವ ಕಾರ್ಯಕ್ರಮ ನಡೆಯಲಿದೆ.
You seem to have an Ad Blocker on.
To continue reading, please turn it off or whitelist Udayavani.