![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 11, 2019, 5:36 AM IST
ಸೋಮವಾರಪೇಟೆ: ಪಟ್ಟಣದ ಬಸವೇಶ್ವರ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳಲ್ಲಿ ನಡೆಯುತ್ತಿದ್ದ ಶರನ್ನವರಾತ್ರಿ ಉತ್ಸವ ಮಂಗಳವಾರ ಸಾಂಪ್ರದಾಯಿಕ ತೆರೆ ಕಂಡಿದೆ. ನವರಾತ್ರಿಯ ಅಂಗವಾಗಿ ಕಳೆದ ಹತ್ತು ದಿನಗಳಿಂದ ಈ ದೇವಾಲಯಗಳಲ್ಲಿ ಶರನ್ನವರಾತ್ರಿ ಉತ್ಸವ ನಡೆಸಲಾಗುತ್ತಿತ್ತು. 9 ದಿನ ಪ್ರತಿನಿತ್ಯ ಒಂದೊಂದು ಅಲಂಕಾರ ವಿಶೇಷ ಪೂಜೆಗಳಿಂದ ದೇವಿ ಚಾಮುಂಡೇಶ್ವರಿ ಆರಾಧನೆ ನಡೆಸಲಾಗಿತ್ತು. 10ನೇ ದಿನ ವಿಜಯ ದಶಮಿಯಂದು ಸೋಮೇಶ್ವರ ದೇವಾಲಯದಲ್ಲಿ ಪ್ರತಿಪ್ರತಿಷ್ಠಾಪಿಸಿದ ದೇವಿಯ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ಮಂಗಳವಾದ್ಯ ಘೋಷ ಹಾಗೂ ವಿವಿಧ ಕಲಾ ತಂಡಗಳೊಡನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಆನೆಕೆರೆಯಲ್ಲಿ ವಿಸರ್ಜಿಸಿ ಬನ್ನಿ ಮರ ಕಡಿಯುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು.
ಬಸವೇಶ್ವರ ದೇವಾಲಯದಲ್ಲಿ ದೇವಿ ಚಾಮುಂಡೇಶ್ವರಿ ಮೂರ್ತಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ, ಕುಂಕುಮಾರ್ಚನೆಯೊಂದಿಗೆ ದೇವಿ ಮಹಾತೆ¾ ಪಾರಾಯಣ ನಡೆಯಿತು. ಅನಂತರ ಬಾಳೆ ಕಡಿದು, ಬನ್ನಿ ಮುಡಿದು, ವಿಜಯ ದಶಮಿ ಆಚರಿಸಿ ದೇವಿಗೆ ಉಯ್ನಾಲೊತ್ಸವದ ಅನಂತರ ವಿಶೇಷ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತು. ಈ ಸಂಧರ್ಭ ದೇವಿಗೆ ವಿವಿಧ ವಿಶೇಷ ತಿನಿಸುಗಳ ಆಲಂಕಾರ ಮಾಡಲಾಗಿತ್ತು. ಎರಡು ದೇವಾಲಯಗಳಲ್ಲೂ ಕಳೆದ ಹತ್ತು ದಿನಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಶರನ್ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.