Kolar: ಮರಕ್ಕೆ ಕಾರು ಡಿಕ್ಕಿ; ಮೂವರು ಬಿಇ ವಿದ್ಯಾರ್ಥಿಗಳು ಸಾವು
Team Udayavani, Aug 3, 2024, 9:13 PM IST
ಕೋಲಾರ: ಆಡಿ ಕಾರು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯ ನಗರ ಹೊರವಲಯದ ಸಹಕಾರ ನಗರದ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.
ಬೆಂಗಳೂರಿನ ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳಾದ ಹಾಸನ ಮೂಲದ ಹರ್ಷವರ್ಧನ್ (21), ಬಳ್ಳಾರಿ ಮೂಲದ ಬಸವರಾಜ್ (21), ಬಂಗಾರಪೇಟೆಯ ನಿಶ್ಚಲ್ (21) ಮೃತಪಟ್ಟವರು. ಬಂಗಾರಪೇಟೆಯ ಸಾಯಿ ಗಗನ್ ಅಪಾಯದಿಂದ ಪಾರಾಗಿದ್ದಾರೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿ ಗಗನ್ ಸೋದರಿ ಮದುವೆಯ ಆಮಂತ್ರಣ ಹಂಚಲು ಸ್ನೇಹಿತರು ಬಂಗಾರಪೇಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.