ಕಾರ್ಯಕರ್ತರ ಸೇರ್ಪಡೆ: ಕೈ-ದಳ ಕಸರತ್ತು


Team Udayavani, Apr 11, 2023, 3:02 PM IST

ಕಾರ್ಯಕರ್ತರ ಸೇರ್ಪಡೆ: ಕೈ-ದಳ ಕಸರತ್ತು

ಶ್ರೀನಿವಾಸಪುರ: ರಾಜಕೀಯ ಎದುರಾಳಿಗಳಾದ ಕಳೆದ 45 ವರ್ಷಗಳ ರಾಜಕಾರಣ ಮಾಡಿದ ಕೆ.ಆರ್‌.ರಮೇಶ್‌ಕುಮಾರ್‌ ಹಾಗೂ ಜಿ.ಕೆ.ವೆಂಕಟ ಶಿವಾರೆಡ್ಡಿರವರು ಚುನಾವಣೆ ಮತದಾನಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಸೇರ್ಪಡೆಗಳ ಭರಾಟೆಯಲ್ಲಿ ಆರೋಪ, ನಿಂದನೆ, ಪರಸ್ಪರ ಟೀಕೆಗಳಲ್ಲಿ ತೊಡಗಿಸಿ ಕೊಂಡಿರುವುದು ಹಲವು ವೇದಿಕೆಗಳು ಸಾಕ್ಷಿಯಾಗುತ್ತಿವೆ.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ಪುಟಗಳಲ್ಲಿ ಉಳಿಯುವಂತಹ ಇಬ್ಬರು ನಾಯಕರು ದೀರ್ಘ‌ಕಾಲ ಪರಸ್ಪರ 9 ಚುನಾವಣೆ ಎದುರಿಸಿದ್ದಾರೆ. ಈಗ ಮತ್ತೂಂದು ಚುನಾವಣೆಗೆ ಸಜ್ಜಾಗಿ ಮತದಾರರನ್ನು ಸೆಳೆಯುವ ತಂತ್ರದಲ್ಲಿ ಹಗಲಿರಳು ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬಸ್‌ಗಳನ್ನು ಓಡಿಸುವವರಾಗಿದ್ದಾರೆ ಅವರಿಗೇನು ಗೊತ್ತು, ಅವರು ಯಾವ ಕೆಲಸ ಮಾಡಿದ್ದಾರೆ, ತಾನು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂಬುದು ರಮೇಶ್‌ ಕುಮಾರ್‌ ದೂರಿದರೆ, ರಮೇಶ್‌ ಕುಮಾರ್‌ ಆಕ್ರವಾಗಿ ಜಮೀನು ಮಾಡಿ ಕೊಂಡಿದ್ದಾರೆ, ಕೆ.ಸಿ. ವ್ಯಾಲಿ ಯೋಜನೆ ಯಲ್ಲಿ ಕಮಿಷನ್‌ ಹೊಡೆದಿದ್ದಾರೆ. ಅಭಿವೃದ್ಧಿ ಕೆಲಸಗಳು ಶೂನ್ಯವೆಂದು ಜಿ.ಕೆ. ವೆಂಕಟಶಿವಾರೆಡ್ಡಿ ಆರೋಪಿಸುತ್ತಿದ್ದಾರೆ .

ಕಾರ್ಯಕರ್ತರ ಸೇರ್ಪಡೆಯಲ್ಲಿ ಕಸರತ್ತು: ಇಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಪ್ರಬಲವಾಗಿದ್ದು, ಕೆಲವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದರೆ. ಮತ್ತೆ ಕೆಲವರು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಸೇರ್ಪಡೆಗಳ ವಿಚಾರದಲ್ಲಿ ತಮ್ಮ ತಮ್ಮ ಪಕ್ಷದ ನಾಯಕರು ತೆರೆಮರೆಯಲ್ಲಿ ಸೇರ್ಪಡೆಗೆ ಕಸರತ್ತು ನಡೆಸುತ್ತಿದ್ದಾರೆ.

ಎಲ್ಲಿ ಸೇರಿದರು ಇತ್ತ ಬಾವಿ, ಅತ್ತ ಕೆರೆ: ಇದರಿಂದ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಸೇರ್ಪಡೆಗಳ ಭರಾಟೆ ನಡೆಯುತ್ತಿದೆ. ಸೇರ್ಪಡೆಯಾದವರು ಇಂದು ಇಲ್ಲಿ, ನಾಳೆ ಎಲ್ಲೋ ಎನ್ನುವಂತಾದರೂ, ಕಾರ್ಯಕರ್ತರನ್ನು ಪಕ್ಷದಲ್ಲಿ ಬಿಗಿದಿಟ್ಟುಕೊಳ್ಳವ ಪ್ರಯತ್ನಗಳು ನಡೆಯುತ್ತಿದೆ. ಯಾವ ಪಕ್ಷಕ್ಕೆ ಸೇರ್ಪಡೆಯಾದರೂ ಇತ್ತ ಬಾವಿ, ಅತ್ತ ಕೆರೆ ಎನ್ನುವಂತೆ ಸೇರ್ಪಡೆಯಾದವರು ಇನ್ನೊಂದು ಪಕ್ಷದ ಕೆಂಗೆಣ್ಣಿಗೆ ಗುರಿಯಾಗಬೇಕಿದೆ. ಪಕ್ಷಗಳಲ್ಲಿ ಜಾತಿಗಳ ಲೆಕ್ಕಾಚಾರವು ನಡೆಯುತ್ತಿದ್ದು, ಸಮುದಾಯಗಳಲ್ಲಿ ಪ್ರಬಲ ನಾಯಕರು ನೇತೃತ್ವ ವಹಿಸುವುದು ಬಂದವರನ್ನು ಹೂಮಾಲೆ ಹಾಕಿ ಸೇರ್ಪಡೆ ಮಾಡಿಕೊಳ್ಳುವುದು ನಡೆಯುತ್ತಿದೆ.ಪ್ರತಿ ಜಾತಿ ಸಮುದಾಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಈ ಎರಡು ಪಕ್ಷದ ಕಡೆ ವಾಲಿದ್ದಾರೆನ್ನುವುದು ಕಾಣುತ್ತಿದೆ.

ಕ್ಷೇತ್ರದಲ್ಲಿ ಇನ್ನೊಬ್ಬರಿಗಿಲ್ಲ ಅವಕಾಶ: ಕ್ಷೇತ್ರದಲ್ಲಿ ಕೆ. ಆರ್‌.ರಮೇಶ್‌ಕುಮಾರ್‌ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಎಷ್ಟು ಪ್ರಬಲ ನಾಯಕರಾಗಿದ್ದಾರೆಂದರೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಇವರ ವಯುಕ್ತಿಕ ವರ್ಚಸ್ಸಿನಿಂದ ಮಾತ್ರ ಗೆಲವು ಕಂಡಿದ್ದಾರೆ. ಪಕ್ಷಗಳ ಬದಲಾವಣೆಯಾದರೂ ಇಲ್ಲಿ ವೈಯಕ್ತಿಕವಾಗಿ ಇಬ್ಬರನ್ನು ಬೆಂಬಲಿಸುವುದು ಸಂಪ್ರದಾಯವಾಗಿದೆ. ಇವರಿಬ್ಬರೂ ಪರಸ್ಪರ ಚುನಾವಣೆಯಲ್ಲಿ ಇರುವವರಿಗೂ, ಇನ್ನೊಬ್ಬರಿಗೆ ಅವಕಾಶವಿಲ್ಲ ಎಂಬುದು ಕ್ಷೇತ್ರದ ಜನರ ಮಾತಾಗಿದೆ. ಇಬ್ಬರೂ ನಾಯಕರು ಪಕ್ಷಗಳ ಮತದಾರರನ್ನು ಸೆಳೆಯುವ ಮೂಲಕ ಸೇರ್ಪಡೆಗೆ ವೇದಿಕೆ ಸಿದ್ಧತೆ ಮಾಡಿಕೊಂಡಿರುವುದು ಕ್ಷೇತ್ರದಾದ್ಯಂತ ನಡೆಯುತ್ತಿದೆ.

ಕ್ಷೇತ್ರದಲ್ಲಿರುವ ಬಹಳಷ್ಟು ದಲಿತರ ಕಾಲೋನಿಗಳಲ್ಲಿ ಮೂಲ ಸೌಲಭ್ಯಗಳು ವಂಚನೆಯಾಗಿವೆ. ಚುನಾ ವಣೆ ಸಮಯಕ್ಕೆ ಭರವಸೆ ಗಳ ಮಹಾಪೂರ ಹರಿದು ಬಿಡುತ್ತಾರೆ. ಎಲ್ಲಿಲ್ಲದ ಪ್ರೀತಿ ತೋರಿಸುವುದು ಕಂಡರೂ, ಯಾವ ಕಾಲೋನಿಗಳಲ್ಲಿ ಎಷ್ಟರ ಮಟ್ಟಿಗೆ ಸೌಲಭ್ಯ ಒದಗಿಸಲಾಗಿದೆ ಎಂಬುದು ಚುನಾವಣೆಯಲ್ಲಿ ಗೆದ್ದವರು, ಸ್ಪರ್ಧೆಗೆ ನಿಲ್ಲುವವರು ಹೇಳಬೇಕಾಗಿದೆ. ● ಅಡವಿಚಂಬಕೂರು ಸದಾಶಿವ,ದಲಿತ ಮುಖಂಡ

ಚುನಾವಣಾ ಸಮಯಕ್ಕೆ ಸೇರ್ಪಡೆಗಳು ಸಹಜ. ಆದರೆ, ಈ ಸಮಯದಲ್ಲಿ ಸಾಕಷ್ಟು ಭರವಸೆಗಳು ನೀಡುತ್ತಾರೆ. ಗೆದ್ದ ನಂತರ ಈಡೇರಿಸುತ್ತಾರೆಯೇ? ಚುನಾವಣೆ ನಡೆಯುವ ಹಿಂದಿನ ವರ್ಷಗಳಲ್ಲಿ ಮತದಾರರಿಗೆ ಯಾವ ಭರವಸೆ ನೀಡುವುದಿಲ್ಲ. ಚುನಾವಣೆ ಬಂದಿದ್ದೇ ಭರವಸೆ ನೀಡುವ ಮೂಲಕ ಮತದಾರರನ್ನು ಯಾಮಾರಿಸುವ ಕೆಲಸ ಮಾತ್ರ ನಡೆಯುತ್ತದೆ. ● ಎನ್‌.ನಾಗಭೂಷಣ್‌, ತಾಲೂಕು ಕಾರ್ಮಿಕ ಮುಖಂಡರು ರೋಜರನಹಳ್ಳಿ

– ಕೆ.ವಿ.ನಾಗರಾಜ್‌

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.