![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 21, 2019, 3:25 PM IST
ಮುಳಬಾಗಿಲು: ತಾಲೂಕಿನ 31 ಕೆರೆಗಳಿಗೆ ಮುಂದಿನ ತಿಂಗಳು ಪಾಲಾರ್ ನದಿ ಮೂಲಕ ಕೆ.ಸಿ.ವ್ಯಾಲಿ ನೀರು ಹರಿಯಲಿದೆ. ಆದರೆ, ಕೆರೆ ಅಂಗಳದಲ್ಲಿ ಬೆಳೆದಿರುವ ಜಾಲಿ ಮರ, ಇತರೆ ಗಿಡ-ಗಂಟಿಗಳನ್ನು ಸಾಮಾಜಿಕ ಅರಣ್ಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ತೆರವುಗೊಳಿಸದೇ ನಿರ್ಲಕ್ಷ್ಯವಹಿಸಿದ್ದಾರೆ.
ಪಾಲರ್ ನದಿಯಲ್ಲಿನ ಗಿಡ ಮರ ಸ್ವಚ್ಛಗೊಳಿಸಲಾಗಿದೆ ಆದ್ರೂ ಕೆರೆಗಳಲ್ಲಿ ಹಾಗೆ ಬಿಡಲಾಗಿದೆ. ಕೆರೆಯಲ್ಲಿನ ಗಡಿ ಗಂಟಿ ತೆರವು ಮಾಡುವ ಸಂಬಂಧ ನಗರದ ಮಿನಿವಿಧಾನಸೌಧದಲ್ಲಿ 2019, ಜ.10ರಂದು ಜಿಲ್ಲಾಡಳಿತ, ತಾಲೂಕು ಆಡಳಿತ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯನ್ನು ಅಂದಿನ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ಎಚ್.ನಾಗೇಶ್ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಭೆ ನಡೆಸಿದ್ದರು.
ಸೂಚನೆ ನೀಡಿದ್ದ ಡೀಸಿ: ತಾಲೂಕಿಗೆ ಕೆ.ಸಿ ವ್ಯಾಲಿ ನೀರು ಮತ್ತು ಎತ್ತಿನಹೊಳೆ ನೀರು ಕೆರೆಗೆ ಬರುವುದರಿಂದ ನೀರು ಸಂರಕ್ಷಿಸಲು, ಕೆರೆಗಳಲ್ಲಿ ಬೆಳೆಸಿರುವ ಜಾಲಿ ಮತ್ತು ಇತರೇ ಮರಗಳನ್ನು ಗ್ರಾಪಂಗಳ ಮೂಲಕ ಮಾ.30ರ ಒಳಗಾಗಿ ಕಟಾವು ಮಾಡಿಸಿ, ಸ್ವಚ್ಛಗೊಳಿಸುವಂತೆ ಸಾಮಾಜಿಕ ವಲಯಾರಣ್ಯಾಧಿಕಾರಿ ಹರೀಶ್ಗೆ ಸೂಚನೆ ನೀಡಿದ್ದರು.
ನದಿಯಲ್ಲಿನ ಮರಗಿಡ ತೆರವು: ಗಡುವು ಮುಗಿದು 11 ತಿಂಗಳು ಆಗಿದ್ದರೂ ಯಾರೊಬ್ಬರೂ ಗಮನ ಹರಿಸಿಲ್ಲ. ಈಗಾಗಲೇ ಕೆ.ಸಿ. ವ್ಯಾಲಿ ನೀರು ಕೋಲಾರ ಕೆರೆಗಳಿಗೆ ಹರಿಯುತ್ತಿದ್ದು, ಪಾಲಾರ್ ನದಿಯ ಮೂಲಕ ತಾಲೂಕಿನ ಹೊಳಲಿ ಕೆರೆಗೂ ಹರಿಯಲಿದೆ. ಹೀಗಾಗಿ ಕೆ.ಸಿ.ವ್ಯಾಲಿ ಯೋಜನೆಯ ಅಧಿಕಾರಿಗಳು ಪಾಲಾರ್ ನದಿಯಲ್ಲಿ ಬೆಳೆದಿದ್ದ ಗಿಡ ಮರಗಳನ್ನು ಸ್ವತ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಕೆರೆಯಲ್ಲಿ ಗಿಡ ಮರ ತೆರವು ಮಾಡಿಲ್ಲ.
ಕ್ಲಸ್ಟರ್ 1 ರಲ್ಲಿ ಬರುವ ಕೆರೆಗಳು: ಈ ನೀರು ಪಾಲಾರ್ ನಿಂದ ಹರಿದು ಅಲ್ಲಿಂದ ಕ್ಲಸ್ಟರ್ 1ರ ಮೂಲಕ ಜಮ್ಮನಹಳ್ಳಿ ಕೆರೆ, ವರದಗಾನಹಳ್ಳಿ ಬಿದಿರು ಕೆರೆ, ವಿಜಲಾಪುರ ದೊಡ್ಡ ಕೆರೆ, ಗಂಜಿಗುಂಟೆ ದೊಡ್ಡ ಕೆರೆ, ಆವಣಿ ದೊಡ್ಡ ಕೆರೆ, ಊ.ಮಿಟ್ಟೂರು ದೊಡ್ಡ ಕೆರೆ, ಮರಕಲಘಟ್ಟ ದೊಡ್ಡ ಕೆರೆ, ಕ್ಲಸ್ಟರ್ 1ಎ ನಲ್ಲಿ ಕದರೀಪುರ ಎರಕುಲಗುಂಟ ಕೆರೆ ಮತ್ತು ವಿರೂಪಾಕ್ಷ ಗುಟ್ಟಹಳ್ಳಿ ಕೆರೆಗೆ ನೀರು ಹರಿಯಲಿದೆ.
ಕ್ಲಸ್ಟರ್ ಎರಡು: ಅದೇ ರೀತಿ ಕ್ಲಸ್ಟರ್ ಎರಡರ ಮೂಲಕ ಕೆಂಗುಂಟೆ ಕೆರೆ, ಸೋಮೇಶ್ವರಪಾಳ್ಯ ಕೆರೆ, ಇಂಡ್ಲು ಕೆರೆ, ಸೊನ್ನ ವಾಡಿ ದೊಡ್ಡಕೆರೆ, ಕವತನಹಳ್ಳಿ ದೊಡ್ಡ ಕೆರೆ, ಗುಮ್ಲಾಪುರ ಪಟೇಲ್ ಕೆರೆ, ಮೇಲಾಗಾಣಿ ದೊಡ್ಡ ಕೆರೆ, ಕನ್ನಸಂದ್ರ ದೊಡ್ಡ ಕೆರೆ, ತಾಯಲೂರು ಅಮಾನಿಕೆರೆ, ಮದ್ದೇರಿ ದೊಡ್ಡ ಕೆರೆ, ಕ್ಲಸ್ಟರ್ 3ರ ಮೂಲಕ ಕದರೀ ಪುರ ಗೋಪಣ್ಣ ಕೆರೆ, ಲಿಂಗಾಪುರ ದೊಡ್ಡ ಕೆರೆ, ದೊಡ್ಡಯ್ಯನ ಕೆರೆ, ಉಪ್ಪು ಕೆರೆ, ಸಿದ್ದ ಘಟ್ಟಹೊಸಕೆರೆ, ಮೇಡಿಗಪಲ್ಲಿಕೆರೆ, ಸಿದ್ದಘಟ್ಟವಡ್ಡು ಕೆರೆ, ಮಾರಂಡ ಹಳ್ಳಿ ಕೆರೆ, ಕಪ್ಪಲಮಡಗು ವಡ್ಡು ಕೆರೆ, ಮರಹೇರು ದೊಡ್ಡ ಕೆರೆ, ನಂಗಲಿ ದೊಡ್ಡ ಕೆರೆ, ಬ್ಯಾಟನೂರು ಮಲ್ಲಪ್ಪನಕೆರೆ ಸೇರಿ 31 ಕೆರೆಗಳಿಗೆ ನೀರು ಹರಿಯಲಿದೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಮಾತನಾಡಿ, ನಂಗಲಿ, ಗುಮ್ಲಾಪುರ, ಹೆಬ್ಬಣಿ, ಚಿನ್ನಹಳ್ಳಿ, ಮಂಚಿಗಾನಹಳ್ಳಿ, ಇನ್ನಿತರ ಕೆರೆಗಳಲ್ಲಿ ಜಾರಿ ಮರ ಬೆಳೆದು ಕೆರೆಯಂಗಳವನ್ನು ಆವರಿಸಿಕೊಂಡಿವೆ. ಅಧಿಕಾರಿಗಳ ಮಾತ್ರ ನಮಗೂ ಇದಕ್ಕೂ ಸಂಬಂಧ ವಿಲ್ಲದ ರೀತಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನೀರು ಕೆರೆಗಳಿಗೆ ಹರಿಸಿದ ನಂತರ ನೀರಿನ ಸಂರಕ್ಷಣೆ ಹೇಗೆ ಮಾಡಲು ಸಾಧ್ಯ ಎಂದು ಆರೋಪಿಸಿದರು.
-ಎಂ.ನಾಗರಾಜಯ್ಯ
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.