Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!


Team Udayavani, Aug 29, 2024, 3:11 PM IST

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

ಕೋಲಾರ: ಜಿಲ್ಲೆಯಲ್ಲಿರುವ ಒಟ್ಟು 3.40 ಲಕ್ಷ ಆದ್ಯತಾ ಪಡಿತರ ಚೀಟಿಗಳ ಪೈಕಿ 1.25 ಲಕ್ಷ ಪಡಿತರ ಚೀಟಿಗಳು ಅನರ್ಹಗೊಳ್ಳುವ ಭೀತಿ ಎದುರಿಸುತ್ತಿವೆ. ರಾಜ್ಯ ಸರ್ಕಾರವು ವಿವಿಧ ಭಾಗ್ಯಗಳನ್ನು ಆದ್ಯತಾ ವಲಯದ ಪಡಿತರ ಚೀಟಿಗಳ ಆಧಾರದ ಮೇಲೆಯೇ ವಿತರಿಸುತ್ತಿದ್ದು, ನಕಲಿ ಪಡಿತರ ಚೀಟಿಗಳ ಹಾವಳಿ ವಿಪರೀತವಾಗಿದೆ.

ಭಾಗ್ಯಗಳು ಉಳ್ಳವರಿಗೂ ಸೋರಿಕೆ ಯಾಗುತ್ತಿದೆ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ವಿವಿಧ ಮಾನದಂಡ ರೂಪಿಸಿ ಅದರ ಪ್ರಕಾರ ಅನರ್ಹಗೊಳ್ಳುವ ಪಡಿತರ ಚೀಟಿಗಳ ಪಟ್ಟಿ ತಯಾರಿಸಲು ಸೆಂಟರ್‌ ಫಾರ್‌ ಇ ಗೌವರ್ನೆಸ್‌ ಸಂಸ್ಥೆಗೆ ಕೋರಿತ್ತು. ಪಡಿತರ ಪಡೆಯದ, ಆದಾಯ ತೆರಿಗೆ ಪಾವತಿ ಸುವ, 1.20 ಲಕ್ಷಕ್ಕಿಂತಲೂ ಹೆಚ್ಚು ಆದಾಯ ಇರುವ ಕುಟುಂಬಗಳು ಮತ್ತು ವಿವಿಧ ಎಚ್‌ಆರ್‌ ಎಂಸ್‌, ಕೆಜಿಐಡಿಯೊಂದಿಗೆ ಜೋಡಣೆಯಾಗಿರುವ ಪಡಿತರ ಚೀಟಿಗಳನ್ನು ತಂತ್ರಾಂಶದ ಮೂಲಕ ಪತ್ತೆ ಹಚ್ಚಿ ಅನರ್ಹಗೊಳಿಸಲು ಕ್ರಮವಹಿಸಲಾಗಿತ್ತು. ಅದರಂತೆ ಸೆಂಟರ್‌ ಫಾರ್‌ ಇ ಗೌವರ್ನೆಸ್‌ ಅವರು ನೀಡಿರುವ ಅನರ್ಹ ಆದ್ಯತಾ ಪಡಿತರ ಚೀಟಿಗಳ ಪಟ್ಟಿಯ ಅನ್ವಯ ಕೋಲಾರ ಜಿಲ್ಲೆಯಲ್ಲಿ 1,25,627 ಪಡಿತರ ಚೀಟಿ ಅನರ್ಹವಾಗಲಿವೆ. ಜಿಲ್ಲೆಯಲ್ಲಿ 29,714 ಅಂತ್ಯೋದಯ ಹಾಗೂ 3,10,350 ಆದ್ಯತಾ ವಲಯದ ಕುಟುಂಬಗಳು ಸೇರಿ ಒಟ್ಟು 3.40 ಲಕ್ಷ ಆದ್ಯತಾ ಕುಟುಂಬಗಳಿದ್ದು, ಈಪೈಕಿ 1.25 ಲಕ್ಷ ಕುಟುಂಬಗಳು ವಿವಿಧ ಕಾರಣಗಳಿಗಾಗಿ ಅನರ್ಹಗೊಳ್ಳಲಿವೆ.

ತಾಲೂಕುವಾರು ಪಡಿತರ ಚೀಟಿ ವಿವರ: ಜಿಲ್ಲೆ ಯಲ್ಲಿ 29,713 ಅಂತ್ಯೋದಯ ಪಡಿತರ ಚೀಟಿಗಳಿವೆ. ಆದ್ಯತಾ ವಲಯದ 3,10,353 ಪಡಿತರ ಚೀಟಿಗಳಿವೆ. ಒಟ್ಟು 3.40 ಲಕ್ಷ ಆದ್ಯತಾ ವಲಯ ಕುಟುಂಬದ ಪಡಿತರ ಚೀಟಿಗಳು ಇವೆ. ಜಿಲ್ಲೆಯ ತಾಲೂಕುವಾರು ಅಂಕಿ-ಅಂಶಗಳ ಪ್ರಕಾರ ಬಂಗಾರಪೇಟೆಯಲ್ಲಿ 4,553 ಅಂತ್ಯೋದಯ ಹಾಗೂ 38,324 ಆದ್ಯತಾ ವಲಯ, ಕೋಲಾರದಲ್ಲಿ 6,325 ಅಂತ್ಯೋದಯ ಹಾಗೂ 75,255 ಆದ್ಯತಾ ವಲಯ, ಮಾಲೂರಿನಲ್ಲಿ 4,296 ಅಂತ್ಯೋದಯ ಹಾಗೂ 48,475 ಆದ್ಯತಾ ವಲಯ, ಮುಳಬಾಗಿಲಿನಲ್ಲಿ 4,977 ಅಂತ್ಯೋ ದಯ ಹಾಗೂ 58,870 ಆದ್ಯತಾ ವಲಯ, ಶ್ರೀನಿ ವಾಸಪುರದಲ್ಲಿ 5,422 ಅಂತ್ಯೋದಯ ಹಾಗೂ 43,282 ಆದ್ಯತಾ ವಲಯ ಹಾಗೂ ಕೆಜಿಎಫ್‌ ತಾಲೂಕಿನಲ್ಲಿ 4,140 ಅಂತ್ಯೋದಯ ಹಾಗೂ 43,147 ಆದ್ಯತಾ ವಲಯ ಪಡಿತರ ಚೀಟಿಗಳಿವೆ.

14,452 ಮಂದಿಗೆ ಆದ್ಯತೇತರ ಪಡಿತರ ಚೀಟಿ: ಇಡೀ ಜಿಲ್ಲೆಯಲ್ಲಿ 29,713 ಅಂತ್ಯೋದಯ ಪಡಿತರ ಚೀಟಿಗಳ ಪ್ರಯೋಜನವನ್ನು 1.17 ಲಕ್ಷ ಮಂದಿ ಪಡೆದುಕೊಳ್ಳುತ್ತಿದ್ದರೆ, ಆದ್ಯತಾ ವಲಯದ 3.10 ಲಕ್ಷ ಪಡಿತರ ಚೀಟಿಗಳ ಪ್ರಯೋಜನವನ್ನು 10.76 ಲಕ್ಷ ಮಂದಿ ಪಡೆದುಕೊಳ್ಳುತ್ತಿದ್ದಾರೆ. 2011 ಜನಗಣತಿ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 15.36 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಕೋಲಾರ ಜಿಲ್ಲಾದ್ಯಂತ ಕೇವಲ 14,452 ಮಂದಿ ಮಾತ್ರವೇ ಆದ್ಯತೇತರ ಪಡಿತರ ಚೀಟಿ ಹೊಂದಿದ್ದಾರೆ. ಈಗ ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳ ಪ್ರಕಾರ ಇನ್ನೂ 1.25 ಲಕ್ಷ ಕುಟುಂಬಗಳು ಆದ್ಯತಾ ವಲಯದ ಪಡಿತರ ಚೀಟಿ ಸ್ಥಾನಮಾನದಿಂದ ಆದ್ಯತೇತರ ಪಡಿತರ ಚೀಟಿ ಸ್ಥಾನಮಾನ ಹೊಂದಲಿದ್ದಾರೆ. ಆಗ ಒಟ್ಟಾರೆ, ಜಿಲ್ಲೆಯಲ್ಲಿ 1.50 ಲಕ್ಷ ಮಂದಿ ಆದ್ಯತೇತರ ಪಡಿತರ ಚೀಟಿದಾರರು ಇರುವಂತಾಗುತ್ತದೆ.

10 ದಿನ ಕಾಲಾವಕಾಶ: ಸೆಂಟರ್‌ ಫಾರ್‌ ಇ ಗೌವರ್ನೆಸ್‌ ಕುಟುಂಬ ತಂತ್ರಾಂಶದಿಂದ ಪಡೆದ ಅನರ್ಹ ಪಡಿತರ ಚೀಟಿಗಳ ಪರಿಶೀಲನೆಯನ್ನು 10 ದಿನಗಳೊಳಗಾಗಿ ಮುಕ್ತಾಯಗೊಳಿಸಿ ನೇರವಾಗಿ ಪಡಿತರ ಚೀಟಿ ಅನರ್ಹಗೊಳಿಸಿ ಇಲಾಖೆಯ ತಂತ್ರಾಂಶದಲ್ಲಿ ಅಪ್‌ಡೇಟ್‌ ಮಾಡಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಅನರ್ಹಗೊಳ್ಳು ವ ಪಡಿತರ ಚೀಟಿಗಳು: ಜಿಲ್ಲೆಯಲ್ಲಿ ಪಡಿತರ ಪಡೆಯದೆ ಕೆವೈಸಿ ಮಾಡಿಸದ ಅನರ್ಹ 61,707 ಪಡಿತರ ಚೀಟಿ, ಆದಾಯ ತೆರಿಗೆ ಪಾವತಿ ಮಾಡುತ್ತಿರುವ 3,073 ಪಡಿತರ ಚೀಟಿ, 1.20 ಲಕ್ಷ ರೂ.ಗಿಂತಲೂ ಹೆಚ್ಚಿನ ಆದಾಯ ಹೊಂದಿರುವ 60,762 ಕುಟುಂಬ ಮತ್ತು ಎಚ್‌ಆರ್‌ಎಂಎಸ್‌, ಕೆಜಿಐಡಿ ಜೊತೆಗೆ ಜೋಡಣೆಯಾಗಿರುವ 85 ಪಡಿತರ ಚೀಟಿಗಳು ಇವೆ. ಒಟ್ಟಾರೆ 3.40 ಲಕ್ಷ ಪಡಿತರ ಚೀಟಿಗಳಲ್ಲಿ ಸರ್ಕಾರದ ಮಾನದಂಡಗಳ ಪ್ರಕಾರ 1.25 ಲಕ್ಷ ಪಡಿತರ ಚೀಟಿಗಳು ಆದ್ಯತಾ ವಲಯ ಪಡಿತರ ಚೀಟಿಯಿಂದ ಅನರ್ಹಗೊಳ್ಳಲಿವೆ.

ನಕಲಿ ಆದ್ಯತಾ ವಲಯದ ಪಡಿತರ ಚೀಟಿಗಳನ್ನು ಗುರುತಿಸಲು ಸರ್ಕಾರ ವಿವಿಧ ಮಾನದಂಡಗಳನ್ನು ನಿಗದಿಪಡಿಸಿ, ತಂತ್ರಾಂಶದ ನೆರವಿನಿಂದ ಮಾನದಂಡಗಳನ್ನು ಮೀರಿರುವ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಮುಂದಾಗಿತ್ತು. ಇದೀಗ ಕೋಲಾರ ಜಿಲ್ಲೆ ಸೇರಿದಂತೆ ಇಡೀ ರಾಜ್ಯಾದ್ಯಂತ ಅನರ್ಹಗೊಳ್ಳಲಿರುವ ಪಡಿತರ ಚೀಟಿಗಳ ಪಟ್ಟಿ ಲಭ್ಯವಾಗಿದ್ದು, ಈ ಪಟ್ಟಿಯನ್ನು ಮತ್ತೂಮ್ಮೆ ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಆದ್ಯತಾ ವಲಯದ ಪಡಿತರ ಚೀಟಿಗಳ ಪಟ್ಟಿಯಿಂದ ಅನರ್ಹಗೊಳಿಸಲು ಇಲಾಖೆಗೆ ಸೂಚಿಸಿದೆ. ಇದರಿಂದ ಜಿಲ್ಲೆಯಲ್ಲಿ 1.25 ಲಕ್ಷ ಪಡಿತರ ಚೀಟಿಗಳು ಆದ್ಯತಾ ವಲಯದಿಂದ ಹೊರ ಬರುವ ಸಾಧ್ಯತೆ ಇದೆ. -ಆಸಿಫ್‌ ಪಾಷಾ, ಪಡಿತರ ಚೀಟಿದಾರರು, ಕೋಲಾರ

  ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

High-Court

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

Kolar ಭಾಗದವರಿಗೂ ಸಿಎಂ ಸ್ಥಾನ ಕೊಡಲಿ: ಕೊತ್ತೂರು ಮಂಜುನಾಥ್‌

Kolar ಭಾಗದವರಿಗೂ ಸಿಎಂ ಸ್ಥಾನ ಕೊಡಲಿ: ಕೊತ್ತೂರು ಮಂಜುನಾಥ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.