![6-ptr](https://www.udayavani.com/wp-content/uploads/2024/12/6-ptr-415x249.jpg)
ಆಟೋ ಪ್ರಯಾಣ: ಕನಿಷ್ಠ ದರ 36 ರೂ. ನಿಗದಿಗೆ ಆಗ್ರಹ
Team Udayavani, Mar 8, 2021, 3:35 PM IST
![ಆಟೋ ಪ್ರಯಾಣ: ಕನಿಷ್ಠ ದರ 36 ರೂ. ನಿಗದಿಗೆ ಆಗ್ರಹ](https://www.udayavani.com/wp-content/uploads/2021/03/Untitled-1-228-620x372.jpg)
ಕೋಲಾರ: ಪೆಟ್ರೋಲ್-ಡೀಸೆಲ್, ಸಿಎನ್ಜಿ, ಎಲ್ಪಿಜಿ ಗ್ಯಾಸ್ ಬೆಲೆ, ಆಟೋ ರಿಕ್ಷಾ ಬಿಡಿಭಾಗಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಟೋ ಪ್ರಯಾಣದ ಕನಿಷ್ಠ ದರ 36 ರೂ.ಗಳಿಗೆ ನಿಗದಿ ಮಾಡಲು ಆಗ್ರಹಿಸಿ ಜಿಲ್ಲಾ ತ್ರಿಚಕ್ರವವಾಹನಚಾಲಕರ ಸಂಘ, ರಾಜ್ಯ ಆಟೋ ಚಾಲಕರ ಕಲ್ಯಾಣಜಂಟಿ ಕ್ರಿಯಾ ಸಮಿತಿಯಿಂದ ನಗರದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಲಾಯಿತು.
ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಚಾಲಕರು, ಸಂಘಟನೆಗಳ ಮುಖಂಡರು ದೇಶಾದ್ಯಂತತೈಲೋತ್ಪನ್ನಗಳು, ಆಟೋ ಬಿಡಿ ಭಾಗಗಳು, ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆಟೋ ಚಾಲಕರು ದಿನನಿತ್ಯದ ಆದಾಯಕ್ಕೆಪರದಾಡುವಂತಾಗಿದೆ ಎಂದು ದೂರಿದರು.
ಜೀವನೋಪಾಯಕ್ಕೆ ಕಷ್ಟ: ಒಂದು ದಿನಕ್ಕೆ ಇಂದಿನ ಕನಿಷ್ಠ ಪ್ರಯಾಣ ದರ 25 ರೂ.ಗಳಂತೆ 20 ಬಾಡಿಗೆಮಾಡಿದರೆ 500 ರೂ. ಸಂಪಾದನೆ ಆಗುತ್ತದೆ. ಇದರಲ್ಲಿ ಇಂಧನಕ್ಕೆ 4-6 ಲೀ. ಗ್ಯಾಸ್ಗೆ 400 ರೂ ಖರ್ಚಾಗುತ್ತಿದ್ದು, ಪ್ರತಿದಿನ ಆಟೋ ಚಾಲಕರುತಮ್ಮ ಜೀವನೋಪಾಯಕ್ಕೆ ಸಾಲ ಸೂಲ ಮಾಡುವ ಪರಿಸ್ಥಿತಿ ಉಂಟಾಗಿದೆ. ವಾಹನದ ದುರಸ್ತಿ ಹಾಗೂನಿರ್ವಹಣೆಗೆ ಸಾವಿರಾರು ರೂ. ಖರ್ಚು ಆಗುತ್ತಿರುವುದಾಗಿ ಹೇಳಿದರು.
ವೃತ್ತಿ ತೊರೆಯುವ ಸ್ಥಿತಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮನೆ ಬಾಡಿಗೆ, ಮಕ್ಕಳವಿದ್ಯಾಭ್ಯಾಸ, ಆರೋಗ್ಯ ಮತ್ತಿತರ ವಿಚಾರಕ್ಕೆಆಟೋ ಚಾಲಕರು ಪರದಾಡುವಂತಾಗಿದೆ. ಕೋವಿಡ್ ದಿಂದಾಗಿ ಜೀವನಾಧಾರ ಕಳೆದುಕೊಂಡಿರುವ ಶ್ರಮಿಕ ವರ್ಗದ ಚಾಲಕರು, ಈ ಉದ್ಯಮವನ್ನು ತೊರೆದು ರಸ್ತೆ ಬದಿ ವ್ಯಾಪಾರಕ್ಕೆ ಮುಂದಾಗುವ ಸ್ಥಿತಿಗೆ ತಲುಪಿದ್ದಾರೆ ಎಂದರು.
ಪ್ರತಿ ಕಿ.ಮೀ.ಗೆ 18 ರೂ.ಗೆ ಹೆಚ್ಚಿಸಿ: ಕೋಲಾರ ಜಿಲ್ಲೆಯಲ್ಲಿ ಆಟೋ ರಿಕ್ಷಾ ಕನಿಷ್ಠ ಪ್ರಯಾಣ ದರ ಮೊದಲ 2.25 ಕಿ.ಮೀ.ಗೆ 25 ರೂ., ನಂತರದ ಪ್ರತಿ ಕಿ.ಮೀ.ಗೆ 12.50 ರೂ.ಗಳಂತೆ ನಿಗ ಯಾಗಿದ್ದು, ಕೂಡಲೇ ಕನಿಷ್ಠ ಪ್ರಯಾಣ ದರವನ್ನು 36 ರೂ.ಗಳಿಗೆ ನಿಗ ದಿ ಮಾಡಿ ನಂತರ ಪ್ರತಿ ಕಿ.ಮೀ.ಗೆ 18 ರೂ.ಗೆ ಏರಿಕೆ ಮಾಡಬೇಕೆಂದು ಆಗ್ರಹಿಸಿದರು. ರಾಜ್ಯ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್, ಜಿಲ್ಲಾಧ್ಯಕ್ಷಜೆ.ಜಿ.ಶ್ರೀನಿವಾಸಮೂರ್ತಿ, ತಾಲೂಕು ಅಧ್ಯಕ್ಷಕೆ.ನಾರಾಯಣಸ್ವಾಮಿ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಸುಬ್ರಹ್ಮಣಿ, ಉಪಾಧ್ಯಕ್ಷ ಅಮ್ಜದ್ಪಾಷ, ಮಾಜಿ ಅಧ್ಯಕ್ಷ ರಾಮೇಗೌಡ, ಪದಾ ಕಾರಿಗಳಾದ ವೇಣುಗೋಪಾಲ್, ಬೇತಮಂಗಲ ಅಪ್ಸರ್ ಪಾಷ, ಮಂಜುನಾಥ್, ಚಲಪತಿ ಮತ್ತಿತರಿದ್ದರು.
ಟಾಪ್ ನ್ಯೂಸ್
![6-ptr](https://www.udayavani.com/wp-content/uploads/2024/12/6-ptr-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Mulabagil](https://www.udayavani.com/wp-content/uploads/2024/12/Mulabagil-150x90.jpg)
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
![Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು](https://www.udayavani.com/wp-content/uploads/2024/12/14-5-150x90.jpg)
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
![Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು](https://www.udayavani.com/wp-content/uploads/2024/12/Suspend-5-150x98.jpg)
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
![Rain-1](https://www.udayavani.com/wp-content/uploads/2024/12/Rain-1-150x90.jpg)
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
![8](https://www.udayavani.com/wp-content/uploads/2024/11/8-27-150x90.jpg)
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
![6-ptr](https://www.udayavani.com/wp-content/uploads/2024/12/6-ptr-150x90.jpg)
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-150x87.jpg)
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
![BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/4-37-150x90.jpg)
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
![ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು](https://www.udayavani.com/wp-content/uploads/2024/12/hospital-150x89.jpg)
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
![1](https://www.udayavani.com/wp-content/uploads/2024/12/1-37-150x80.jpg)
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.