![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 6, 2019, 4:22 PM IST
ಕೆಜಿಎಫ್: ಪ್ರಯಾಣಿಕ ಆಟೋಗಳು ಗ್ಯಾಸ್ ಸ್ಟೇಷನ್ನಲ್ಲಿ ಮಾತ್ರ ರಿಫಿಲಿಂಗ್ ಮಾಡಿಸಬೇಕೆಂದು ಪೊಲೀಸರು ಒತ್ತಾಯ ಮಾಡುತ್ತಿರುವುದರಿಂದ ಶಾಸಕಿ ರೂಪಕಲಾ ಆಟೋ ಚಾಲಕರ ಮನವಿ ಮೇರೆಗೆ ಎಸ್ಪಿ ಎಂ.ಎಸ್.ಮಹಮದ್ ಸುಜೀತ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಆಟೋ ರಿಫಿಲ್ಲಿಂಗ್ (ಅಕ್ರಮ)ನಿಂದ ಅನುಕೂಲ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ. ಅದು ಅಪಾಯಕಾರಿ ಕೂಡ ಆಗಿದೆ. ಆದರೆ, ತಕ್ಷಣ ನಿಲ್ಲಿಸಿದರೆ ಜೀವನಕ್ಕೆ ಕಷ್ಟ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ. ಮಾನವೀಯತೆ ಆಧಾರದ ಮೇಲೆ ಕೆಲವು ದಿನ ಆಟೋ ಚಾಲಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಶಾಸಕಿ ತಿಳಿಸಿದ್ದಾರೆ.
ಆಟೋ ಚಾಲಕರಿಗೆ ಚಾಲನ ಪರವಾನಗಿ, ವಿಮೆ ಮೊದಲಾದ ಅನುಕೂಲಗಳನ್ನು ಮಾಡಿಕೊಡಬೇಕಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಪೊಲೀಸ್ ಮತ್ತು ಸಾರಿಗೆ ಅಧಿಕಾರಿಗಳು ಜಂಟಿಯಾಗಿ ಸಮಸ್ಯೆ ಬಗೆಹರಿಸಬೇಕೆಂದು ಕೋರಿದ್ದೇನೆ ಎಂದು ರೂಪಕಲಾ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.