ಮಳೆಗೆ ಮರ ಬಿದ್ದು ಮಹಿಳೆ ಸಾವು
ಅಶ್ವತ್ಥ್ಕಟ್ಟೆ ಬಳಿ ನಿಂತಿದ್ದಾಗ ಘಟನೆ, ಮತ್ತೂಬ್ಬ ಮಹಿಳೆಗೆ ಗಾಯ
Team Udayavani, May 12, 2019, 11:05 AM IST
ಮುಳಬಾಗಿಲು ತಾಲೂಕಿನಲ್ಲಿ ಸಂಜೆ ಬಿದ್ದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ತೊರಡಿ ಗ್ರಾಮದ ಅಂಚಿನಲ್ಲಿರುವ ಅಶ್ವತ್ಥ್ ಕಟ್ಟೆಯೊಂದರ ಮೇಲಿ ರುವ ಅರಳಿ ಮರ ಮುರಿದು ಬಿದ್ದಿದೆ.
ಮುಳಬಾಗಿಲು: ತಾಲೂಕಿನಲ್ಲಿ ಶನಿವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಶ್ವತ್ಥ್ ಕಟ್ಟೆಯಲ್ಲಿದ್ದ ಅರಳಿ ಮರ ಮುರಿದು ಬಿದ್ದು ಓರ್ವ ಮಹಿಳೆ ಮೃತಪಟ್ಟು, ಮತ್ತೂಬ್ಬರು ತೀವ್ರ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕಸಬಾ ಹೋಬಳಿ ತೊರಡಿ ಗ್ರಾಮದ ಪಾರ್ವತಮ್ಮ (50), ಮೃತಪಟ್ಟ ದುರ್ದೈವಿ. ವೆಂಕಟೇಶಪ್ಪ ಅವರ ಪತ್ನಿ ಪಾರ್ವತಮ್ಮ ಮತ್ತು ಮಮತಾ (35) ಗ್ರಾಮದ ಅಂಚಿನಲ್ಲಿ ಹಸುಗಳನ್ನು ಮೇಯಿಸಲು ಹೋಗಿದ್ದಾಗ ಸಂಜೆ ಮಳೆ ಆರಂಭವಾಗಿದೆ.
ನಂತರ ಕಟ್ಟೆಯ ಪಕ್ಕದಲ್ಲಿಯೇ ನಿಂತಿದ್ದಾರೆ. ಕ್ರಮೇಣ ಬಿರುಗಾಳಿ ಸಹಿತ ಮಳೆ ಹೆಚ್ಚಾಗಿ ವರಾಂಡದಿಂದ ಕೆಲವೇ ಅಡಿಗಳ ದೂರದಲ್ಲಿದ್ದ ಅಶ್ವಥ್ ಕಟ್ಟೆಯ ಮೇಲಿನ ಅರಳಿ ಮರ ಮುರಿದು ಪಾರ್ವತಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಮತಾ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.