![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 17, 2020, 3:38 PM IST
ಗಂಗಾವತಿ: ಹಿರೇಜಂತಗಲ್ ವಿಪ್ತ ಸೀಮಾದಲ್ಲಿರುವ ವಿಜಯನಗರ ಕಾಲದ ಪುರಾತನ ಅಮೃತೇಶ್ವರ ದೇಗುಲ ಬೀಳುವ ಹಂತ ತಲುಪಿದ್ದು ಸ್ಥಳೀಯರು ಜಲಸಂಪನ್ಮೂಲ ಮತ್ತು ತಾಲೂಕು ಆಡಳಿತದ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ.
ದೇವಘಾಟ ಹತ್ತಿರ ವಿಜಯನಗರ ಕಾಲದಲ್ಲಿ ನಿರ್ಮಿಸಿದ ಪುರಾತನ ಅಮೃತೇಶ್ವರ ಮತ್ತು ಗಣೇಶ ದೇಗುಲವಿದ್ದು ಈ ದೇಗುಲವನ್ನು ಬೆಟ್ಟದಮೇಲೆ ಹತ್ತು ಸಾಲಿನ ಕಲ್ಲಿನ ಬುನಾದಿ ಹಾಕಿ ಮೇಲೆ ದೇಗುವನ್ನು ನಿರ್ಮಿಸಲಾಗಿದೆ. ಇದರ ಕೆಳಗ ವಿಜಯನಗರ ಮೇಲ್ಪಟ್ಟ ಕೆಳಮಟ್ಟದ ಕಾಲುವೆಗಳನ್ನು ನಿರ್ಮಿಸಲಾಗಿದೆ. ಇದೀಗ ಕಾಲುವೆಯ ನೀರು ಸೋರಿಕೆಯ ಪರಿಣಾಮವಾಗಿ ಗೋಡೆಗಳಿಗೆ ಜೋಡಿಸಲಾಗಿದ್ದ ಕಲ್ಲುಗಳು ಕುಸಿದು ಕಾಲುವೆಗೆ ಬಂದಿರುವುದರಿಂದ ಅಮೃತೇಶ್ವರ ದೇಗುಲದ ಕಂಬಳಿಗೆ ಜೋಡಿಸಿರುವ ದೇಗುಲದ ಮೇಲ್ಭಾಗದ ಕಲ್ಲುಗಳು ಜಾರಿ ಕೆಳಗೆ ಬೀಳುವ ಹಂತದ ತಲುಪಿವೆ.
ಇತಿಹಾಸ: ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವ ಪಂಪಾ ವಿರೂಪಾಕ್ಷೇಶ್ವರ ಮೂರ್ತಿ ಸ್ಥಾಪನೆ ಸಂದರ್ಭದಲ್ಲಿ ಹಂಪಿಗೆ ಎಂಟು ದಿಕ್ಕುಗಳಲ್ಲಿ ವಿವಿಧ ಹೆಸರಿನ ಈಶ್ವರ ಲಿಂಗವನ್ನು ಸ್ಥಾಪಿಸಲಾಗಿದೆ. ಗಂಗಾವತಿ ತಾಲೂಕಿನ ದೇವಘಾಟನಲ್ಲಿ ಅಮೃತೇಶ್ವರ ಏಳುಗುಡ್ಡದ ಸಾಲಿನಲ್ಲಿ ವಾಣಿಭದ್ರೇಶ್ವರ ದೇಗುಲ ನಿರ್ಮಿಸಲಾಗಿದೆ. ಶಿ
ವರಾತ್ರಿ ಸಂದರ್ಭದಲ್ಲಿ ಈಗಲೂ ಭಕ್ತರು ಹಂಪಿ ವಿರೂಪಾಕ್ಷ ಸೇರಿ ಎಂಟು ಈಶ್ವರ ಲಿಂಗಗಳ ದರ್ಶನ ಪಡೆಯುವ ಪದ್ದತಿ ಇದೆ. ಇಂತಹ ಮಹತ್ವದ ದೇಗುಲ ಬೀಳುವ ಹಂತದಲ್ಲಿ ಇದ್ದು ಇದರ ರಕ್ಷಣೆ ಅಗತ್ಯವಾಗಿದೆ.
ನಿರ್ಲಕ್ಷ್ಯ: ಕಾಲುವೆ ಕುಸಿತದಿಂದ ಅಮೃತೇಶ್ವರ ದೇಗುಲ ಬೀಳುವ ಹಂತ ತಲುಪಿದೆ. ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಹಂಪಿಯಲ್ಲಿ ಮಾತ್ರ ಜೀವಂತವಾಗಿದೆ. ಆನೆಗೊಂದಿ ಗಂಗಾವತಿ ತಾಲೂಕಿನಲ್ಲಿ ಇರುವ ಪುರಾತನ ಸ್ಮಾರಕಗಳು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸರಕಾರ ಕೂಡಲೇ ಗಮನಹರಿಸಿ ಅಮೃತೇಶ್ವರ ದೇಗುಲ ಉಳಿಸಬೇಕಿದೆ ಎಂದು ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ ಒತ್ತಾಯಿಸಿದ್ದಾರೆ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.