Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Team Udayavani, Apr 19, 2024, 10:54 PM IST
ಕನಕಗಿರಿ: ರಾಂಪುರದ ಹೊರ ವಲಯದ ಆಂಜನೇಯ ದೇಗುಲದಲ್ಲಿ ಸೆರೆ ಹಿಡಿದಿದ್ದ ಕರಡಿಯನ್ನು ಬೋನಿನಲ್ಲಿ ಹಾಕುವ ಸಮಯದಲ್ಲಿ ಅದು ದಾಳಿ ಮಾಡಿದ ಪರಿಣಾಮ ಚೆನ್ನಪ್ಪ ಮಡಿವಾಳ (74) ಎಂಬವರು ಮೃತಪಟ್ಟ ಘಟನೆ ನಡೆದಿದೆ.
ಗ್ರಾಮದ ಆಂಜನೇಯ ದೇಗುಲದಲ್ಲಿ ಭಕ್ತರು ಪೂಜೆ ಸಲ್ಲಿಸಿ ಮೂರ್ತಿಗೆ ಹಾಕಿದ್ದ ಎಣ್ಣೆಯನ್ನು ನೆಕ್ಕಲು ಕರಡಿಯೊಂದು ಪ್ರತಿ ನಿತ್ಯವೂ ದೇಗುಲಕ್ಕೆ ಬರುತ್ತಿತ್ತು. ನಸುಕಿನ ಜಾವ ಸ್ಥಳೀಯರೊಬ್ಬರು ದೇಗುಲದೊಳಗೆ ಕರಡಿ ಹೋಗಿರುವುದನ್ನು ಗಮನಿಸಿ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಇಲಾಖೆ ಸಿಬಂದಿ ಕಾಯಾಚರಣೆ ಕೈಗೊಂಡ ವೇಳೆ ಚೆನ್ನಪ್ಪ ಮೇಲೆ ಕರಡಿ ದಾಳಿ ಮಾಡಿ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರ ಘಾಸಿಗೊಳಿಸಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu Kashmir:ಅಮರನಾಥ್ ಯಾತ್ರೆ ಬಳಿಕ ವಿಧಾನಸಭೆ ಚುನಾವಣೆ, ಗರಿಗೆದರಿದ ರಾಜಕೀಯ ಚಟುವಟಿಕೆ!
MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು
ಐಶಾರಾಮಿ ಕಾರು, ಫೈವ್ ಸ್ಟಾರ್ ಹೋಟೆಲ್ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!
Bengaluru: ಬೈಕ್ಗೆ ಲಾರಿ ಡಿಕ್ಕಿ : ರಿಯಲ್ ಎಸ್ಟೇಟ್ ಏಜೆಂಟ್ ಸಾವು
Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.