ಪಾಲಿಹೌಸ್‌ನಲ್ಲೂ ಬೆಳೆದ್ರು ವೀಳ್ಯದೆಲೆ

ಅನ್ನದಾತರ ಆದಾಯದ ಮೂರು ತಿಂಗಳ ಬೆಳೆ ; ತೆರೆದ ಕೃಷಿಗಿಂತ ಮೂರು ಪಟ್ಟು ಆದಾಯ

Team Udayavani, Oct 18, 2022, 4:49 PM IST

22

ಕುಷ್ಟಗಿ: ತಾಲೂಕಿನ ನಿಡಶೇಸಿಯ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ(ಕೆಎಸ್‌ ಎಚ್‌ಡಿಎ) ಇಸ್ರೇಲ್‌ ಮಾದರಿ ತೋಟಗಾರಿಕೆ ಕ್ಷೇತ್ರವು ಹಲವು ಯಶಸ್ವಿ ಪ್ರಯೋಗಗಳಿಗೆ ಸಾಕ್ಷಿಯಾಗಿದೆ.

ಅನ್ನದಾತರ ದೈನಂದಿನ ಆದಾಯದ ಬೆಳೆಯಾದ, ಆಯಾ ಪ್ರದೇಶಕ್ಕೆ ಸೀಮಿತವೆನಿಸಿದ ವೀಳ್ಯದೆಲೆ(ಎಲೆಬಳ್ಳಿ)ಯನ್ನು ಪಾಲಿಹೌಸ್‌ (ನೆರಳು ಪರದೆ)ನಲ್ಲಿ ಬೆಳೆದು ಸೈ ಎನಿಸಿದೆ.

ರೇಷ್ಮೆಯಂತೆ ನವಿರಾದ ಎಲೆ: ಸಾಮಾನ್ಯವಾಗಿ ಎಲೆಬಳ್ಳಿ ಬಯಲು ಪ್ರದೇಶದಲ್ಲಿ ಅಂತರ್ಜಲ ನೀರಾವರಿ ಆಧಾರಿತವಾಗಿ ಬೆಳೆಯುವುದು. ಈ ಭಾಗದ ಯರಗೇರಾ, ಮುದುಟಗಿ ಮೊದಲಾದ ಗ್ರಾಮಗಳಲ್ಲಿ ಇದನ್ನು ಪಾರಂಪರಿಕವಾಗಿ ಬೆಳೆಯಲಾಗುತ್ತಿದೆ. ನಿಡಶೇಸಿ ತೋಟಗಾರಿಕಾ ಕ್ಷೇತ್ರದ 10 ಗುಂಟೆಯ ಪಾಲಿಹೌಸ್‌ನಲ್ಲಿ 1,000 ಬಳ್ಳಿ ಬೆಳೆಸಿರುವುದು ಉತ್ತರ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲವೆನ್ನಬಹುದು. ಇದು 3 ತಿಂಗಳ ಬೆಳೆಯಾಗಿದ್ದು, ಎಲೆಗಳು ಅಗಲವಾಗಿ ರೇಷ್ಮೆಯಂತೆ ನವಿರಾಗಿವೆ.

ಮೂರು ಪಟ್ಟು ಆದಾಯ: ತೆರೆದ ಕೃಷಿಯಲ್ಲಿ 1 ಎಕರೆಯಲ್ಲಿ ವೀಳ್ಯದೆಲೆಯ ಉತ್ಪನ್ನ 10 ಗುಂಟೆ ಪಾಲಿಹೌಸ್‌ಗೆ ಸಮವೆನಿಸಿದೆ. ತೆರೆದ ಕೃಷಿಯಲ್ಲಿ ವೀಳ್ಯದೆಲೆಗೆ ನೀಡುವ ಆಹಾರದಲ್ಲಿ ಬಳ್ಳಿಯ ಆಧಾರಕ್ಕಾಗಿ ಬೆಳೆಸುವ ನುಗ್ಗೆ, ಬೊರಲಾ, ಚಾಗಟಿಮರಗಳಿಗೆ ಶೇ.50 ಉಪಯೋಗವಾದರೆ ಉಳಿದ ಶೇ.50 ವೀಳ್ಯದೆಲೆ ಬಳ್ಳಿಗೆ ಉಪಯೋಗವಾಗುತ್ತದೆ. ಪ್ರತಿ ಬಳ್ಳಿಗೆ 500 ವೀಳ್ಯದೆಲೆ ಉತ್ಪನ್ನ ತೆರೆದ ಕೃಷಿಯಲ್ಲಿ ಸಾಧ್ಯವಿದೆ. ಅದೇ ಸಂರಕ್ಷಿತ ಪಾಲಿಹೌಸ್‌ನಲ್ಲಿ ಮೂರುಪಟ್ಟು ಸಾಧ್ಯವಿದ್ದು, ಚೆನ್ನಾಗಿ ನಿರ್ವಹಣೆ ಮಾಡಿದರೆ 2,500 ಎಲೆಗಳವರೆಗೆ ನಿರೀಕ್ಷಿಸಬಹುದು. ಪಾಲಿಹೌಸ್‌ನಲ್ಲಿ ಬೆಳೆದ ವೀಳ್ಯದೆಲೆಗೂ, ತೆರೆದ ಕೃಷಿಯಲ್ಲಿ ಬೆಳೆದ ಎಲೆಗೂ ವ್ಯತ್ಯಾಸ ಗುರುತಿಸಬಹುದಾಗಿದ್ದು, ಪ್ರತಿ ಪೆಂಡಿ 3,500 ರೂ.ಗೆ ಮಾರಾಟವಾಗಿದೆ. ಹನುಮಸಾಗರ, ಕುಷ್ಟಗಿ, ಕೊಪ್ಪಳ, ಗಜೇಂದ್ರಗಡ ಸ್ಥಳೀಯ ಮಾರುಕಟ್ಟೆಯಲ್ಲಿ 6 ಸಾವಿರ ಎಲೆ(225 ಪೆಂಡಿ) ಗೆ 1500 ರೂ. ಬೆಲೆ ಸಿಗುತ್ತದೆ. ಶಿವಮೊಗ್ಗ, ಬೆಂಗಳೂರು, ಬೆಳಗಾವಿ, ಮುಂಬೈನಲ್ಲಿ 2,500 ರೂ. ಬೆಲೆ ಸಿಗುವುದು ಖಾತ್ರಿಯಾಗಿದೆ. ಹೊರಗಡೆ ಮಾರುಕಟ್ಟೆಯಾದರೆ 2,500 ರೂ. ಆದಾಯವಿದ್ದರೆ ಸ್ಥಳೀಯ ಮಾರುಕಟ್ಟೆಯಲ್ಲಿ 1500 ರೂ. ಇದೆ. ಹೊರಗಡೆ ಮಾರು ಕಟ್ಟೆಯಾದರೆ 5.50 ಲಕ್ಷ ರೂ. ಆಗುತ್ತದೆ. ಇದರಲ್ಲಿ 1.50 ಲಕ್ಷ ರೂ. ಖರ್ಚು ತೆಗೆದರೂ 4 ಲಕ್ಷ ರೂ. ಆದಾಯ ಸಾಧ್ಯವಿದೆ. ತೆರೆದ ಕೃಷಿಯಲ್ಲಿ 3 ಲಕ್ಷ ರೂ.ವರೆಗೆ ಆದಾಯ ನಿರೀಕ್ಷಿಸಬಹುದಾಗಿದೆ.

ವಾರ್ಷಿಕ 18 ಲಕ್ಷ ಎಲೆ: ಪಾಲಿಹೌಸ್‌ ನಲ್ಲಿ ಬಿದಿರು ಕೋಲಿಗೆ ವೀಳ್ಯದೆಲೆಯ ಬಳ್ಳಿ ಹಬ್ಬಿಸಲಾಗಿದ್ದು, ಆಧಾರಕ್ಕೆ ಗಿಡ ಬೆಳೆಸಿಲ್ಲ. ಪ್ರತಿ ಬಳ್ಳಿಗೆ 1500 ವೀಳ್ಯದೆಲೆ ನಿರೀಕ್ಷಿಸಬಹುದಾಗಿದೆ. ಒಮ್ಮೆ ನಾಟಿ ಮಾಡಿದರೆ ಕನಿಷ್ಟ 40 ವರ್ಷ ಅದಕ್ಕಿಂತ ಹೆಚ್ಚು ಇಳುವರಿ ಬರುತ್ತದೆ. 10 ಗುಂಟೆಯಲ್ಲಿ 1 ಸಾವಿರ ಬಳ್ಳಿಗಳಿಂದ ವರ್ಷಕ್ಕೆ 18 ಲಕ್ಷ ಎಲೆ ನಿರೀಕ್ಷಿಸಬಹುದಾಗಿದೆ. ಪೆಂಡಿ (ಬಂಡಲ್‌) ಲೆಕ್ಕದಲ್ಲಿ 3ಸಾವಿರ ಪೆಂಡಿಯಂತಾದರೆ ಹೆಚ್ಚು ಕಡಿಮೆ 600 ಪೆಂಡಿ ಬರುತ್ತದೆ 1 ಪೆಂಡಿಗೆ 850 ರೂ.ದಿಂದ 1500 ರೂ. ದರ ಇದೆ. ಚಳಗಾಲ, ಬೇಸಿಗೆಯಲ್ಲಿ 1500 ರೂ. ಮಳೆಗಾಲದಲ್ಲಿ 850 ಬೆಲೆ ಇರುತ್ತದೆ. ಪಾಲಿಹೌಸ್‌ ನಲ್ಲಿ ಬೆಳೆದ ವೀಳ್ಯದೆಲೆ ಗುಣಮಟ್ಟ, ಶೈನಿಂಗ್‌, ಎಲೆಗಳ ಗಾತ್ರ ತೆರೆದ ಕೃಷಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ನಿಡಶೇಸಿ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ವಿನಾಯಕರಡ್ಡಿ ಬಿ. ಮಾಲಿಪಾಟೀಲ.

ಸಹಾಯಕ ಅಧಿಕಾರಿಗಳಾದ ಆಂಜನೇಯ ದಾಸರ್‌, ಶಿವಪ್ಪ ಶಾಂತಗೇರಿ, ಪ್ರಗತಿಪರ ಎಲೆಬಳ್ಳಿ ಕೃಷಿಕ ನಿಂಗಪ್ಪ ಕಾರಿ, ಪ್ರಗತಿಪರ ಬೆಳೆಗಾರ ರಮೇಶ ಕೊನೆಸಾಗರ ಹಾಜರಿದ್ದರು.

ಸಂಪೂರ್ಣ ಸಾವಯವ ಕೃಷಿ ಆಧಾರಿತ ಬೆಳೆಯಾಗಿದ್ದು, ಯಾವುದೇ ರಾಸಾಯನಿಕ ಸೋಕಿಸುವಂತಿಲ್ಲ. ಈ ಪಾಲಿಹೌಸ್‌ನ ಬೆಳೆಗೆ ಸೆಗಣಿ ಗೊಬ್ಬರ ಹಾಗೂ ಪ್ರಾಯೋಗಿಕವಾಗಿ ಎರೆ ಜಲ ಬಳಸಿರುವುದು ಎಲೆಗಳು ಉತ್ಕೃಷ್ಟವಾಗಿವೆ. ಮುಂದಿನ ಹಂತದಲ್ಲಿ ಕಲ್ಕತ್ತಾ, ಕರಿ ಎಲೆ ಬೆಳೆಸಲಾಗುವುದು. ಪಾಲಿಹೌಸ್‌ ಗೆ ಸರ್ಕಾರದಿಂದ ಶೇ. 50 ಸಹಾಯಧನ ಲಭ್ಯವಿದೆ. –ವಿನಾಯಕರಡ್ಡಿ ಬಿ. ಮಾಲಿಪಾಟೀಲ, ಸಹಾಯಕ ನಿರ್ದೇಶಕರು, ಇಸ್ರೇಲ್‌ ಮಾದರಿ ತೋಟಗಾರಿಕೆ ಕ್ಷೇತ್ರ ನಿಡಶೇಸಿ.

„ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ

Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.