Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!

ಪತಿಯನ್ನು ಕಳೆದುಕೊಂಡಿದ್ದ ಮೂರು ಮಕ್ಕಳ ತಾಯಿಯಿಂದ ಕೃತ್ಯ!... ಪ್ರಕರಣ ಬೇಧಿಸಿದ ಕುಷ್ಟಗಿ ಪೊಲೀಸರು

Team Udayavani, Oct 7, 2024, 9:21 PM IST

1-reee

ಕುಷ್ಟಗಿ: ತಾಲೂಕಿನ ಹಿರೇಮನ್ನಾಪೂರ ಗ್ರಾಮದ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ತಿರುವುದು ಸಿಕ್ಕಿದೆ. ಇನ್ಸ್ಟಾಗ್ರಾಮ್ ನಿಂದ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಈ ಪ್ರಕರಣದಲ್ಲಿ ಮಹಿಳೆ, ಹಾಲಿ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ತ್ರಿಶಂಕು ಸ್ಥಿತಿಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕುಷ್ಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಗಳಖೋಡ್ ಗ್ರಾಮದ ಮಹಿಳೆ ಭಾಗ್ಯಶ್ರೀ ಹನಮಂತ ಢೋಣಿ ಹಾಗೂ ಆಕೆಯ ಹಾಲಿ ಪ್ರಿಯಕರ ಇಬ್ರಾಹಿಂಸಾಬ್ ದರಸಾಬ್ ಎಲಿಗಾರ ಕೊಲೆ ಆರೋಪಿಗಳು. ಪತಿಯನ್ನು ಕಳೆದುಕೊಂಡಿದ್ದ ಭಾಗ್ಯಶ್ರೀಗೆ ಮೂರು ಮಕ್ಕಳಿದ್ದು, ಸಾಮಾಜಿಕ ಜಾಲತಾಣದ ಮೂಲಕ ಹಿರೇಮನ್ನಾಪೂರ ಯುವಕ ಶರಣಪ್ಪ ಶಿವಪ್ಪ ಮಸ್ಕಿ ಪರಿಚಯವಾಗಿತ್ತು.

ಶರಣಪ್ಪ ಮಸ್ಕಿ ತನಗೆ ಪ್ರತಿ ದಿನ 6 ಸಾವಿರ ಆದಾಯವಿದೆ ಎಂದು ಯಾಮಾರಿಸಿ, ಭಾಗ್ಯಶ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಶರಣಪ್ಪ ಮಸ್ಕಿ ಕೂಲಿ ಕಾರ್ಮಿಕ ಎನ್ನುವ ನಿಜಸ್ಥಿತಿ ಗೊತ್ತಾಗಿ ದೂರವಿದ್ದಾಗ್ಯೂ ಶರಣಪ್ಪ ಮಸ್ಕಿ, ಭಾಗ್ಯಶ್ರೀ ಜತೆಗಿನ ಚಿತ್ರಗಳನ್ನು ಎಡಿಟ್ ಮಾಡಿ ಮಾರ್ಫಿಂಗ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಡುತ್ತಿದ್ದ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಭಾಗ್ಯ ಶ್ರೀ, ಶರಣಪ್ಪ ಮಸ್ಕಿಗೆ ಎಚ್ಚರಿಕೆ ನೀಡಿದರೂ ಮಾತು ಕೇಳಿರಲಿಲ್ಲ. ಇದನ್ನು ಸಹಿಸದ ಭಾಗ್ಯಶ್ರೀ ಒಮ್ಮೆ ಹಿರೇಮನ್ನಾಪೂರಕ್ಕೆ ಬಂದು ಮೊಬೈಲ್ ಕಸಿದುಕೊಂಡು ಹೋಗಿದ್ದರೂ, ಶರಣಪ್ಪ ಮಸ್ಕಿ ಹಳೆ ಚಾಳಿ ಮುಂದುವರೆಸಿದ್ದ. ಭಾಗ್ಯಶ್ರೀ ಹಾಲಿ ಪ್ರಿಯಕರ ಇಬ್ರಾಹಿಂಸಾಬ್ ಎಲಿಗಾರನೊಂದಿಗೆ ಸೆ.29ರಂದು ಮುಗಳಖೋಡ್ ನಿಂದ ಬೈಕಿನಲ್ಲಿ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರಕ್ಕೆ ಬಂದು, ಶರಣಪ್ಪ ಮಸ್ಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಾಕ್ಷಿ ನಾಶಕ್ಕೆ ಹಾಸಿಗೆಯಲ್ಲಿ ಸುತ್ತಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ತ್ರಿಶಂಕು ಸ್ಥಿತಿಯ ಈ ಕೊಲೆ ಪ್ರಕರಣವನ್ನು ಕುಷ್ಟಗಿ ಪೊಲೀಸರು ಬೇಧಿಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೊಲೆಗೈದ ಇಬ್ಬರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ ಆರ್., ಡಿವೈಎಸ್ಪಿ ಸಿದ್ಲಿಂಗಪ್ಪಗೌಡ ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಹನಮಂತಪ್ಪ ತಳವಾರ, ಎಎಸೈ ದುರಗಪ್ಪ ಹಿರೇಮನಿ, ಸಿಬ್ಬಂದಿಗಳಾದ ಅಮರೇಶ, ಶ್ರೀಧರ, ಪ್ರಶಾಂತ, ಸಂಗಮೇಶ, ಪರಶುರಾಮ್, ಪ್ರಸಾದ್, ಮಂಜುನಾಥ ನೇತೃತ್ವದ ವಿಶೇಷ ತಂಡಕ್ಕೆ ಕೊಪ್ಪಳ ಜಿಲ್ಲಾ ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಅವರು, ಬಹುಮಾನ ಘೋಷಿಸಿದ್ದಾರೆ.

ಕೊಲೆಯಾದ ಯುವಕ ಶರಣಪ್ಪ ಮಸ್ಕಿ

ಟಾಪ್ ನ್ಯೂಸ್

1-dd-abbb

Dipa Karmakar; 31 ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಜಿಮ್ನಾಸ್ಟ್

HKRDB ಯಲ್ಲಿ 30 ಕೋಟಿ ಕಾಮಗಾರಿ ಹೆಬಿಟೆಟ್ಗೆ, ಶಾಸಕರಿಂದ 40 ಪರ್ಸೆಂಟ್ ಕಮಿಷನ್ ಆರೋಪ

Grant Fight: ರಾಜ್ಯ ಸರಕಾರದ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಭೀಮಾನಾಯ್ಕ್‌

1-reee

Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!

Vijayapura-jameer

Vijayapura: ಮಿಸ್ಟರ್ ಯತ್ನಾಳ್‌, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ: ಸಚಿವ ಜಮೀರ್

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

mutalik (2)

Israel ಮಾದರಿಯಲ್ಲಿ ಹೊರ ಮತ್ತು ಆಂತರಿಕ ಶತ್ರುಗಳ ವಿರುದ್ಧ ಹೋರಾಡಬೇಕು : ಮುತಾಲಿಕ್

Veerashaiva Lingayat Mahasabha’s opposition to caste census: Shamanur Shivshankarappa

Davanagere: ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾದ ವಿರೋಧ: ಶಾಮನೂರು ಶಿವಶಂಕರಪ್ಪ

Hubli: Cricketer KL Rahul helped poor talent

Hubli: ಬಡ ಪ್ರತಿಭೆಗೆ ನೆರವಾದ ಕ್ರಿಕೆಟಿಗ ಕೆ.ಎಲ್.ರಾಹುಲ್

Mangaluru CCB team seized huge quantity of drugs; Siberian citizen arrested

Mangaluru: ಬೃಹತ್‌ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Bramavara: ಪೊಲೀಸರಿಗೆ ತಿಳಿಸದೆ ಅಂತ್ಯಕ್ರಿಯೆ; ದೂರು ದಾಖಲು

10

Udupi: ರಸ್ತೆಯಲ್ಲಿ ತೈಲ ಸೋರಿಕೆ; ದ್ವಿಚಕ್ರ ವಾಹನಗಳು ಪಲ್ಟಿ

1-dd-abbb

Dipa Karmakar; 31 ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಜಿಮ್ನಾಸ್ಟ್

HKRDB ಯಲ್ಲಿ 30 ಕೋಟಿ ಕಾಮಗಾರಿ ಹೆಬಿಟೆಟ್ಗೆ, ಶಾಸಕರಿಂದ 40 ಪರ್ಸೆಂಟ್ ಕಮಿಷನ್ ಆರೋಪ

Grant Fight: ರಾಜ್ಯ ಸರಕಾರದ ಅನುದಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಕಾರ್ಯ: ಭೀಮಾನಾಯ್ಕ್‌

1-reee

Black-mail; ಮಾಜಿ ಪ್ರಿಯಕರನ ಕೊ*ಲೆಗೆ ಪ್ರೇಯಸಿಗೆ ಸಾಥ್ ನೀಡಿದ ಹಾಲಿ ಪ್ರಿಯಕರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.