
ಕಡಲೆಗೆ ಕೀಟಬಾಧೆ: ನಿಯಂತ್ರಣಕ್ಕೆ ಹರಸಾಹಸ
ಪ್ರತಿ ಲೀಟರ್ನಂತೆ ಸಿಂಪಡಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ತಿಳಿಸುತ್ತಾರೆ.
Team Udayavani, Nov 6, 2021, 2:20 PM IST

ಕುಷ್ಟಗಿ: ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಹಸಿರು ಕೀಟಬಾಧೆ ಕಾಣಿಸಿಕೊಂಡಿದೆ. ಈ ಕೀಡಿ ಕಾಟ ನಿಯಂತ್ರಣಕ್ಕಾಗಿ ರೈತರು ಹಲವು ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ. ಪ್ರತಿ ವರ್ಷ ಕಡಲೆ ಮೊಗ್ಗು ಬಿಡುವ ಹಂತದಲ್ಲಿ ಕೀಡೆ ಬಾಧೆ ಇರುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಬಿತ್ತನೆ ನಂತರದ ನಾಟಿಯಾದ ಎಳೆಯ ಬೆಳೆಗೆ ಕೀಡೆ ಮರಿಗಳು ಹೇರಳವಾಗಿವೆ. ಕಡಲೆ ಎಲೆಗಳ ಮೇಲೆ ಮೊಟ್ಟೆಗಳು ಕಾಣಿಸುತ್ತಿದ್ದು ಮೊಟ್ಟೆ ಇಟ್ಟಿರುವ ಎಲೆಗಳು ಒಣಗುತ್ತಿವೆ. ಸದ್ಯ 25-3 0 ದಿನಗಳ ಕಡಲೆ ಬೆಳೆ ಇದ್ದು, 20 ದಿನಗಳ ಬೆಳೆ ಇರುವಾಗಲೇ ಕೆಲವು ರೈತರು ಈ ಕೀಟಬಾಧೆ ಬರಲಿ, ಬಾರದಿರಲಿ ಎನ್ನುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಫೇನೋಪಾಸ್ ಔಷಧ ಸಿಂಪಡಣೆ ಮಾಡಿದ್ದಾರೆ.
ನಂತರದ ಅವಧಿ ಯಲ್ಲಿ ಬಿತ್ತನೆಯಾದ ಬೆಳೆಗೆ ಇದೀಗ ಹಸಿರು ಕೀಟ ಕಂಡು ಬಂದಿದ್ದು, ಈ ಕೀಟ ಎಲೆ ಭಾಗ ತಿನ್ನುತ್ತಿದ್ದು, ಇದರ ಹತೋಟಿಗೆ ಸಾಮೂಹಿಕವಾಗಿ ಔಷಧ ನಿಯಂತ್ರಣದ ಮೂಲಕ ಕೀಟಬಾಧೆ ನಿಯಂತ್ರಿಸುತ್ತಿದ್ದಾರೆ.
ಕಡಲೆಗೆ ಹೆಲಿಕಾರ್ಪ್ ಆರ್ಮಿಜರ್ ಎನ್ನುವ ಕೀಟದ ಹಾವಳಿ ಜೋರಾಗಿದ್ದು, ಇದು ಸಸಿ ಚಿಗುರು, ಹಸಿರೆಲೆ ತಿನ್ನುತ್ತಿದ್ದು, ಇದರ ನಿಯಂತ್ರಣಕ್ಕಾಗಿ ರೈತರು ಪ್ರಫೇನೋಫಾಸ್ ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಸಿಂಪಡಿಸುವುದರಿಂದ ನಿಯಂತ್ರಣಕ್ಕೆ ಬರಲಿದೆ. ಈ ಕೀಟಬಾಧೆ ತೀವ್ರವಾದಲ್ಲಿ ಕೋರೋಜಿನ್ 3 ಎಂ.ಎಲ್ಗೆ ಪ್ರತಿ ಲೀಟರ್ನಂತೆ ಸಿಂಪಡಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ತಿಳಿಸುತ್ತಾರೆ.
ಸಕಾಲಕ್ಕೆ ಹಿಂಗಾರು ಹಂಗಾಮಿಗೆ ರೈತರು ನಿರೀಕ್ಷಿಸಿದಂತೆ ಮಳೆಯಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಹಿಂಗಾರು ಹಂಗಾಮಿಗೆ ವಿವಿಧ ಬೆಳೆಗಳ ಒಟ್ಟು 36,600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 14 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಕಡಲೆ ಬಿತ್ತನೆಯಾಗಿದೆ. ಕಡಲೆಗೆ ಕೀಟಬಾಧೆ ಆವರಿಸುತ್ತಿದ್ದು, ರೈತರು ಸಮಗ್ರ ಕೀಟ ನಿರ್ವಹಣೆ ಪದ್ಧತಿ ಅನುಸರಿಸುವುದು ಸೂಕ್ತ. ಈ ಕೀಡಿ ಬಾಧೆ ನಿಯಂತ್ರಿಸಲು ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ತಿಪ್ಪೇಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಕುಷ್ಟ
ಕಡಲೆ ಬೆಳೆಗೆ ಔಷಧೋಪಚಾರ ಸಕಾಲಿಕವಾಗಿ ಮಾಡಿದರೆ ಮಾತ್ರ ಬೆಳೆ ನಿರೀಕ್ಷಿಸುವಂತಾಗಿದೆ. ಕಡಲೆ ಮೊಗ್ಗು, ಹೂವಾಡುವ ಹಂತದಲ್ಲಿಯೂ ಔಷಧೋಪಚಾರ ಕೈಗೊಳ್ಳಬೇಕಿದ್ದು, ಔಷಧಿ ಹಾಗೂ ಸಿಂಪಡಣೆ ಖರ್ಚು ಹೆಚ್ಚುವರಿಯಾಗುತ್ತಿದೆ.
ಶಿವಪ್ಪ ನಾಯಕವಾಡಿ, ರೈತ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ

ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.