ನಾಮಕರಣದ ವೇಳೆ ಸಿಡಿಸಿದ ಪಟಾಕಿಯಿಂದ ಚಲಿಸುತ್ತಿದ್ದ ಟ್ರ್ಯಾಕ್ಟರ್ ನಲ್ಲಿದ್ದ ಮೇವಿಗೆ ಬೆಂಕಿ
Team Udayavani, Mar 16, 2022, 2:37 PM IST
ಕುಷ್ಟಗಿ: ಮೊಮ್ಮಗನ ನಾಮಕರಣದ ಸಂಭ್ರಮದ ಹಿನ್ನೆಲೆಯಲ್ಲಿ ಸಿಡಿಸಿದ ಪಟಾಕಿ ಕಿಡಿಯಿಂದ ರೈತರೊಬ್ಬರ ಟ್ರಾಕ್ಟರ್ ನಲ್ಲಿದ್ದ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ನಡೆದಿದೆ.
ಯಲಬುರ್ಗಾ ಹಿರೇಅರಳಹಳ್ಳಿಯ ರೈತರೊಬ್ಬರು, ಲಿಂಗಸುಗೂರು ತಾಲೂಕಿನ ರಾಮತ್ನಾಳ ರೈತರಿಂದ ಖರೀದಿಸಿದ್ದ ಜೋಳದ ಸೊಪ್ಪೆಯ ಮೇವನ್ನು ಟ್ರಾಕ್ಟರ್ ಟ್ರಾಲಿಯಲ್ಲಿ ಕುಷ್ಟಗಿ ಪಟ್ಟಣದ ಮೂಲಕ ಸಾಗಣಿಕೆಯ ವೇಳೆ ಈ ಘಟನೆ ಸಂಭವಿಸಿದೆ.
ಸ್ಥಳೀಯರಾದ ಶಾಂತರಾಜ್ ಗೋಗಿ ಅವರು ತಮ್ಮ ಮೊಮ್ಮಗನ ನಾಮಕರಣದ ಸಂಭ್ರಮದ ಹಿನ್ನೆಲೆಯಲ್ಲಿ ಅವರ ಮನೆಯ ಮುಂದೆ ಪಟಾಕಿ ಹಚ್ಚಿದ್ದರು. ಹಚ್ಚಿದ ಪಟಾಕಿ ಕಿಡಿಗೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಟ್ರಾಕ್ಟರ್ ಟ್ರಾಲಿಯ ಮೇವಿಗೆ ತಗುಲಿದ್ದು ಧಗಧಗನೇ ಹೊತ್ತಿ ಉರಿಯ ತೊಡಗಿದ್ದು, ಅದೇ ವೇಳೆ ಮಾದಾಪೂರದ ರಾಜಶೇಖರ ಎಂಬುವರ ಸಮಯ ಪ್ರಜ್ಞೆ ಯಿಂದ ಕೂಡಲೇ ಬೆಂಕಿ ಹತ್ತಿದ್ದ ಮೇವನ್ನು ಕೆಳಗೆ ಉರುಳಿಸಿ ಮೇವು ಸಂಪೂರ್ಣ ಸುಡದಂತೆ ರಕ್ಷಿಸಿದ್ದಾರೆ. ನಂತರ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಇದನ್ನೂ ಓದಿ:ತುಮಕೂರು: ಲಾಡ್ಜ್ ನಲ್ಲಿ ಹೆಂಡತಿಯ ಕಾಲು ಕಡಿದ ಗಂಡ
ಆಕಸ್ಮಿಕ ಬೆಂಕಿಯಿಂದ ಮೇವು ನಷ್ಟ ಅನುಭವಿಸಿದ ರೈತನಿಗೆ ಶಾಂತರಾಜ್ ಗೋಗಿ ಅವರು, ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿಯಮಮೀರಿ ಮಹಿಳಾ ಸದಸ್ಯರ ಪತಿರಾಯರು,ಸಂಬಂಧಿಗಳು ಭಾಗಿ
Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಅದಾಲತ್ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.