![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 15, 2022, 5:48 PM IST
ಗಂಗಾವತಿ: ಭಾರತೀಯ ಸಂಸ್ಕೃತಿಯನ್ನು ಮೇಳೈಸಿದಂತೆ ಹಿಂದೂ ಮಹಾಮಂಡಳಿ ಗಣೇಶ ವಿಸರ್ಜನೆ ಕಾರ್ಯಕ್ರಮ ಗುರುವಾರ (ಸೆ.15) ಸಂಜೆ ನೆರವೇರಿತು.
ವಿಸರ್ಜನಾ ಕಾರ್ಯಕ್ರಮದಲ್ಲಿ ನಾಡಿನ ನಾನಾ ಕಡೆಯಿಂದ ಆಗಮಿಸಿದ್ದ ಜನಪದ ಕಲಾ ತಂಡಗಳು ಆಕರ್ಷಣೀಯವಾಗಿದ್ದವು.
ನಗರದ ಶ್ರೀಕೃಷ್ಣ ದೇವರಾಯ ವೃತ್ತದಿಂದ ವಿಸರ್ಜನಾ ಮೆರವಣಿಗೆ ಆರಂಭವಾಯಿತು. ಮಂಗಳೂರಿನ ಹುಲಿ ಕುಣಿತ, ಭೂತರಾಧನೆ, ಬೊಂಬೆಗಳು, ಕಾಸರಗೋಡಿನ ಕಲಾತಂಡ, ಬಂಟ್ವಾಳದ ಬೊಂಬೆಗಳ ಕುಣಿತ ಮತ್ತು ಮಹಾರಾಷ್ಟ್ರದ ಜಾಂಜ್ ಮೇಳ ವಿಸರ್ಜನಾ ಮೆರವಣಿಗೆಯ ಆಕರ್ಷಣೆಗಳಾಗಿದ್ದವು. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಸಹಸ್ರ ಸಂಖ್ಯೆಯಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ವೀಕ್ಷಿಸಿದರು. ಹೂಗಳನ್ನು ಮತ್ತು ನೀರನ್ನು ರಸ್ತೆಗೆ ಹಾಕಿ ಗಣೇಶನನ್ನು ಕಲಾತಂಡಗಳ ಮೂಲಕ ಬೀಳ್ಕೊಡಲಾಯಿತು.
ಹಿಂದೂ ಮಹಾ ಮಂಡಳಿಯ ಗಣಪತಿ ಪ್ರತಿಷ್ಠಾಪನೆಯವರು ಪ್ರತಿ ವರ್ಷ ಡಿಜೆ ಹೊರತುಪಡಿಸಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿವಿಧ ಕಲಾ ತಂಡಗಳಾದ ಕೋಲಾಟ, ಡೊಳ್ಳು ಕುಣಿತ, ತಾಷಾ, ಜಾಂಜ್ ಮೇಳ ಹಾಗೂ ಹಲಗೆ ಬೀಳದಂತಹ ವೈಶಿಷ್ಟ ತಂಡಗಳನ್ನು ಕರೆಸುತ್ತಾರೆ. ಸಮಸ್ತ ಜನರ ವೀಕ್ಷಣೆಗಾಗಿ ಹಗಲಿನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡುವ ಪದ್ಧತಿ ವೈಶಿಷ್ಟ್ಯ ಪೂರ್ಣವಾಗಿದೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.