![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 8, 2021, 8:40 AM IST
ಗಂಗಾವತಿ: ಮಸೀದಿ ಮಳಿಗೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿರುವುದರಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿಯುಂಟಾದ ಘಟನೆ ನಗರದ ಬಸ್ ನಿಲ್ದಾಣ ರಸ್ತೆಯಲ್ಲಿ ಜರುಗಿದೆ.
ಗಾಂಧಿ ನಗರಕ್ಕೆ ಹೊಂದಿಕೊಂಡಿರುವ ಜಾಗದ ಮಾಲೀಕತ್ವಕ್ಕೆ ಸಂಬಂದಿಸಿದಂತೆ ವಿವಾದ ಉಂಟಾಗಿದ್ದು, ಮಸೀದಿ ಮಳಿಗೆಗಳ ನಿರ್ಮಾಣಕ್ಕೆ ಮಾದಿಗ ಸಮಾಜದ ಮುಖಂಡರು ಆಕ್ಷೇಪವೆತ್ತಿದ್ದರು. ನಗರಸಭೆ ವಿವಾದ ಬಗೆಹರಿಯುವ ತನಕ ಕಾಮಗಾರಿ ನಡೆಸದಂತೆ ತಡೆಯಲಾಗಿತ್ತು. ಇದು ವಿವಾದ ಉಂಟಾಗಿ ಕಾಮಗಾರಿ ಸ್ಥಗಿತಗೊಂಡಿತು. ಮಸೀದಿ ಆಡಳಿತ ಮಂಡಳಿ ದಾಖಲಾತಿ ಸಮೇತ ಜಿಲ್ಲಾಡಳಿತಕ್ಕೆ ಕಾಮಗಾರಿ ಪೂರ್ಣಗೊಳಲು ಅವಕಾಶ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾನಗರಾಭಿವೃದ್ದಿ ಕೋಶ ನಿರ್ದೇಶಕರಿಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ನಿರ್ದೇಶಕ ಎಂ.ಗಂಗಪ್ಪ ಸ್ಥಳಕ್ಕೆ ಆಗಮಿಸಿ ವರದಿ ನೀಡಿದ್ದರು. ಈ ಮಧ್ಯೆ ರಾಜ್ಯ ವಕ್ಫ್ ಇಲಾಖೆ ಇದು ಸರಕಾರದ ಆಸ್ತಿ ಮಳಿಗೆ ಆದಾಯ ಶೇಕಡವಾರು ಸರಕಾರಕ್ಕೆ ಬರುವುದರಿಂದ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಲು ಸೂಚನೆ ನೀಡಿದೆ.
ದಾಖಲಾತಿ ಹಾಗೂ ಸರಕಾರ ಆದೇಶದಂತೆ ಮಳಿಗೆ ನಿರ್ಮಾಣ ಕಾಮಗಾರಿ ನಡೆಸಲು ಕೋವಿಡ್ ಮಾರ್ಗಸೂಚಿ ಅನುಸರಿಸಿ ಆರ್ ಸಿಸಿ ಹಾಕಲು ಅವಕಾಶ ನೀಡಿದೆ. ಕಾಮಗಾರಿಗೆ ಅವಕಾಶ ನೀಡಿದ ಕ್ರಮ ಖಂಡಿಸಿ ಆಕ್ಷೇಪವೆತ್ತಿದ ಗಾಂಧಿನಗರದ ಕೆಲ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು.
ಬೆಳ್ಳಿಗ್ಗೆ 6 ಗಂಟೆಯಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಗಂಗಾವತಿ ಉಪವಿಭಾಗ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರನ್ನು ಬಂದೋಬಸ್ತ್ ಗೆ ಕರೆಸಲಾಗಿತ್ತು. ಸ್ಥಳದಲ್ಲಿ ತಹಸೀಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಪೌರಾಯುಕ್ತ ಅರವಿಂದ ಜಮಖಂಡಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಕಿಡಿಗೇಡಿಗಳಿಂದ ಅಶಾಂತಿಗೆ ಯತ್ನ: ರಾಜ್ಯ ವಕ್ಫ್ ಇಲಾಖೆಯ ವ್ಯಾಪ್ತಿಯ ಆಸ್ತಿಯಲ್ಲಿ ಮಳಿಗೆ ನಿರ್ಮಿಸಲಾಗುತ್ತಿದೆ. ಕಾನೂನಿಗೆ ವಿರುದ್ದವಾಗಿದ್ದರೂ ಈ ಜಾಗದಲ್ಲಿ ಮಾದಿಗ ಸಮಾಜಕ್ಕೂ ಕಳೆದ 20 ವರ್ಷ ಗಳ ಹಿಂದೆ ಭಾಗ ನೀಡಲಾಗಿದೆ. ಈ ಮಧ್ಯೆ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಕೆಲ ದುಷ್ಟ ಶಕ್ತಿಗಳು ಈ ಜಾಗದ ಬಗ್ಗೆ ವಿವಾದವೆತ್ತಿದ್ದಾರೆ. ಗಂಗಾವತಿಯಲ್ಲಿ ಮಾದಿಗ ಸಮಾಜ ಸೇರಿ ಎಲ್ಲರೂ ಮುಸ್ಲಿಂ ಸಮಾಜದ ಜತೆಗಿದ್ದಾರೆ. ಕೆಲವರಿಂದ ಅಶಾಂತಿ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ದಾಖಲೆ ಪರಿಶೀಲಿಸಿ ಕಾಮಗಾರಿ ಅವಕಾಶ ನೀಡಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಿಳಿಸಿದ್ದಾರೆ
ದಾಖಲಾತಿ ಅನ್ವಯ ಕಾಮಗಾರಿಗೆ ಅವಕಾಶ: ಮಸೀದಿ ಮಳಿಗೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ದಾಖಲಾತಿ ಅನ್ವಯ ಪರವಾನಿಗೆ ನೀಡಿದೆ. ಕೋವಿಡ್ ಮಾರ್ಗಸೂಚಿ ಅನ್ವಯಿಸಿ ಕಾಮಗಾರಿ ನಡೆಯಬೇಕು. ಗಂಗಾವತಿ ಭಾವೈಕ್ಯ ನಗರವಾಗಿದ್ದು ಕೆಲವರು ಇದರ ಲಾಭ ಪಡೆದು ರಾಜಕೀಯ ಮಾಡಲು ಯತ್ನಿಸಿದ್ದು ಇದು ನಡೆಯುವುದಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ಉದಯವಾಣಿ ಗೆ ತಿಳಿಸಿದ್ದಾರೆ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.