ಅಂಜನಾದ್ರಿ ಬೆಟ್ಟ ಹಿಂದೂಗಳ ಸ್ವತ್ತು ಮುಸ್ಲಿಂ, ಕ್ರೈಸ್ತರ ಸ್ವತ್ತಲ್ಲ: ಎಚ್ ಆರ್ ಚನ್ನಕೇಶವ
Team Udayavani, Apr 20, 2022, 7:58 PM IST
ಗಂಗಾವತಿ: ಅಂಜನಾದ್ರಿ ಬೆಟ್ಟ ಕೇವಲ ಹಿಂದು ಧರ್ಮದ ಸ್ವತ್ತು ಮುಸ್ಲಿಂ ಹಾಗೂ ಕ್ರೈಸ್ತರ ಸ್ವತ್ತಲ್ಲ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಬಿಜೆಪಿ ಹಿರಿಯ ಮುಖಂಡ ಎಚ್ ಆರ್ ಚನ್ನಕೇಶವ ಆಗ್ರಹಿಸಿದ್ದಾರೆ.
ಶ್ರೀ ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಕೇವಲ ಹಿಂದು ಧರ್ಮದ ಸ್ವತ್ತಾಗಿದೆ. ಇದರಲ್ಲಿ ಅನ್ಯ ಮತೀಯರಿಗೆ ಯಾವುದೇ ಹಕ್ಕು ಇರಲ್ಲ. ಕೇವಲ ಅವರು ಆಂಜನೇಯನ ಭಕ್ತರಾಗಿ ದರ್ಶನ ಪಡೆಯಬೇಕು. ಅಂಜನಾದ್ರಿ ಬೆಟ್ಟ ಮುಸ್ಲಿಂಮರ ಸತ್ತು ಕ್ರೈಸ್ತರ ಸ್ವತ್ತು ಎಂದು ಮಾಜಿ ಸಚಿವ ಅನ್ಸಾರಿ ಹೇಳಿಕೆ ಖಂಡನೀಯವಾಗಿದೆ ಎಂದರು.
ಗಂಗಾವತಿ ಕ್ಷೇತ್ರದಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಲಿದೆ ಎಂಬ ವಿಡಿಯೋ ವೈರಲ್ ನಿಂದಾಗಿ ಕಾಂಗ್ರೆಸ್ ನಲ್ಲಿ ಗೊಂದಲ ಮೂಡಿತು ಅದನ್ನು ಮರೆಮಾಚಲು ಅಂಜನಾದ್ರಿ ಎಲ್ಲರಿಗೆ ಸೇರಿದ್ದು ಎಂದು ಹನುಮ ಮಾಲೆ ಯ ವೇಷ ಹಾಕಿ ಕೊಳ್ಳುವುದು ಸರಿಯಲ್ಲ . ಐತಿಹಾಸಿಕ ಅಂಜನಾದ್ರಿ ಬೆಟ್ಟ ಹಿಂದು ಧರ್ಮದ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಬಂಟ ಹನುಮಂತನ ಜನ್ಮಸ್ಥಳವಾಗಿದೆ. ಈ ಅಂಜನಾದ್ರಿ ಬೆಟ್ಟವನ್ನು ಭಾರತೀಯ ಜನತಾ ಪಕ್ಷದ ರಾಜ್ಯ ಸರಕಾರ ಅಭಿವೃದ್ಧಿ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ರೂ.100 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಮತ್ತು ಸರಕಾರ ಸರ್ವ ಭಕ್ತರಿಗೆ ಅನುಕೂಲವಾಗುವ ರೀತಿಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮತ್ತು ಅಂಜನಾದ್ರಿ ಬೆಟ್ಟ ರಾಜ್ಯ ಸರಕಾರದ ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ ಎಂಬುದು ಇಕ್ಬಾಲ್ ಅನ್ಸಾರಿ ಅರಿತುಕೊಳ್ಳಬೇಕು. ಅಂಜನೇಯ ಸಮಸ್ಥ ಹಿಂದುಗಳ ಆರಾಧ್ಯ ದೈವವಾಗಿದ್ದಾನೆ. ಪ್ರತಿಯೊಂದು ಗ್ರಾಮದಲ್ಲಿ ಹನುಮಂತನ ಸ್ಮರಣೆ ನಿತ್ಯ ನಡೆಯುತ್ತದೆ. ಇತ್ತೀಚಿಗೆ ಅಂಜನಾದ್ರಿಗೆ ನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಅಂಜನಾದ್ರಿ ಬೆಟ್ಟ ಅಧಿಕೃತವಾಗಿ ಹಿಂದು ಧರ್ಮದ ಸ್ವತ್ತಾಗಿದೆ. ಇದು ಯಾವತ್ತು ಅನ್ಯ ಧರ್ಮೀಯರ ಸ್ವತ್ತಾಗಲು ಸಾಧ್ಯವಿಲ್ಲ. ಅನ್ಯ ಧರ್ಮಿಯರು ದರ್ಶನ ಪಡೆದು, ತಮಗೆ ಇಷ್ಟವಾದ ಪೂಜೆ, ಪುನಸ್ಕಾರಗಳನ್ನು ಕೈಗೊಳ್ಳಬಹುದೇ ಹೊರತು ಅಂಜನಾದ್ರಿಯಲ್ಲಿ ಯಾವುದೇ ಅಧಿಕಾರ ಮತ್ತು ಹಕ್ಕು ಇರುವುದಿಲ್ಲ ಎಂದು ಚನ್ನಕೇಶವ ಸಲಹೆ ನೀಡಿದ್ದಾರೆ.
ಇಕ್ಬಾಲ್ ಅನ್ಸಾರಿ ತಮ್ಮ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಲ್ಲಿ ಅಂಜನಾದ್ರಿಯನ್ನು ಎಳೆದು ತರಬಾರದು. ಈಗಾಗಲೇ ರಾಜ್ಯದಲ್ಲಿ ದೇವಸ್ಥಾನ, ಪೂಜೆ ಮತ್ತು ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ಯ ಧರ್ಮಿಯರಿಗೆ ಯಾವುದೇ ಅವಕಾಶ ನೀಡಬಾರದು ಎಂದು ವಾದ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಸರ್ವ ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಎಲ್ಲರು ಸೇರಿ ಮಾಡಬೇಕು. ಆದರೆ ಅನ್ಸಾರಿ ಅವರು ಅಂಜನಾದ್ರಿ ಬೆಟ್ಟ ಮುಸ್ಲಿಂರ ಸ್ವತ್ತು ಎಂದು ಹೇಳಿಕೆ ನೀಡಿ ಕ್ಷೇತ್ರದ ಸಮಸ್ಥ ಹಿಂದುಗಳ ಭಾಗವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಅಂಜನಾದ್ರಿ ಬೆಟ್ಟ ಎಲ್ಲರ ಎಲ್ಲರ ಸ್ವತ್ತು ಎಂದು ಹೇಳುವ ಇಕ್ಬಾಲ್ ಅನ್ಸಾರಿ ಅವರು ಮುಸ್ಲಿಂ ಧರ್ಮಗಳ ಪ್ರಾಥನಾ ಮಂದಿರಗಳು ಕೂಡಾ ಹಿಂದುಗಳ ಸ್ವತ್ತಾಗಿವೆ ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿರುವ ಹೆಚ್.ಆರ್.ಚನ್ನಕೇಶವ ಅವರು ರಾಜಕಾರಣ ಮಾಡುವ ಸಂದರ್ಭದಲ್ಲಿ ಅನವಶ್ಯಕವಾಗಿ ಮಸೀದಿ, ಮಂದಿರ ಸೇರಿದಂತೆ ಯಾವುದೇ ಧರ್ಮದ ಭಾವನೆಗೆ ಮುಜುಗರ ಮೂಡಿಸುವುದು ಮತ್ತು ಧಕ್ಕೆ ತರುವಂತಹ ಹೇಳಿಕೆ ನೀಡಬಾರದು. ಅನ್ಸಾರಿ ಅವರ ಹೇಳಿಕೆ ಗಂಗಾವತಿ ಕ್ಷೇತ್ರದಲ್ಲಷ್ಟೆ ಅಲ್ಲ ರಾಜ್ಯದಲ್ಲಿ ಗಮನ ಸೇಳೆಯುವಂತಾಗಿದೆ. ತಕ್ಷಣ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ತಮ್ಮ ಕಾಂಗ್ರೆಸ್ ಪಕ್ಷದ ರಾಜಕೀಯ ತಿಕ್ಕಾಟವನ್ನು ಹಿಂದುಗಳ ಭಾವನೆಗೆ ಬಳಸಿಕೊಳ್ಳಲು ಮುಂದಾಗಿರುವುದು ಖಂಡನೀಯವಾಗಿದೆ ಎಂದು ಅನ್ಸಾರಿ ವಿರುದ್ಧ ಬಿಜೆಪಿ ಮುಖಂಡ ಚನ್ನಕೇಶವ ಟೀಕಿಸಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿಯಮಮೀರಿ ಮಹಿಳಾ ಸದಸ್ಯರ ಪತಿರಾಯರು,ಸಂಬಂಧಿಗಳು ಭಾಗಿ
Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಅದಾಲತ್ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.