![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Oct 11, 2022, 11:14 AM IST
ಕುಷ್ಟಗಿ: ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದ್ದು, ಮನೆಯಲ್ಲಿದ್ದ ಕುಟುಂಬ ಅಪಾಯದಿಂದ ಪಾರಾದ ಘಟನೆ ಟೆಂಗುಂಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಾಜಪ್ಪ ಬಾಳಪ್ಪ ಮಾದರ ಅವರ ಮನೆಯಲ್ಲಿ 10 ಜನ ವಾಸಗಿದ್ದರು. ತಡರಾತ್ರಿ ಮಳೆಯ ತೀವ್ರತೆ ಹೆಚ್ಚುತ್ತಿದ್ದಂತೆ ಮಣ್ಣು, ಕಲ್ಲು ಉದುರಿದ ಶಬ್ದಕ್ಕೆ ಹೊರಬಂದಾಗ ಮನೆಯ ಛತ್ತು ಕುಸಿದಿತ್ತು. ನಂತರ ಮನೆಯ ಗೋಡೆ ಭಾಗಶಃ ಬಿದ್ದಿದೆ.
ಈ ಹಿನ್ನೆಲೆ ರಾಜಪ್ಪ ಬಾಳಪ್ಪ ಮಾದರ ಕುಟುಂಬ ನಿರಾಶ್ರಿತರಾಗಿದ್ದು, ಗ್ರಾಮಲೆಕ್ಕಾಧಿಕಾರಿ ಹಾಗೂ ಪಿಡಿಓ ಗಮನಕ್ಕೆ ತರಲಾಗಿದೆ ಎಂದು ಯಮನೂರು ಮೇಲಿನಮನಿ ಮಾಹಿತಿ ನೀಡಿದ್ದಾರೆ.
ಕಳೆದ ಅ.9 ಹಾಗೂ 10 ರಂದು ತಾಲೂಕಿನಲ್ಲಿ 25 ಮನೆಗಳು ಕುಸಿತ:
ತಾಲೂಕಿನಲ್ಲಿ ಬಹುತೇಕ ಮನೆಗಳು ಮಣ್ಣಿನ ಮನೆಗಳಾಗಿವೆ. ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಕಾರಣ ಕಳೆದ ಸೆಪ್ಟಂಬರ್ 30 ರವರೆಗೂ ಒಟ್ಟು 183 ಮನೆಗಳು ಬಿದ್ದಿದೆ. ಈ ಎಲ್ಲಾ ಮನೆಗಳ ಫಲಾನುಭವಿಗಳಿಗೂ ಪರಿಹಾರವನ್ನು ಪ್ರತಿಯೊಬ್ಬರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಹಶೀಲ್ದಾರ್ ಗುರುರಾಜ್ ಚಲವಾದಿ ಮಾಹಿತಿ ನೀಡಿದ್ದಾರೆ.
ತಡರಾತ್ರಿ ತಾವರಗೇರಾ, ಕಿಲ್ಲಾರಹಟ್ಟಿಯಲ್ಲಿ ಹೆಚ್ಚು ಮಳೆಯಾಗಿದೆ. ತಾವರಗೇರಾದಲ್ಲಿ 84 ಮೀ.ಮೀ. ಕಿಲ್ಲಾರಹಟ್ಟಿಯಲ್ಲಿ 79 ಮೀ.ಮೀ. ಅಧಿಕ ಮಳೆ ಬಿದ್ದಿದ್ದು, ಉಳಿದೆಡೆ ಸಾಧರಣ ಮಳೆಯಾಗಿದೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.