![UDP-DC](https://www.udayavani.com/wp-content/uploads/2024/12/UDP-DC-415x249.jpg)
ಕಲಿತ ಶಾಲೆಗೆ ಸ್ಮಾಟ್ ಕ್ಲಾಸ್ ಉಪಕರಣ ವಿತರಿಸಿದ ಐಟಿ ಉದ್ಯೋಗಿ
Team Udayavani, Jan 4, 2022, 4:24 PM IST
![ಕಲಿತ ಶಾಲೆಗೆ ಸ್ಮಾಟ್ ಕ್ಲಾಸ್ ಉಪಕರಣ ವಿತರಿಸಿದ ಐಟಿ ಉದ್ಯೋಗಿ](https://www.udayavani.com/wp-content/uploads/2022/01/0301-hsn-p-1-0301bg-2-12-620x372.jpg)
ಗಂಗಾವತಿ: ಅಕ್ಷರ ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು ಎಂದಿಗೂ ಮರೆಯದಂತೆ ಬಹುತೇಕರು ಉಪದೇಶ ನೀಡುವುದು ರೂಢಿಯಾಗಿದೆ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ವಿರೇಶ ಮುಕ್ಕುಂದಿಯವರು ತಮ್ಮ ಮದುವೆಯಲ್ಲಿ ಗೆಳೆಯರು ಬಂಧುಗಳಿಂದ ಸ್ವೀಕರಿಸಿದ ಹಣ ಮತ್ತು ವೈಯಕ್ತಿಕ ಹಣ ಸೇರಿಸಿ ತಾವು ಕಲಿತ ಶಾಲೆಯ ವಿದ್ಯಾರ್ಥಿಳಿಗೆ ಅನುಕೂಲವಾಗಲೆಂದು ಸ್ಮಾಟ್ ಕ್ಲಾಸ್ ಡಿಜಿಟಲ್ ಬೋರ್ಡ್ ಹಾಗೂ ಇತರೆ ಉಪಕರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಐಟಿ ಉದ್ಯೋಗಿ ವಿರೇಶ ಮುಕ್ಕುಂದಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕ ಶಿಕ್ಷಕಿಯರಿರುತ್ತಾರೆ. ಅವರಿಗೆ ವೈಜ್ಞಾನಿಕವಾಗಿ ಕಲಿಸಲು ಸ್ಮಾಟ್ ಕ್ಲಾಸ್ ಇದ್ದರೆ ವಿದ್ಯಾರ್ಥಿಗಳು ಬದಲಾದ ಕಾಲಕ್ಕೆ ತಕ್ಕಂತೆ ವಿಷಯಗಳನ್ನು ಕಲಿಯಲು ಅನುಕೂಲವಾಗುತ್ತದೆ. ಶಾಲೆಗಳಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ಉಪಕರಣ ಹಾಗೂ ಕಾಲಕಾಲಕ್ಕೆ ಬೋಧಕ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಸ್ಪರ್ಧೆ ಮಾಡಲು ಸಿದ್ಧಗೊಳಿಸಬೇಕು. ಪ್ರಾಥಮಿಕ ಹಂತದಿAದಲೇ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾಯನ್ನು ಕಲಿಸಬೇಕು. ಸರಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವವರು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಲು ನೆರವಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ವಿರೇಶ ಮುಕ್ಕುಂದಿಯವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕರಿದ್ದರು.
ಟಾಪ್ ನ್ಯೂಸ್
![UDP-DC](https://www.udayavani.com/wp-content/uploads/2024/12/UDP-DC-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![3-gangavathi](https://www.udayavani.com/wp-content/uploads/2024/12/3-gangavathi-1-150x90.jpg)
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
![2-koppala](https://www.udayavani.com/wp-content/uploads/2024/12/2-koppala-150x90.jpg)
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
![ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ](https://www.udayavani.com/wp-content/uploads/2024/12/Hanumamala-150x106.jpg)
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
![5-govt-office](https://www.udayavani.com/wp-content/uploads/2024/12/5-govt-office-150x90.jpg)
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
![1-gangavathi](https://www.udayavani.com/wp-content/uploads/2024/12/1-gangavathi-150x90.jpg)
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.