![4-holiday](https://www.udayavani.com/wp-content/uploads/2024/06/4-holiday-415x249.jpg)
ಕನಕಗಿರಿ: ಮಾತು ಬಾರದ ಸಹೋದರಿಯರಿಗೆ ನರೇಗಾ ಆಸರೆ
Team Udayavani, Jun 1, 2024, 6:00 PM IST
![ಕನಕಗಿರಿ: ಮಾತು ಬಾರದ ಸಹೋದರಿಯರಿಗೆ ನರೇಗಾ ಆಸರೆ](https://www.udayavani.com/wp-content/uploads/2024/06/Kanaka-620x385.jpg)
ಉದಯವಾಣಿ ಸಮಾಚಾರ
ಕನಕಗಿರಿ: ಕೇಂದ್ರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆ ಕೇವಲ ಯುವಕರು, ವಯಸ್ಕರು, ವೃದ್ಧರಿಗಷ್ಟೇ ಅಲ್ಲ
ವಿಶೇಷಚೇತನರಿಗೂ ಆಸರೆಯಾಗಿದೆ. ತಾಲೂಕಿನಲ್ಲಿ ಸಾಕಷ್ಟು ವಿಶೇಷ ಚೇತನರು ನರೇಗಾ ಯೋಜನೆಯಡಿ ತಮ್ಮ ಬದುಕನ್ನೇ
ಕಟ್ಟಿಕೊಂಡಿದ್ದಾರೆ. ಇದ್ದೂರಲ್ಲೇ ಕೆಲಸ ಮಾಡುವ ಮೂಲಕ ಎಲ್ಲೂ ಗುಳೆ ಹೋಗದೇ ತಮ್ಮ ಜೀವನಮಟ್ಟ ಸರಿದೂಗಿಸಿಕೊಂಡಿದ್ದಾರೆ. ತಾಲೂಕಿನ ಕರಡೋಣ ಗ್ರಾಪಂ ವ್ಯಾಪ್ತಿಯ ಬುನ್ನಟ್ಟಿ ಗ್ರಾಮದ ಅಂಬ್ರಮ್ಮ, ಶಂಕ್ರಮ್ಮ, ಹಾಲಮ್ಮ ಈ ಮೂವರು ಸಹೋದರಿಯರೇ ಸಾಕ್ಷಿಯಾಗಿದ್ದಾರೆ.
ಈ ಮೂವರು ಬಾಯಿ ಇಲ್ಲದ ಸಹೋದರಿಯರು. ಹುಟ್ಟಿನಿಂದಲೇ ಇವರಿಗೆ ಮಾತು ಬರುತ್ತಿಲ್ಲ. ಅಲ್ಲದೇ ಮೂವರು ಸಹೋದರಿಯರಿಗೂ ಮದುವೆಯಾಗಿದ್ದು, ಅದರಲ್ಲಿ ಇಬ್ಬರ ಗಂಡಂದಿರು ಮೃತಪಟ್ಟಿದ್ದು, ತಮ್ಮ ಸಹೋದರನ ಬಳಿ ಇದ್ದಾರೆ. ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನರೇಗಾ ಯೋಜನೆಯಡಿ ಕೆಲಸ ಮಾಡುತ್ತ ಬಂದಿದ್ದಾರೆ.
ಗ್ರಾಮದಲ್ಲಿ ನಾಲಾ, ಕೆರೆ ಹೂಳೆತ್ತುವ ಕೆಲಸಕ್ಕೆ ತೆರಳುವ ಇವರು ಪ್ರತಿ ವರ್ಷ 80ಕ್ಕೂ ಹೆಚ್ಚು ಮಾನವ ದಿನಗಳನ್ನು ಪೂರೈಸಿದ್ದಾರೆ. ಇನ್ನು ಇಬ್ಬರು ಸಹೋದರಿಯರಿಗೆ ಮಕ್ಕಳಿದ್ದು, ಶಾಲೆಗೆ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿಯಡಿ ದುಡಿದ ದುಡ್ಡು ಮಕ್ಕಳ ಓದಿಗೆ ಅನುಕೂಲವಾಗಿದೆ ಎಂದು ಕೈಸನ್ನೆ ಮೂಲಕ ಖುಷಿ ವ್ಯಕ್ತಪಡಿಸುತ್ತಾರೆ.
ವಿಶೇಷಚೇತನರು ಸಮಾಜದ ಅವಿಭಾಜ್ಯ. ಅವರಿಗೆ ಮಾತಿನ ಅನುಕಂಪ ತೋರಿಸುವ ಬದಲು ಅವರು ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಅ ನಿಟ್ಟಿನಲ್ಲಿ ನಮ್ಮ ನರೇಗಾ ಯೋಜನೆ ಸಹಕಾರಿ ಯಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಅಂಗ ವೈಕಲ್ಯವುಳ್ಳವರಿಗೆ, ಹಿರಿಯ ನಾಗರಿಕರಿಗೆ ನರೇಗಾದಡಿ ಕೆಲಸ ನೀಡಲಾಗಿದೆ.
ನಾಗಲಿಂಗಪ್ಪ, ಗ್ರಾಪಂ ಪಿಡಿಒ,
ಕರಡೋಣ.
ಬೇಸಿಗೆಯಲ್ಲಿ ಗುಳೆ ತಡೆಯುವ ಉದ್ದೇಶದಿಂದ ತಾಲೂಕಿನಾದ್ಯಂತ ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಆರಂಭಿಸಿದ್ದು, ವಿಶೇಷ ಚೇತನರು, ತೃತೀಯ ಲಿಂಗಿಗಳು ಸೇರಿದಂತೆ ಎಲ್ಲರಿಗೂ ಕೆಲಸ ಒದಗಿಸಲಾಗುತ್ತಿದೆ.
ಎಲ್.ವೀರೇಂದ್ರಕುಮಾರ್,
ಇಒ ತಾಪಂ ಕನಕಗಿರಿ
■ ಶ್ರೀನಿವಾಸ ಪೂಜಾರ
ಟಾಪ್ ನ್ಯೂಸ್
![4-holiday](https://www.udayavani.com/wp-content/uploads/2024/06/4-holiday-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಕಾರಟಗಿ: ಗುಡಿಗಾಗಿ ಅನಧಿಕೃತ ಗುಡಿಸಲು ತೆರವು ಕಾರ್ಯಾಚರಣೆ](https://www.udayavani.com/wp-content/uploads/2024/06/Gudi-150x67.jpg)
ಕಾರಟಗಿ: ಗುಡಿಗಾಗಿ ಅನಧಿಕೃತ ಗುಡಿಸಲು ತೆರವು ಕಾರ್ಯಾಚರಣೆ
![ಕನ್ಯೆ ಹುಡುಕಿ ಕೊಡಿ ಸರ್… ಜನಸ್ಪಂದನ ಕಾರ್ಯಕ್ರಮದಲ್ಲೇ ಜಿಲ್ಲಾಧಿಕಾರಿ ಬಳಿ ಯುವಕನ ಮನವಿ](https://www.udayavani.com/wp-content/uploads/2024/06/kanakagiri-150x84.jpg)
ಕನ್ಯೆ ಹುಡುಕಿ ಕೊಡಿ ಸರ್… ಜನಸ್ಪಂದನ ಕಾರ್ಯಕ್ರಮದಲ್ಲೇ ಜಿಲ್ಲಾಧಿಕಾರಿ ಬಳಿ ಯುವಕನ ಮನವಿ
![1-qweqewqe](https://www.udayavani.com/wp-content/uploads/2024/06/1-qweqewqe-150x96.jpg)
Anegundi; ಕೆಂಪೇಗೌಡರನ್ನು ಬಂಧನದಲ್ಲಿಟ್ಟಿದ್ದ ಆನೆಗೊಂದಿ ಸೆರೆಮನೆ ಪತ್ತೆ
![1-kushtagi](https://www.udayavani.com/wp-content/uploads/2024/06/1-kushtagi-150x90.jpg)
Kushtagi: ವಿದ್ಯುತ್ ಪ್ರವಹಿಸಿದ ಸ್ಟಾರ್ಟರ್ ಬಟನ್ ಸ್ಪರ್ಶಿಸಿ ರೈತ ದುರ್ಮರಣ
![Minister Shivraj Thangadagi deeply mourns the demise of Dr. Kamala Hampana](https://www.udayavani.com/wp-content/uploads/2024/06/Dr.-Kamala-Hampana-150x83.jpg)
ಡಾ.ಕಮಲಾ ಹಂಪನಾ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ
MUST WATCH
ಹೊಸ ಸೇರ್ಪಡೆ
![4-holiday](https://www.udayavani.com/wp-content/uploads/2024/06/4-holiday-150x90.jpg)
Holiday: ಮೂಡಿಗೆರೆ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
![3-Haveri](https://www.udayavani.com/wp-content/uploads/2024/06/3-Haveri-150x90.jpg)
Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು
![2-manipal](https://www.udayavani.com/wp-content/uploads/2024/06/2-manipal-150x90.jpg)
Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ
![1-24-friday](https://www.udayavani.com/wp-content/uploads/2024/06/1-24-friday-3-150x90.jpg)
Daily Horosocpe: ಯಶಸ್ಸಿನ ಅನುಭವ, ಷೇರು ವ್ಯವಹಾರದಲ್ಲಿ ಉತ್ತಮ ಲಾಭ
![Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರಾಟೆ](https://www.udayavani.com/wp-content/uploads/2024/06/28-3-150x90.jpg)
Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.