‌ಕನ್ನಡ ನಾಡು ನುಡಿಯ ಜಾಗೃತಿಗಾಗಿ ವೀರಣ್ಣ ಕುಂದರಗಿಮಠ ಅವರಿಂದ ಹ್ಯಾಂಡಲ್ ಇಲ್ಲದ ಬೈಕಿನಲ್ಲಿ ‌360 ಕಿ.ಮೀ ಸಂಚಾರ.!


Team Udayavani, Jan 3, 2023, 2:42 PM IST

‌ಕನ್ನಡ ನಾಡು ನುಡಿಯ ಜಾಗೃತಿಗಾಗಿ ವೀರಣ್ಣ ಕುಂದರಗಿಮಠ ಅವರಿಂದ ಹ್ಯಾಂಡಲ್ ಇಲ್ಲದ ಬೈಕಿನಲ್ಲಿ ‌360 ಕಿ.ಮೀ ಸಂಚಾರ.!

ಕುಷ್ಟಗಿ: ಜ.6 ರಿಂದ ಜರಗುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಇಲಕಲ್ ಬೈಕ್ ಸಾಹಸಿ ವೀರಣ್ಣ ಕುಂದರಗಿಮಠ ಅವರು, ಕನ್ನಡ ನಾಡು ನುಡಿ ಜಾಗೃತಿಗಾಗಿ ಮತ್ತೊಮ್ಮೆ ಬೈಕ್ ಸಾಹಸಕ್ಕೆ ಮುಂದಾಗಿದ್ದಾರೆ.

ಹ್ಯಾಂಡಲ್ ಇಲ್ಲದ ಬೈಕಿನಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನನದಿಂದ ಹಾವೇರಿಗೆ 360 ಕಿ.ಮೀ. ಬೈಕ್ ಸಾಹಸ  ಹಮ್ಮಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 7-30 ಕ್ಕೆ ಬೈಕ್ ಸಾಹಸ ಆರಂಭಿಸಿರುವ ಅವರು, ಭಾಗಲಕೋಟೆ, ಶಿರೂರು, ಕಮತಗಿ, ಅಮೀನಗಡ, ರಕ್ಕಸಗಿ, ಹುನಗುಂದ ತನ್ನ ತವರು ಇಲಕಲ್, ಕೊಡಗಲಿ, ಕ್ಯಾದಿಗುಪ್ಪ, ಕುಷ್ಟಗಿ, ಬಂಡಿಕ್ರಾಸ್, ಗಜೇಂದ್ರಗಡ, ನೆರೆಗಲ್ ಬೆಟಗೇರಿ, ಗದಗ, ಹುಬ್ಬಳ್ಳಿ, (ಚನ್ನಮ್ಮ ಸರ್ಕಲ್, ಬಂಕಾಪುರ ಚೌಕ್, ಗಬ್ಬೂರ ಬೈಪಾಸ್ ಬಸವೇಶ್ವರ ಸರ್ಕಲ್ ಪಿ ಬಿ, ರೋಡ್ ಹೈವೇ ಮುಖಾಂತರ ) ಶಿಗ್ಗಾವಿ, ಹಾನಗಲ್, ಹಾವೇರಿ ವರೆಗೆ  ಬಸ್ ಸ್ಟ್ಯಾಂಡ್ ರೋಡ್ ಆರ್, ಟಿ,ಓ ಕಚೇರಿ ಮುಖಾಂತರ  ಅಜ್ಜಯ್ಯನ ದೇವಸ್ಥಾನದ ಎದುರಿನ ಸ್ಥಳದಲ್ಲಿ ಜನೆವರಿ 6,7,8 ರಂದು ನೆಡೆಯುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ‌ ಸ್ಥಳದವರೆಗೂ ಸಂಚರಿಸುವರು.

ಮಂಗಳವಾರ  ಇಲಕಲ್ ಮೂಲಕ  12ಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬೈಕ್ ಸಾಹಸ ಕುಷ್ಟಗಿ ಕಸಾಪದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಈ ಹಿಂದೆ ವೀರಣ್ಣ ಕುಂದರಗಿಮಠ ಅವರು, 2014ರಲ್ಲಿ ಕೈ ಕಾಲು ಕಟ್ಟಿಕೊಂಡು ಕಾರ ಓಡಿಸಿದ್ದರು.  ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಬೆಂಗಳೂರು -ವಿದಾನಸೌಧ  – ದೆಹಲಿ ವರೆಗೆ ಒಟ್ಟು  1365 ಕಿ.ಮೀ  48 ಗಂಟೆಗಲ್ಲಿ‌ ಕ್ರಮಿಸಿದ್ದರು.  2015ರಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಬೆಂಗಳೂರು ವಿಧಾನಸೌದವರೆಗೆ ಹ್ಯಾಂಡಲ್ ಇಲ್ಲದ ಬೈಕ್  500 ಕಿ.ಮಿ ಓಡಿಸಿದ್ದರು.

ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕ ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ದಾರವಾಡವರೆಗೆ ಇದೀಗ ಏಲಕ್ಕಿ ನಾಡು ಹಾವೇರಿಯ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿ ಜಾಗೃತಿಗಾಗಿ ಈ ಸಾಹಸಕ್ಕೆ ವೀರಣ್ಣ ಕುಂದರಗಿಮಠ ಮುಂದಾಗಿದ್ದಾರೆ.

ಈ‌‌ ಬೈಕನ್ನು ತಾಳ್ಮೆ, ತಾಂತ್ರಿಕ, ಬ್ಯಾಲೆನ್ಸ್ ಮೂಲಕ ಚಲಾಯಿಸುತ್ತಿರುವೆ ಎಂದ ಅವರು, ವಿಜಯಪುರ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲವಾಗಿರುವುದು ದುಃಖಕರ ಸಂಗತಿಯಾಗಿದ್ದು ಅವರ ಸ್ಮರಣೆಗಾಗಿ ನಿರಹಾರವಾಗಿ ಬೈಕ್ಚಲಾಯಿಸುತ್ತಿರುವೆ ಎಂದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.