Koppala: ಗಣೇಶ ಹಬ್ಬ ಆಚರಣೆ ಹಿನ್ನೆಲೆ: ಗಂಗಾವತಿಯಲ್ಲಿ ಮೂವರು ರೌಡಿಗಳ ಗಡಿಪಾರು


Team Udayavani, Sep 5, 2024, 9:18 AM IST

Koppala: ಗಣೇಶ ಹಬ್ಬ ಆಚರಣೆ ಹಿನ್ನೆಲೆ: ಗಂಗಾವತಿಯ ಮೂರು ರೌಡಿಗಳ ಗಡಿಪಾರು

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೂವರು ರೌಡಿಶೀಟರ್ ಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಿ ಎಸಿ ಆದೇಶ ಹೊರಡಿಸಿದ್ದಾರೆ.

ಗಂಗಾವತಿ ನಗರದಲ್ಲಿ ಸೆ.07 ರಿಂದ ಗೌರಿ ಗಣೇಶ ಹಬ್ಬ ಹಾಗೂ ಸೆ. 16 ರಂದು ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಗಂಗಾವತಿ ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿವೆ. ಗಂಗಾವತಿ ನಗರವು ಮತೀಯವಾಗಿ ಸೂಕ್ಷ್ಮ ನಗರವಾಗಿದೆ. ಸಣ್ಣ – ಪುಟ್ಟ ಗಲಾಟೆ ದೊಡ್ಡದಾಗಿ ಕೋಮು ಗಲಭೆ ಸ್ವರೂಪ ಪಡೆಯುವ ಸಾಧ್ಯತೆ ಇರುತ್ತವೆ. ಈ ಹಿನ್ನೆಲೆಯಲ್ಲಿ ಗಂಗಾವತಿ ನಗರ ಪೊಲೀಸ್ ಠಾಣೆ ರೌಡಿಗಳಾದ ಸಚಿನ ನಿಂಬಲಗುಂದಿ, ಸಂದೀಪ ತಂದೆ ಸಂಜೀವಪ್ಪ, ಅರ್ಬಜ್ ಖಾನ್ ತಂದೆ ಸರ್ದಾರಖಾನ್‌ ಇವರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಂಡು, ಕೃತ್ಯವೆಸಗುವ ಸಾಧ್ಯತೆ ಇರುತ್ತದೆ. ಗಣೇಶ ಹಬ್ಬದ ಮೆರವಣಿಗೆಯಲ್ಲಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡುವ ಸಾಧ್ಯತೆ ಇರುತ್ತದೆ. ಈ ರೌಡಿಗಳ ಚಟುವಟಿಕೆ ನಿಯಂತ್ರಸಲು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಮೂವರನ್ನು ಗಡಿಪಾರು ಮಾಡಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಕಲಂ 54, 55 ಕರ್ನಾಟಕ ಪೊಲೀಸ್ ಕಾಯ್ದೆ 1963 ರಡಿ ಕೊಪ್ಪಳ ಎಸಿ ಅವರು ಸೆ.04 ರಿಂದ ಸೆ. 30ರ ವರೆಗೂ ಕೊಪ್ಪಳ ಜಿಲ್ಲೆಯಿಂದ ಕ್ರಮವಾಗಿ ಬೀದರ್ ಜಿಲ್ಲೆ, ಚಾಮರಾಜನಗರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: Arrested: ಶಿವಾಜಿ ಪ್ರತಿಮೆ ಕುಸಿತ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಜಯದೀಪ್ ಆಪ್ಟೆ ಬಂಧನ

ಟಾಪ್ ನ್ಯೂಸ್

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

Udupi1

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

1-mmmm

PM Modi ಕಿಡಿ ; ರೊಹಿಂಗ್ಯಾ ಜತೆ ಜೆಎಂಎಂ ಶಾಮೀಲಾಗಿದೆ

1-weewqeqwe

Bihar;ಹೊಲಕ್ಕೆ ನುಗ್ಗಿದ ರೈಲು ಎಂಜಿನ್‌: ನೆಟ್ಟಿಗರ ಕಟು ಟೀಕೆ

Malpe

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Democracy Day ವಿಶ್ವದಾಖಲೆಯ ಪುಟ ಸೇರಿದ ಬೃಹತ್‌ ಮಾನವ ಸರಪಳಿ

Democracy Day ವಿಶ್ವದಾಖಲೆಯ ಪುಟ ಸೇರಿದ ಬೃಹತ್‌ ಮಾನವ ಸರಪಳಿ

CM Siddaramaiah ವಿಚ್ಛಿದ್ರಕಾರಿ ಶಕ್ತಿಗಳ ನಾಶಕ್ಕೆ ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ

CM Siddaramaiah ವಿಚ್ಛಿದ್ರಕಾರಿ ಶಕ್ತಿಗಳ ನಾಶಕ್ಕೆ ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ

U.T. Khader; ಭಾರತದಲ್ಲಿ ಸಮಸ್ಯೆ ಆಧಾರಿತ ಚರ್ಚೆಗಳಾಗಲಿ

U.T. Khader; ಭಾರತದಲ್ಲಿ ಸಮಸ್ಯೆ ಆಧಾರಿತ ಚರ್ಚೆಗಳಾಗಲಿ

Yadagiri  ಶಾಸಕರನ್ನೇಕೆ ಇನ್ನೂ ಬಂಧಿಸಿಲ್ಲ ? ಎನ್‌. ರವಿಕುಮಾರ್‌

Yadagiri ಶಾಸಕರನ್ನೇಕೆ ಇನ್ನೂ ಬಂಧಿಸಿಲ್ಲ ? ಎನ್‌. ರವಿಕುಮಾರ್‌

1-ffrr

CM ಸಿದ್ದರಾಮಯ್ಯ ಅವರಿದ್ದ ವೇದಿಕೆಗೆ ನುಗ್ಗಿದ ಯುವಕ:ಎಳೆದೊಯ್ದ ಭದ್ರತಾ ಸಿಬಂದಿ

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

train-track

Landslide: ತುರ್ತು ಬ್ರೇಕ್‌ ಹಾಕಿದ ಕಾರಣ ತಪ್ಪಿದ ರೈಲು ದುರಂತ

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

1-ghhh

ಹೃದಯಾಘಾತ: ಶಾಲೆಯಲ್ಲೇ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

CBI

Trainee doctor ಹ*ತ್ಯೆ ಕೇಸು: ಮಾಜಿ ಪ್ರಿನ್ಸಿ ಸಂದೀಪ್‌ 17ರ ವರೆಗೆ ಸಿಬಿಐ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.