Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ


Team Udayavani, Jul 5, 2024, 10:43 AM IST

3-kushtagi

ಕುಷ್ಟಗಿ: ಕಳೆದ 18 ವರ್ಷಗಳಿಂದ ಬೆಳೆಸಿದ್ದ ಶ್ರೀಗಂಧದ 13 ಮರಗಳನ್ನು ಕಳವು ಮಾಡಿದ ಪ್ರಕರಣ ತಾಲೂಕಿನ ನಡುವಲಕೊಪ್ಪ ಸೀಮಾದಲ್ಲಿ ಬೆಳಕಿಗೆ ಬಂದಿದೆ.

ಕುಷ್ಟಗಿಯ ನಿವೃತ್ತ ಪ್ರೊಫೆಸರ್ ಎಸ್.ಬಿ. ಶಿವನಗುತ್ತಿ, ತಮ್ಮ ಜಮೀನಿನಲ್ಲಿ ತೇಗದ ಜೊತೆಗೆ ಶ್ರೀಗಂಧ ನಾಟಿ ಮಾಡಿದ್ದರು. ಸ.ನಂ.11/2 ರ 5 ಎಕರೆ 28 ಗುಂಟೆ ವಿಸ್ತೀರ್ಣದಲ್ಲಿ 4,500 ತೇಗ, 1 ಸಾವಿರ ಶ್ರೀಗಂಧವನ್ನು ಹನಿ ನೀರಾವರಿ ಆಶ್ರೀತವಾಗಿ ಬೆಳೆದಿದ್ದರು.

ಕಳೆದ 5 ವರ್ಷಗಳಿಂದ ಶ್ರೀಗಂಧದ ಮರಗಳಿಗೆ ಕಳ್ಳರ ಕಾಟ ಆಗಾಗ್ಗೆ ನಡೆಯುತ್ತಿದ್ದ ಹಿನ್ನೆಲೆ ಶೇ.50 ರಷ್ಟು ಶ್ರೀಗಂಧ ಕಳ್ಳರ ಪಾಲಾಗಿದೆ. ಸದ್ಯ 371 ಗಿಡಗಳು ಮಾತ್ರ ಉಳಿದಿದ್ದು ಇವುಗಳ‌ ಮೇಲೆ ಕಳ್ಳರ ಕಣ್ಣು ಬಿದ್ದಿದೆ‌. ಇನ್ನೇನು ಕೆಲ ದಿನಗಳಲ್ಲಿ ಶ್ರೀಗಂಧ ಕಟಾವಿಗೆ ಕರ್ನಾಟಕ ಸೋಪ್ ಡಿಟರ್ಜಂಟ್ ಲಿಮಿಟೆಡ್ ನೊಂದಿಗೆ ಒಪ್ಪಂದವಾಗಿತ್ತು. ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಗಿಡಗಳ ಕಟಾವು ಮಾತ್ರ ಬಾಕಿ ಇತ್ತು.

ಕಳೆದ ಬುಧವಾರ ತಡರಾತ್ರಿ 13 ಮರಗಳನ್ನು ಕಳ್ಳರು ಬುಡ ಸಮೇತ ನೆಲಕ್ಕುರುಳಿಸಿದ್ದಾರೆ. ಕಾಂಡದಲ್ಲಿ ಹಾಟ್ ವುಡ್ ಇರುವ ಎರಡು ಮರಗಳ ಕಾಂಡಗಳನ್ನು ಹೊತ್ತೊಯ್ದಿದ್ದಾರೆ. ಉಳಿದ 11 ಮರಗಳ‌ ಬುಡ ಕತ್ತರಿಸಿ ಹಾಗೆಯೇ ಬಿಟ್ಟಿದ್ದಾರೆ. ಕಳ್ಳರು ಬ್ಯಾಟರಿಚಾಲಿತ ಮಿಷನ್‌ ನಿಂದ ಕೊರೆದರೆ ಎಲ್ಲಿ ಶಬ್ದವಾಗುತ್ತದೆ ಎಂದು ಗರಗಸ ಇಲ್ಲವೇ ಎಕ್ಸೋ ಬ್ಲೇಡ್ ಬಳಸಿ ಮರಗಳನ್ನು ಕೆಡವಿರುವುದಾಗಿ ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ವೃತ್ತಿ ನಿರತರಿಗೆ ಸ್ಥಳೀಯರು ಬೆಂಬಲಿಸಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಕ್ರೈಂ‌ ಪಿಎಸ್‌ಐ ಮಾನಪ್ಪ ವಾಲ್ಮೀಕಿ, 112 ವಾಹನ ಸಿಬ್ಬಂದಿ  ಪ್ರಾದೇಶಿಕ ವಲಯ ಪ್ರಭಾರ ಅರಣ್ಯಾಧಿಕಾರಿ ರಿಯಾಜ್ ಅಹ್ಮದ್, ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲಿಸಿ ತನಿಖೆಗೆ ಮುಂದಾಗಿದ್ದಾರೆ.

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು,18 ವರ್ಷಗಳವರೆಗೆ  ಶ್ರೀಗಂಧ ಬೆಳೆದು ಇದೀಗ ಕಳ್ಳರ ಪಾಲಾಗಿದೆ‌ ರೈತರು ಸ್ವಂತ ಜಮೀನಿನಲ್ಲಿ ಶ್ರೀಗಂಧ ಬೆಳೆದರೂ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಕಟಾವಣೆ ಮಾಡಬೇಕಿದೆ. ಸರ್ಕಾರದ ಬಿಗಿ ಕ್ರಮಗಳಿಂದ ಈ ಬೆಳೆ ಬೆಳೆದರೂ ಸ್ವತಂತ್ರವಾಗಿ ಮಾರಾಟಕ್ಕೆ ಆಸ್ಪದವಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.

ಟಾಪ್ ನ್ಯೂಸ್

ASF

ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

1-frsasasas

Stag Beetle; ಆಡಿ ಕಾರಿಗಿಂತಲೂ ದುಬಾರಿ ಈ ಕೀಟ!

C-V-Anand

Governor ವಿರುದ್ಧ ಸುಳ್ಳು: ಕೋಲ್ಕತಾ ಕಮಿಷನರ್‌ ವಿರುದ್ಧ ಶಿಸ್ತು ಕ್ರಮ?

1-qwewewqe

Report; ನಿಧಾನವಾಗಿ ಹಿಮ್ಮುಖವಾಗಿ ತಿರುಗುತ್ತಿದೆ ಭೂ ತಿರುಳು!

Bantwal ತಾಲೂಕಿನಲ್ಲಿ 6 ತಿಂಗಳಲ್ಲಿ 35 ಮಂದಿಗೆ ಡೆಂಗ್ಯೂ

Bantwal ತಾಲೂಕಿನಲ್ಲಿ 6 ತಿಂಗಳಲ್ಲಿ 35 ಮಂದಿಗೆ ಡೆಂಗ್ಯೂ

1-aaee

Northern India: 20 ವರ್ಷಗಳಲ್ಲಿ ಅಂತರ್ಜಲ ಭಾರೀ ಮಟ್ಟದಲ್ಲಿ ಇಳಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

Karadi sanganna

Mining; ಸಂಡೂರ ಪ್ರದೇಶದಲ್ಲಿ ಗಣಿಗಾರಿಕೆಗೆ ನಮ್ಮ ವಿರೋಧವಿದೆ: ಕರಡಿ ಸಂಗಣ್ಣ

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Gangavathi ವಿರೂಪಾಪೂರಗಡ್ಡಿ: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

5-tavaragera

Tavaragera: ಕಾರು ಅಡ್ಡಗಟ್ಟಿ ಹಾಡಹಗಲೇ 5 ಲಕ್ಷ ರೂ. ದರೋಡೆ !

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

ASF

ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್‌ ಅಸ್ತ್ರ

1-frsasasas

Stag Beetle; ಆಡಿ ಕಾರಿಗಿಂತಲೂ ದುಬಾರಿ ಈ ಕೀಟ!

C-V-Anand

Governor ವಿರುದ್ಧ ಸುಳ್ಳು: ಕೋಲ್ಕತಾ ಕಮಿಷನರ್‌ ವಿರುದ್ಧ ಶಿಸ್ತು ಕ್ರಮ?

1-qwewewqe

Report; ನಿಧಾನವಾಗಿ ಹಿಮ್ಮುಖವಾಗಿ ತಿರುಗುತ್ತಿದೆ ಭೂ ತಿರುಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.